Breaking News
Home / ಸಿನೆಮಾ (page 44)

ಸಿನೆಮಾ

ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ.

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅಭಿಮಾನಿಯನ್ನು ತಳ್ಳಿದ ವ್ಯಕ್ತಿಯೊಬ್ಬರಿಗೆ ತಲೆ ಮೇಲೆ ದರ್ಶನ್ ಬಾರಿಸಿದ ವಿಡಿಯೋವೊಂದು ವೈರಲ್ ಆಗಿದೆ. ದರ್ಶನ್ ಅವರ ಹುಟ್ಟುಹಬ್ಬವನ್ನು ಅವರು ಅಭಿಮಾನಿಗಳು ಪ್ರತೀ ವರ್ಷ ಹಬ್ಬದಂತೆ ಆಚರಣೆ ಮಾಡುತ್ತಾರೆ. ಇಂದು ಕೂಡ ದರ್ಶನ್ ಅವರಿಗೇ ಶುಭಾಶಯ ಕೋರಲು ಅವರ ಸಾವಿರಾರು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ಈ ವೇಳೆ …

Read More »

 ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಜೊತೆಗೆ ಪುಟ್ಟ ಅಭಿಮಾನಿಯ ಆಸ್ಪತ್ರೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 16 ವರ್ಷದ ಬಾಲಕ ಆದರ್ಶ್, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. …

Read More »

ಅಂಧ ಸಹೋದರಿಯರಿಗೆ ಲೈಫ್ ಲಾಂಗ್ ಆಹಾರ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ಅರ್ಜುನ್ ಜನ್ಯಾ.ಈ ಸಕತ್ ಸ್ಟೋರಿ ನೋಡಿ.

ಮಧುಗಿರಿಯ ರತ್ನಮ್ಮ ಮತ್ತು ಮಂಜಮ್ಮ. ಅಂಧ ಸಹೋದರಿಯರು ಅದರ ಜೊತೆಗೆ ಬಡತನ. ಜೀವನ ನಿರ್ವಹಣೆಗಾಗಿ ಮಧುಗಿರಿಯ ಮಾರಮ್ಮನ ಗುಡಿಯ ಮುಂದೆ ಹಾಡು ಹಾಡುವರು. ಅವರ ಹಾಡು ಕೇಳಿದವರು ನೀಡುವ ಚಿಲ್ಲರೆಯೇ ಅವರ ಜೀವನಾಧಾರ. ಇವರು ಮೂರು ಜನ ಸಹೋದರಿಯರು. ಮೂವರು ಕೂಡಾ ಅಂಧರಾಗಿದ್ದು, ಅಜ್ಜಿಯು ಅವರ ಆರೈಕೆ ಮಾಡುತ್ತಾರೆ. ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಡಿದ ಅರಳುವ ಹೂವುಗಳೇ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಇದನ್ನು ನೋಡಿರುವ ಜೀ ಕನ್ನಡ …

Read More »

ಬೆಂಗಳೂರು: ಎಲ್ಲರೂ ಎದುರು ನೋಡುತ್ತಿರುವ ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕ ಯಾವುದು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.  

ಕೆಲವು ಮೂಲಗಳ ಪ್ರಕಾರ ಕೆಜಿಎಫ್ 2 ಬಹುತೇಕ ಇದೇ ವರ್ಷ ಜುಲೈ 30 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ ಇನ್ನೂ ಚಿತ್ರೀಕರಣ ಪೂರ್ತಿಯಾಗಿಲ್ಲ. ಅಷ್ಟೇ ಅಲ್ಲದೆ, ಅಭಿಮಾನಿಗಳು ಈಗ ಟೀಸರ್ ಗಾಗಿ ಕಾತುರದಿಂದ ಕಾಯತ್ತಿದ್ದಾರೆ. ಕೆಜಿಎಫ್ 2 ನ ಎರಡು ಪೋಸ್ಟರ್ ಗಳು ಮಾತ್ರ ಇದುವರೆಗೆ ಬಿಡುಗಡೆಯಾಗಿವೆ.

