Breaking News
Home / ಜಿಲ್ಲೆ / ಬೆಳಗಾವಿ / ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ

ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ

Spread the love

ಸಂಗೊಳ್ಳಿ (ಬೈಲಹೊಂಗಲ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ದಿನಗಳಕಾಲ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವ-2024ಕ್ಕೆ ಗುರುವಾರ ವೈಭವದ ತೆರೆ ಬಿದ್ದಿತು. ಎರಡನೇ ದಿನ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಪಂದ್ಯಗಳನ್ನು ಕಂಡು ಜನ ರೋಮಾಂಚನಗೊಂಡರು.

 

ರಾಯಣ್ಣ ವೇದಿಕೆಯಲ್ಲಿ ಇಡೀ ದಿನ ನಡೆದ ಸಂಗೀತ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳಿಗೆ ಮನಸೋಲದವರೇ ಇಲ್ಲ. ಬೆಳಿಗ್ಗೆ ಅಶೋಕ ಎಮ್ಮಿ ಅವರ ತಂಡ ಭಜನಾ ಪದಗಳನ್ನು ಪ್ರಸ್ತುತಪಡಿಸಿ ರಾಯಣ್ಣನ ತ್ಯಾಗ- ಬಲಿದಾನಗಳಿಗೆ ಕನ್ನಡಿ ಹಿಡಿಯಿತು. ಗ್ರಾಮೀಣ ಪ್ರದೇಶಗಳಿಂದ ಗುಂಪು ಗುಂಪಾಗಿ ಬಂದಿದ್ದ ಜನ ಭಜನಾ ಪದಗಳಲ್ಲಿ ರಾಯಣ್ಣನ ಶೂರತನವನ್ನು ಮನಗಂಡರು.

ಪಂಚಾಕ್ಷರಿ ಹಿರೇಮಠ ಅವರ ಸಂಗೀತವಂತೂ ಇನ್ನೂ ರಂಜಿಸಿತು. ರಾಜಕುಮಾರ ಸೂರ್ಯವಂಶಿ ತತ್ವಪದಗಳು, ಸನ್ನಿಂಗಪ್ಪ ಮೂಶನ್ನವರ ತಂಡದ ಡೊಳ್ಳಿನ ಪದಗಳು ಸಾಂ‍ಪ್ರದಾಯಿಕ ಕಲೆ- ಜೀವನ- ಸಂಸ್ಕೃತಿಯನ್ನು ಅನಾವರಣಗೊಳಿಸಿದವು. ನಂತರ ವೇದಿಕೆಗೆ ಬಂದ ಸುಧಾಕರ ಅವರು ಸುಗಮ ಸಂಗೀತದ ಮೂಲಕ ಹೊಸ ತಲೆಮಾರನ್ನೂ ರಂಜಿಸಿದರು.

ಪಾಂಡುರಂಗ ತಂಡದವರು ಪ್ರದರ್ಶಿಸಿದ ತೊಗಲು ಗೊಂಬೆ ಆಟವನ್ನು ಜನ ರೆಪ್ಪೆ ಮುಚ್ಚದಂತೆ ನೋಡಿದರು. ಗವಿಸಿದ್ದಯ್ಯ ಹುಳ್ಳಿಕೇರಿಮಠ ಲಾವಣಿ ಪದ, ಬನಶಂಕರಿ ಸಂಭ್ರಮ ಡಾನ್ಸ್ ತಂಡದ ನೃತ್ಯ ವೈವಿಧ್ಯ, ನಂದಕುಮಾರ ದೊಡವಾಡ ಗಾಯನ ಮೋಡಿ, ಶ್ರುತಿ ಪ್ಯಾಟಿ ತಂಡದ ಜನಪದ ಗೀತೆ, ಪ್ರಕಾಶ ತಂಡದ ಜೋಗತಿ ನೃತ್ಯಗಳು ಒಂದಕ್ಕಿಂತ ಒಂದು ಸೊಗಸಾಗಿ ಮೂಡಿಬಂದವು. ವರ್ಣಮಯ ವೇದಿಕೆಯಲ್ಲಿ ಈ ವಿವಿಧ ನೃತ್ಯ ರೂಪಕಗಳನ್ನು ಜನ ಇನ್ನಿಲ್ಲದಂತೆ ಆಕರ್ಷಿಸಿದರು.

ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘದ ಡೊಳ್ಳಿನ ಪದ, ಬೆಳಗಾವಿ ರೂಪಾ ಖಡಗಾವಿ ತತ್ವಪದ, ಸಂಗೊಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ನೃತ್ಯ ರೂಪಕ, ಆರಾಧ್ಯಾ ಸಂಪಗಾಂವ ನೃತ್ಯ, ಶಂಕರ ಬೆಣ್ಣೆ ತಂಡದ ಭಜನಾ ಪದ, ಯದಕುಮಾರ ತಂಡದ ನಾದಸ್ವರ, ಸಾಯಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ನೃತ್ಯ, ಚನ್ನಪ್ಪ ಕಾಂಬಳೆ ತಂಡದ ಜನಪದ ಗೀತೆ, ಪ್ರವೀಣ ಗಸ್ತಿ ತಂಡದ ನಗೆ ಹಬ್ಬ, ರಾಮು ಮೂಲಗಿ ಜನಪದ ಗೀತೆ, ಶಾರದಾ ಚಂಡೆ ಬಳಗದ ಚಂಡೆ ವಾದ್ಯ, ಸಂಜಯ ತಂಡದ ನೃತ್ಯ ವೈವಿಧ್ಯ ಗಮನ ಸೆಳೆದವು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