Breaking News

ಬೆಳಗಾವಿಗೆ ಸಿಎಂ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ: ಆರ್. ಅಶೋಕ್ ಲೇವಡಿ

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಬೆಳಗಾವಿಗೆ ಬರುವ‌ ಮುನ್ನಾ ದಿನವೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜಿಲ್ಲೆಯ ವಿವಿಧ ಕಡೆ ಬೆಳೆ ಹಾನಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ, ರೈತರ ಸಮಸ್ಯೆ ಆಲಿಸಿದ ಅವರು, ರೈತರ ಸಂಕಷ್ಟ ಆಲಿಸಲು ಬಾರದೇಬೆಳಗಾವಿಗೆ ಬಿರಿಯಾನಿ ತಿನ್ನಲು ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಆರೋಪಿಸಿದರು‌. ಬೈಲಹೊಂಗಲ ತಾಲೂಕಿನ ನೇಸರಗಿ, ನಾಗನೂರ ಮತ್ತು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ರೈತರ ಜಮೀನುಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ …

Read More »

ಕಾವೇರಿ ಆರತಿ ನೆರವೇರಿಸಿದ ಪಂಡಿತರಿಗೆ ಸನ್ಮಾನ: ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾವೇರಿ ಆರತಿ ನೆರವೇರಿಸಿದ ಪಂಡಿತರಿಗೆ ಸನ್ಮಾನ: ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿಸಿಎಂ ಡಿ.ಕೆ. ಶಿವಕುಮಾರ್   ಬೆಂಗಳೂರು: ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮಂಡ್ಯ ಜಿಲ್ಲೆ ಕೆಆರ್​​ಎಸ್​ನಲ್ಲಿ ಐತಿಹಾಸಿಕ ಕಾವೇರಿ ಆರತಿಯನ್ನು ಅಭೂತಪೂರ್ಣವಾಗಿ ನೆರವೇರಿಸಿದ ಪಂಡಿತ, ಪುರೋಹಿತರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸನ್ಮಾನಿಸಿದರು. ಮಂಡ್ಯ ಜಿಲ್ಲೆ ಕೆಆರ್​​ಎಸ್​ನ ಬೃಂದಾವನ ಉದ್ಯಾನದಲ್ಲಿ ಸತತ 5 ದಿನಗಳ ಕಾಲ ಕಾವೇರಿ ಆರತಿಯಲ್ಲಿ ಪಾಲ್ಗೊಂಡ 55 …

Read More »

‘ಆರ್ಬಿಟರ್’ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಿದ ಹೈ-ಟೆಕ್ ಟಿ.ವಿ.ಎಸ್ ದಸರಾದಿಂದ ದೀಪಾವಳಿ ವರೆಗೆ ವಿಶೇಷ ಆಫರ್ ಇಂದೇ ತ್ವರೆ ಮಾಡಿ…

‘ಆರ್ಬಿಟರ್’ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಿದ ಹೈ-ಟೆಕ್ ಟಿ.ವಿ.ಎಸ್ ದಸರಾದಿಂದ ದೀಪಾವಳಿ ವರೆಗೆ ವಿಶೇಷ ಆಫರ್ ಇಂದೇ ತ್ವರೆ ಮಾಡಿ… ‘ಆರ್ಬಿಟರ್’ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಿದ ಹೈ-ಟೆಕ್ ಟಿ.ವಿ.ಎಸ್ ದಸರಾದಿಂದ ದೀಪಾವಳಿ ವರೆಗೆ ವಿಶೇಷ ಆಫರ್ ಇಂದೇ ತ್ವರೆ ಮಾಡಿ… ಹೊಸ ಆರ್ಬಿಟರ್ ವಾಹನ ನಿಮ್ಮದಾಗಿಸಿಕೊಳ್ಳಿ ಹೈ-ಟೆಕ್ ಟಿ.ವಿ.ಎಸ್ ವತಿಯಿಂದ ‘ಆರ್ಬಿಟರ್’ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಲಾಗಿದ್ದು, ಅಲ್ಲದೇ ದಸರಾ ಮತ್ತು ದೀಪಾವಳಿಯ ವರೆಗೆ ವಿಶೇಷ ಆಫರ್ ಮತ್ತು …

