Breaking News

ಏ.10 ರಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ; ರಾಜೇಂದ್ರ ಜೈನ್

ಏ.10 ರಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ; ರಾಜೇಂದ್ರ ಜೈನ್ ಜೈನ ಧರ್ಮದ 24 ನೇ ತೀರ್ಥಂಕರರಾದ ಭಗವಾನ ಮಹಾವೀರರ 2624 ನೇ ಜನ್ಮ ಕಲ್ಯಾಣಕ ಮಹೋತ್ಸವವನ್ನು ಇದೇ ಏಪ್ರಿಲ 10 ರಂದು ಸಂಭ್ರಮ ಸಡಗರದಲ್ಲಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನ್ಮ ಕಲ್ಯಾಣಕ ಮಹೋತ್ಸವ ಮಧವರ್ತಿ ಉತ್ಸವ ಸಮಿತಿಯ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ್ ಅವರು ಇಂದಿಲ್ಲಿ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …

Read More »

ತುಮಕೂರು ಸಿದ್ಧಗಂಗಾ ಶ್ರೀಗಳ 118ನೇ ಜಯಂತಿ; ಗುರುವಂದನಾ ಕಾರ್ಯಕ್ರಮ

ತುಮಕೂರು ಸಿದ್ಧಗಂಗಾ ಶ್ರೀಗಳ 118ನೇ ಜಯಂತಿ; ಗುರುವಂದನಾ ಕಾರ್ಯಕ್ರಮ ಶಿವಕುಮಾರ ಸ್ವಾಮೀಗಳು ನಡೆದಾಡಿದ ಭೂಮಿ ನಿಜಕ್ಕೂ ಆಧ್ಯಾತ್ಮಭರಿತ; ರಕ್ಷಣಾ ಸಚಿವ ರಾಜನಾಥ್ ಸಿಂಗ್… ಶಾಲೆಗಳಲ್ಲಿ ಬಿಸಿಯೂಟಕ್ಕೆ ಸಿದ್ಧಗಂಗಾಮಠವೇ ಪ್ರೇರಣೆ; ಡಿಸಿಎಂ ಡಿ.ಕೆ.ಶಿವಕುಮಾರ್ ಸಿದ್ಧಗಂಗಾ ಶ್ರೀಗಳು ಕೇವಲ ಶಿಕ್ಷಣ ಮತ್ತು ದಾಸೋಹಕ್ಕೆ ಪ್ರಾಧಾನ್ಯತೆಯನ್ನು ನೀಡದೇ, ಉಚ್ಛ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ಕರ್ನಾಟಕವು ಎಲ್ಲ ಕ್ಷೇತ್ರದಲ್ಲಿಯೂ ಖ್ಯಾತಿಯನ್ನು ಹೊಂದಿರುವ ರಾಜ್ಯವಾಗಿದ್ದು, ಭವಿಷ್ಯದಲ್ಲಿಯೂ ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿರಲಿದೆ …

Read More »

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರ ಅಹವಾಲು ಸ್ವೀಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ

ಕಾಂಗ್ರೆಸ್‌ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೂಡಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಪೂರೈಕೆ, ಮಂದಿರ ನಿರ್ಮಾಣಕ್ಕೆ ಹಣಕಾಸಿನ ಸಹಾಯ, ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ …

Read More »

ವಿಜಯಪುರ ಜಿಲ್ಲೆಯಲ್ಲಿ ಭೂಮಿಯಾಳದಿಂದ ಭಾರಿ ಶಬ್ದ

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹಡಗಿನಾಳ ಹಾಗೂ ಇತರೆ ಗ್ರಾಮಗಳಲ್ಲಿ ಇಂದು ಭೂಮಿಯಾಳದಿಂದ ಭಾರಿ ಶಬ್ದ ಕೇಳಿಬಂದಿದೆ. ನಗರದ ಕೆಹೆಚ್​​ಬಿ ಕಾಲೊನಿ, ಬ್ಯಾಂಕರ್ಸ್ ಕಾಲೊನಿ, ಸದಾಶಿವ ನಗರ, ಆಕೃತಿ ಕಾಲೊನಿಗಳ ನಿವಾಸಿಗಳಿಗೂ ಶಬ್ದ ಕೇಳಿಸಿದೆ. ಭೂಮಿ ನಡುಗಿದಂತೆ ಅನುಭವವಾಗಿದೆ. ಭೂಕಂಪನಕ್ಕೆ ಮನೆಯೊಳಗಿನ ಪಾತ್ರೆಗಳು ಅಲ್ಲಾಡಿ ಬಿದ್ದಿವೆ ಎಂದು ಜನರು ಹೇಳಿದ್ದಾರೆ. ಥೈಲ್ಯಾಂಡ್‌ನ ಬ್ಯಾಂಕಾಂಕ್ ಹಾಗೂ ಇತರೆಡೆಗಳಲ್ಲಿ ಭೂಕಂಪವಾಗಿರುವುದರಿಂದಾಗಿ ಇಲ್ಲಿಯೂ ಭೂಕಂಪವಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಇದು …

Read More »

ನಾವು ಬಿಜೆಪಿ ಬಿಡಲ್ಲ, ಯತ್ನಾಳ್​ ಹೊಸ ಪಕ್ಷ ಕಟ್ಟಲ್ಲ: ರಮೇಶ್​ ಜಾರಕಿಹೊಳಿ

ಬೆಳಗಾವಿ: “ನಾವು ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷ ಬಿಡುವುದಿಲ್ಲ‌‌. ಅದೇ ರೀತಿ ಬಸನಗೌಡ ಪಾಟೀಲ ಯತ್ನಾಳ್​ ಹೊಸ ಪಕ್ಷ ಕಟ್ಟಲ್ಲ, ಬಿಜೆಪಿಯಲ್ಲೇ ಮುಂದುವರೆಯುತ್ತಾರೆ. ನೂರಕ್ಕೆ ನೂರರಷ್ಟು ಯತ್ನಾಳ್​ ಬಿಜೆಪಿಗೆ ವಾಪಸ್ ಬರುತ್ತಾರೆ” ಎಂದು ಶಾಸಕ ರಮೇಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಯತ್ನಾಳ್​ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಮಾಧ್ಯಮದಲ್ಲಿ ಬಂದಿರುವುದೇ ಬೇರೆ. ಹಾಗಾಗಿ, ಬಿಜೆಪಿಯಲ್ಲಿ ಯತ್ನಾಳ್​ ಮುಂದುವರೆಯವ ವಿಶ್ವಾಸವಿದೆ. ಅವರು ಎಲ್ಲಿಯೂ ಹೋಗಲ್ಲ” …

Read More »

ಒಂದು ವರ್ಷದಲ್ಲಿ ಬಿಜೆಪಿಯವರೇ ಯತ್ನಾಳ್​ರನ್ನು ಕರೀತಾರೆ: ಸತೀಶ್ ಜಾರಕಿಹೊಳಿ

ಬೆಳಗಾವಿ : ನನ್ನ ದೃಷ್ಟಿಯಲ್ಲಿ ಯತ್ನಾಳ್ ಅವರನ್ನು ಒಂದು ವರ್ಷದಲ್ಲಿ ಬಿಜೆಪಿಯವರೇ ಕರೆಯುತ್ತಾರೆ. ಇವರಿಗೆ ಅವರು ಅನಿವಾರ್ಯ. ಅವರು ಇವರಿಗೆ ಅನಿವಾರ್ಯ. ಹಾಗಾಗಿ, ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್​ ಆಗುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುತ್ತೇವೆ ಎನ್ನುವ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ಬಿಟ್ಟಿದ್ದು. ಯತ್ನಾಳ್ ಹೊಸ ಪಕ್ಷ …

Read More »

ಒಂದು ಕಿಸ್​ಗೆ 50 ಸಾವಿರ ರೂ! ಲಕ್ಷಾಂತರ ರೂ. ಸುಲಿಗೆ

ಬೆಂಗಳೂರು, ಏಪ್ರಿಲ್ 1: ಆ ಟೀಚರ್ ಅಂತಿಥ ಮಹಿಳೆಯಲ್ಲ. ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ತಂದೆಗೇ ಮುತ್ತು ಕೊಟ್ಟು ಹನಿಟ್ರ್ಯಾಪ್ (Honey Trap) ಮಾಡಿದ್ದಲ್ಲದೆ, 50 ಸಾವಿರ ರೂ. ಸುಲಿಗೆ ಮಾಡಿದ್ದಾಳೆ. ಮತ್ತೆ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮತ್ತಷ್ಟು ಹಣ ವಸೂಲಿ ಮಾಡಲು ಮುಂದಾದ ಟೀಚರ್ (Pre School Teacher) ಹಾಗೂ ಗ್ಯಾಂಗ್ ಈಗ ಪೊಲೀಸ್ ಬಲೆಗೆ ಬಿದ್ದಿದೆ. ಬೆಂಗಳೂರಿನ …