Read More »

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶಿಸಿ ತಾವೇ ನಟಿಸಿದ ಲವ್ ಮಾಕ್ ಟೈಲ್ ಸಿನಿಮಾಗೆ ಮೊದಲ ಎರಡು ದಿನ ಜನರ ನೀರಸ ಪ್ರತಿಕ್ರಿಯೆ ನೋಡಿ ಕಿಚ್ಚ ಸುದೀಪ್ ಬೇಸರಗೊಂಡಿದ್ದರು

ಲವ್ ಮಾಕ್ ಟೈಲ್ ಬಿಡುಗಡೆಯಾದ ತಕ್ಷಣ ಜನರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಚಿತ್ರದ ಕಲೆಕ್ಷನ್ ಡಲ್ ಆಗಿತ್ತು. ಇದರಿಂದಾಗಿ ಮಾಲ್ ಗಳಲ್ಲಿ ಶೋಗಳು ರದ್ದಾಗುವ ಸ್ಥಿತಿಗೆ ಬಂದಿತ್ತು. ಕೊನೆಗೆ ಕೃಷ್ಣ ಮಾಲ್ ಮುಖ್ಯಸ್ಥರಿಗೆ ವೀಕೆಂಡ್ ನಲ್ಲಿ ಕನಿಷ್ಠ ಒಂದು ಶೋ ಇಡುವಂತೆ ಮನವಿ ಮಾಡಿದ್ದಾರೆ. ವೀಕೆಂಡ್ ನಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ಇದೀಗ ಪ್ರದರ್ಶನ ಹೆಚ್ಚಿಸಲು ಮುಂದಾಗಿದ್ದಾರೆ. ಇದರಿಂದ ಡಾರ್ಲಿಂಗ್ ಕೃಷ್ಣ ಮೊಗದಲ್ಲಿ ಗೆಲುವಿನ ನಗೆ ಮೂಡಿದೆ. …

Read More »

ಆಡಂಬರ, ಅಬ್ಬರ ಇಲ್ಲದ ಹಿತವಾದ ಪ್ರೇಮ್ ಕಹಾನಿ ‘ದಿಯಾ’

6-5=2 ಹಾರಾರ್ ಚಿತ್ರದ ಸೂಪರ್ ಸಕ್ಸಸ್ ನಿರ್ದೇಶಕ ಅಶೋಕ್ ಕೆ.ಎಸ್ ಈ ಬಾರಿ ‘ದಿಯಾ’ ಚಿತ್ರದ ಮೂಲಕ ಟ್ರಾಯಂಗಲ್ ಲವ್ ಸ್ಟೋರಿ ಹೇಳ ಹೊರಟಿದ್ದಾರೆ. ಇಲ್ಲೂ ಹಾರಾರ್ ಎಳೆ ಇದ್ದು ಪ್ರೇಕ್ಷಕರಿಗೆ ಥ್ರಿಲ್ ನೀಡೋದ್ರಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಹೊಸತಂಡ ಕಟ್ಟಿಕೊಂಡು ಹೊಸ ಕಥೆ ಹೇಳ ಹೊರಟಿರೋ ದಿಯಾ ಚಿತ್ರ ಇಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣ ಹೊಸತನದಿಂದ ಕೂಡಿರೋ ರೋಮ್ಯಾಂಟಿಕ್ ಪ್ರೇಮ್ ಕಹಾನಿ ದಿಯಾ ಚಿತ್ರದಲ್ಲಿದೆ. …

Read More »

ಬಿಗ್ ಬಾಸ್ ಮುಕ್ತಾಯ.. ನಿರೀಕ್ಷೆಗಳೆಲ್ಲಾ ಸುಳ್ಳಾಯ್ತು.. ಗೆದ್ದವರು ಇವರೇ ನೋಡಿ..