Read More »

22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ…ಮಾಜಿ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ…

22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ…ಮಾಜಿ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ… ಮಾಜಿ ಸೈನಿಕನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು ಹಾಲಗಿಮರ್ಡಿಯ ಯೋಧ ಮಂಜುನಾಥ ಪಟಾತ್ ಜೈ ಘೋಷಣೆಗಳನ್ನು ಕೂಗಿ ಸಂಭ್ರಮ ಮಂಜುನಾಥ ರಾಮಪ್ಪ ಪಟಾತ್ ಅವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಸ್ವಗ್ರಾಮಕ್ಕೆ ಮರಳಿದ್ದು, ಬೆಳಗಾವಿಯಲ್ಲಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬೆಳಗಾವಿ ಜಿಲ್ಲೆಯ ಹಾಲಗಿಮರ್ಡಿಯ ಮಂಜುನಾಥ ರಾಮಪ್ಪ ಪಟಾತ್ …

Read More »

ಬೆಳೆ ಹಾನಿಗೆ ಪರಿಹಾರ ಘೋಷಿಸದ ಸಿಎಂಗೆ ನಮ್ಮ ಸ್ವಾಗತ; ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

ಸಿಎಂ ನಾಳೆ ಹೊಸ ಜಿಲ್ಲೆಗಳನ್ನು ಘೋಷಿಸಲಿ… ಬೆಳೆ ಹಾನಿಗೆ ಪರಿಹಾರ ಘೋಷಿಸದ ಸಿಎಂಗೆ ನಮ್ಮ ಸ್ವಾಗತ; ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಜಿಲ್ಲೆ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕೆಂಬ ಬೇಡಿಕೆ ಸಿಎಂ ನಾಳೆ ಹೊಸ ಜಿಲ್ಲೆಗಳನ್ನು ಘೋಷಿಸಲಿ ಬೆಳೆ ಹಾನಿಗೆ ಪರಿಹಾರ ಘೋಷಿಸದ ಸಿಎಂಗೆ ನಮ್ಮ ಸ್ವಾಗತ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಬೆಳಗಾವಿ ಜಿಲ್ಲೆಯ ಭೌಗೋಳಿಕವಾಗಿ ದೊಡ್ಡದಾಗಿದೆ‌. ಶನಿವಾರ ಬೆಳಗಾವಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಬೇಕು …

Read More »

ನಂದಗಡದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆ ನೆರವೇರಿಸಿದ ಶಾಸಕ ವಿಠ್ಠಲ ಹಲಗೇಕರ

ನಂದಗಡದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆ ನೆರವೇರಿಸಿದ ಶಾಸಕ ವಿಠ್ಠಲ ಹಲಗೇಕರ  -ಖಾನಾಪೂರ ತಾಲೂಕಿನ ನಂದಗಡದ ಗ್ರಾಮ ಪಂಚಾಯಿತಿಯ ನೂತನ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆಯನ್ನು ಶಾಸಕ ಮಹಾಲಕ್ಷ್ಮಿ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಹಲಗೇಕರ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಪೋಟೋ ಪೂಜೆ ಸಲ್ಲಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ …

Read More »

ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು.

ಹುಕ್ಕೇರಿ : ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು. ನಮ್ಮ ನಮ್ಮ ಮನೆಯ ದೇವರನ್ನು, ಗುರು ಮಠಗಳನ್ನು ಊರಿನ ಪರಂಪರೆಯನ್ನು ಬೀಡಬೇಡಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ದಸರಾ ಸಂದೇಶ ನೀಡಿದರು. ಹುಕ್ಕೇರಿ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಹಿರೇಮಠದ ದಸರಾ ಉತ್ಸವದಲ್ಲಿ ಗುಡ್ಡಾಪೂರ ದಾನಮ್ಮಾ ದೇವಿ ಪುರಾಣ ಪ್ರವಚನ, ಚಂಡಿಕಾ ಹೋಮ, ಗುರುಶಾಂತೇಶ್ವರ ರಥೋತ್ಸವ ಹಾಗೂ ದೇವಿ …

Read More »