Read More »

ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ

ಧಾರವಾಡ ತಾಲೂಕಿನ ಹೊಲ್ತಿಕೋಟಿ ಗ್ರಾಮದಲ್ಲಿ‌ ಮಹಿಳೆಯರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ್ದಾರೆ. ನಾಲ್ಕೈದು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯ ಸೇವಿಸಿದ ಬಳಿಕ ಎಣ್ಣೆ ಪ್ರಿಯರು ಗ್ರಾಮದ ಬೀದಿಗಳಲ್ಲಿ, ನೀರಿನ ಟ್ಯಾಂಕ್​ಗಳ ಬಳಿ, ಶಾಲಾ ಆವರಣದಲ್ಲಿ, ದೇವಸ್ಥಾನಗಳ ಎದುರು ಪ್ಯಾಕೆಟ್​ಗಳನ್ನು ಎಸೆದು ಹೋಗುತ್ತಿದ್ದಾರೆ. ನಿತ್ಯವೂ ರಾಶಿ ರಾಶಿ ಪ್ಯಾಕೆಟ್ ತೆಗೆದು ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ …

Read More »

ಏತ ನೀರಾವರಿ ಯೋಜನೆಯಿಂದ ಬತ್ತಿದ ಕೆರೆಗೆ ಬಂತು ಜೀವ ಕಳೆ

ಕೊಪ್ಪಳ : ಹರಿಯುವ ನೀರನ್ನು ನಿಲ್ಲಿಸಬೇಕು. ನಿಲ್ಲಿಸಿದ ನೀರನ್ನು ಇಂಗಿಸಬೇಕು, ಇದು ಪ್ರಕೃತಿಯ ಜಲನಿಯಮ. ಆದರೆ ಇತ್ತೀಚಿಗೆ ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲುವುದೇ ಕಡಿಮೆ. ಈ ಮಧ್ಯೆ ಮಳೆ ಕಡಿಮೆಯಾಗಿ ಬತ್ತಿದ್ದ ಕೆರೆಗೆ ಏತ ನೀರಾವರಿ ಯೋಜನೆಯಿಂದ ಜೀವ ಕಳೆ ಬಂದಿದೆ. ಇದರಿಂದ ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ತಾಲೂಕಿನ ಹೊಸಹಳ್ಳಿ ಕೆರೆ 2012ರಲ್ಲಿ ಮಾತ್ರ ತುಂಬಿ ಹರಿದಿತ್ತು. ಅಲ್ಲಿಂದ 2025ರ ವರೆಗೂ ಕೆರೆ ತುಂಬಿ ಕೋಡಿ ಬೀಳುವಷ್ಟು …

Read More »

ಗ್ರಾ.ಪಂ. ಉಪಾಧ್ಯಕ್ಷರ ವಾರ್ಡ್ ನಲ್ಲಿಯೇ ಕಸ ತುಂಬಿದ್ದರಿಂದ ಪರಿಸರ ಮಾಲಿನ್ಯ

ನಂದಗಡ : ಗ್ರಾ.ಪಂ. ಉಪಾಧ್ಯಕ್ಷರ ವಾರ್ಡ್ ನಲ್ಲಿಯೇ ಕಸ ತುಂಬಿದ್ದರಿಂದ ಪರಿಸರ ಮಾಲಿನ್ಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿನ ವಾರ್ಡ್ ನಂಬರ್ 4ರ ಹಾಲಿ ಉಪಾಧ್ಯಕ್ಷ ಸಂಗೀತಾ ಮಡ್ಡಿಮನಿ ಅವರು ಪ್ರತಿನಿಧಿಸಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿರುವ ಅವರು ತಮ್ಮ ವಾರ್ಡಿನ ಕಡೆ ಸಂಪೂರ್ಣ ನಿರ್ಲಕ್ಷಿ ಮಾಡಿರುವ ಬಗ್ಗೆ ಕಂಡು ಬರುತ್ತಿದೆ ಒಟ್ಟು ನಾಲ್ಕು ಸದಸ್ಯರನ್ನು ಒಳಗೊಂಡ ಈ ವಾರ್ಡಿನ ಕಲಾಲಗಲ್ಲಿ ಮುಂದಿನ ಬೊಳ ಒಳಗಡೆ ಇರುವ ಪ್ರದೇಶದಲ್ಲಿ ಇಂತಹಾ ದುಶೀತಗೊಂಡ …

Read More »