ಬಿಗ್ ಬಾಸ್ ಮುಕ್ತಾಯ.. ನಿರೀಕ್ಷೆಗಳೆಲ್ಲಾ ಸುಳ್ಳಾಯ್ತು.. ಗೆದ್ದವರು ಇವರೇ ನೋಡಿ.. ಅಂತೂ ಬಿಗ್ ಬಾಸ್ ಸೀಸನ್ 7 ಮುಕ್ತಾಯಗೊಂಡಿದೆ.. 18 ಜನ ಸದಸ್ಯರ ಪಟ್ಟಿಯಲ್ಲಿ ಕೊನೆಯಲ್ಲಿ ಉಳಿದು ಗೆಲುವಿನ ಪಟ್ಟ ಒಬ್ಬರಿಗೆ ದಕ್ಕಾಗಿದೆ.. ಹೌದು ಬಿಗ್ ಬಾಸ್ ಸೀಸನ್ 7 ರ ಗ್ರಾಂಡ್ ಫಿನಾಲೆಯ ಸಂಪೂರ್ಣ ಶೂಟಿಂಗ್ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ಪ್ರಕಟಿಸಲಾಗಿದೆ. ಬಿಗ್ ಬಾಸ್ ನ ಈ ಸೀಸನ್ ಹಲವಾರು ವಿಶೇಷತೆಗಳಿಂದ ಕೂಡಿತ್ತು.. ಈ ಬಾರಿ …

Read More »

ಸರಳ #ವಿವಾಹದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ #ಚೇತನ್_ಹಾಗು_ಮೇಘ ದಂಪತಿ.

ಬೆಂಗಳೂರು: ನಟ ಚೇತನ್ ಅವರು ತನ್ನ ಬಾಳ ಸಂಗಾತಿ ಮೇಘ ಅವರೊಂದಿಗೆ ಗಾಂಧಿನಗರದ ಉಪ ರಿಜಿಸ್ಟ್ರಾರ್ ಕಛೇರಿಯಲ್ಲಿ ಇಂದು ಸರಳ ವಿವಾಹದ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಸವಣ್ಣ, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ನಟ ಚೇತನ್ ಅವರು, ಆಡಂಬರದ ಮದುವೆಯ ಗೋಜಿಗೆ ಹೋಗದೆ ಸಂಬಂಧಿಕರು, ಆತ್ಮೀಯ ಒಡನಾಡಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. …

Read More »

ಇತ್ತೀಚೆಗಷ್ಟೇ ಕೀನ್ಯಾ ಕಾಡಿನಲ್ಲಿ ವೈಲ್ಡ್‌ಲೈಫ್‌ ಫೋಟೋಗಳನ್ನು ಸೆರೆಹಿಡಿದಿದ್ದ ದರ್ಶನ್

ಚಾಲೇಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟೀಂ ಮತ್ತೆ ಕಾಡಿನತ್ತ ಮುಖಮಾಡಿದ್ದು, ಈ ಬಾರಿ ಉತ್ತರಾಖಂಡ್‍ನ ಸತ್ತಲ್ ಫಾರೆಸ್ಟ್ ನಲ್ಲಿ ವನ್ಯಜೀವಿಗಳ ಛಾಯಾಗ್ರಹಣ ಮಾಡಲಿದೆ. ಹೌದು. ಇತ್ತೀಚೆಗಷ್ಟೇ ಕೀನ್ಯಾ ಕಾಡಿನಲ್ಲಿ ವೈಲ್ಡ್‌ಲೈಫ್‌ ಫೋಟೋಗಳನ್ನು ಸೆರೆಹಿಡಿದಿದ್ದ ದರ್ಶನ್ ಈಗ ಉತ್ತರಾಖಂದದ ಕಾಡಿನತ್ತ ಕ್ಯಾಮರಾ ಹಿಡಿದು ಹೊರಟಿದ್ದಾರೆ. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದಾರೆ. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ …

Read More »

ಸಾಮಾಜಿಕಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ

ಬೆಂಗಳೂರು: ಸಾಮಾಜಿಕಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ. ಅವರಿವರ ಕಾಲು ಹಿಡಿಯಬೇಕಿಲ್ಲ. ನಿನ್ನ ವೋಟ್ ನಿನ್ನ ಅಸ್ತ್ರ ಎಂದು ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ‌ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ಉಪೇಂದ್ರ, ‘ನಿಮ್ಮ ದೇಶದ ಭವಿಷ್ಯ ನಿಮ್ಮ ಬೆರಳ ತುದಿಯಲ್ಲಿಯೇ ಇದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ. ಅವರಿವರ ಕಾಲು ಹಿಡಿಯಬೇಕಿಲ್ಲ. ನಿನ್ನ ವೋಟ್ ನಿನ್ನ ಅಸ್ತ್ರ..ಅರ್ಥ …

Read More »