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿ ರಮೇಶ್ ವಿದೇಶ ಪ್ರವಾಸದಿಂದ ನೇರವಾಗಿ ಬೆಳಗಾವಿಗೆ ಬಂದು ವಿವಿಧ ನಾಯಕರೊಂದಿಗೆ ಸಮಾಲೋಚನೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿ ನಡೆದಿದ್ದು, ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ವಿದೇಶ ಪ್ರವಾಸದಲ್ಲಿದ್ದ ಶಾಸಕ ರಮೇಶ್ ಜಾರಕಿಹೊಳಿ ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರದಲ್ಲಿ ಕತ್ತಿ ಬಣ ಗೆಲುವು ಸಾಧಿಸುತ್ತಿದ್ದಂತೆ ಎಚ್ಚೆತ್ತಕೊಂಡ ರಮೇಶ್ ವಿದೇಶ ಪ್ರವಾಸದಿಂದ ನೇರವಾಗಿ ಬೆಳಗಾವಿಗೆ ಬಂದು ವಿವಿಧ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.

Read More »

ದೇವರಗಟ್ಟು ಬನ್ನಿ ಉತ್ಸವದಲ್ಲಿ ಬಡಿಗೆಗಳಿಂದ ಕಾದಾಟ ಇಬ್ಬರು ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

ಬಳ್ಳಾರಿ/ಆಂಧ್ರ ಪ್ರದೇಶ: ಹಬ್ಬ ಒಂದೇ ಆದರೂ ಅವುಗಳ ಆಚರಣೆಯ ವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ. ಮೈಸೂರಿನಲ್ಲಿ ವಿಜಯದಶಮಿಯನ್ನು ಅಂಬಾರಿ ಮೇಲೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನಿಟ್ಟು ವಿಜೃಂಭಣೆಯಿಂದ ಜಂಬೂ ಸವಾರಿ ಮೆರವಣಿಗೆ ನಡೆಸಿದರೆ, ರಾಜ್ಯದ ಗಡಿ ಭಾಗವಾದ ದೇವರ ಗಟ್ಟು ಎಂಬಲ್ಲಿ ಇದರ ಆಚರಣೆ ವಿಭಿನ್ನ ಅಷ್ಟೇ ಅಲ್ಲ, ವಿಚಿತ್ರವೂ ಕೂಡಾ. ಇಲ್ಲಿ ವಿಜಯ ದಶಮಿಯ ವೇಳೆ ದೇವರ ಉತ್ಸವ ಮೂರ್ತಿಗಾಗಿ ಗ್ರಾಮಸ್ಥರ ನಡುವೆ ಬಡಿಗೆಗಳಿಂದ ಹೊಡೆದಾಟವೇ ನಡೆಯುತ್ತದೆ. ಇದು ನಿಮಗೆ ಅಚ್ಚರಿ …

Read More »

ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಶಿವಮೊಗ್ಗ: ಮಗಳನ್ನು ಕೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್​ನಲ್ಲಿ ನಡೆದಿದೆ. ಮೆಗ್ಗಾನ್ ಬೋಧನಾಸ್ಪತ್ರೆಯ ಲ್ಯಾಬ್​ನ ಟೆಕ್ನಿಷಿಯನ್ ರಾಮಣ್ಣ ಎಂಬವರ ಪತ್ನಿ ಶೃತಿ(38) ತನ್ನ 11 ವರ್ಷದ ಮಗಳು ಪೂರ್ವಿಕಾಳ ತಲೆಗೆ ಹಲ್ಲೆ ಮಾಡಿ ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪತಿ ರಾಮಣ್ಣ ಕಳೆದ ರಾತ್ರಿ ನೈಟ್ ಡ್ಯೂಟಿಗೆಂದು ಆಸ್ಪತ್ರೆ ಹೋಗಿದ್ದರು. ಡ್ಯೂಟಿ ಮುಗಿಸಿಕೊಂಡು ಬಂದಾಗ ಮನೆಯ ಬಾಗಿಲು ತೆಗೆಯದೇ ಇದ್ದುದರಿಂದ ಹಿಂಬಾಗಿಲು ಒಡೆದು ಒಳಗೆ …

Read More »