ಬಿಗ್ ಬಾಸ್ ಮುಕ್ತಾಯ.. ನಿರೀಕ್ಷೆಗಳೆಲ್ಲಾ ಸುಳ್ಳಾಯ್ತು.. ಗೆದ್ದವರು ಇವರೇ ನೋಡಿ..
ಅಂತೂ ಬಿಗ್ ಬಾಸ್ ಸೀಸನ್ 7 ಮುಕ್ತಾಯಗೊಂಡಿದೆ.. 18 ಜನ ಸದಸ್ಯರ ಪಟ್ಟಿಯಲ್ಲಿ ಕೊನೆಯಲ್ಲಿ ಉಳಿದು ಗೆಲುವಿನ ಪಟ್ಟ ಒಬ್ಬರಿಗೆ ದಕ್ಕಾಗಿದೆ.. ಹೌದು ಬಿಗ್ ಬಾಸ್ ಸೀಸನ್ 7 ರ ಗ್ರಾಂಡ್ ಫಿನಾಲೆಯ ಸಂಪೂರ್ಣ ಶೂಟಿಂಗ್ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ಪ್ರಕಟಿಸಲಾಗಿದೆ.
ಬಿಗ್ ಬಾಸ್ ನ ಈ ಸೀಸನ್ ಹಲವಾರು ವಿಶೇಷತೆಗಳಿಂದ ಕೂಡಿತ್ತು.. ಈ ಬಾರಿ ಮನೆಗೆ ಬಂದ ಎಲ್ಲಾ ಸದಸ್ಯರೂ ಸೆಲಿಬ್ರೆಟಿಗಳೇ ಅನ್ನೋದು ಒಂದು ಕಡೆಯಾದರೆ.. ಇದೇ ಮೊದಲ ಬಾರಿಗೆ ಬಿಗ್ ಬಾಸ್ 112 ದಿನ ಗಳು ನಡೆಯಿತು..
ಇನ್ನು ಬಂದ 18 ಸದಸ್ಯರ ಪೈಕಿ ಗಟ್ಟಿಯಾಗಿ ಕೊನೆಯ ವಾರದವರೆಗೂ ಬೇರೂರಿದ್ದು ಮಾತ್ರ 6 ಮಂದಿ.. ದೀಪಿಕಾ ದಾಸ್ ಶೈನ್ ಶೆಟ್ಟಿ ಕುರಿ ಪ್ರತಾಪ್ ವಾಸುಕಿ ವೈಭವ್ ಭೂಮಿ ಶೆಟ್ಟಿ ಹಾಗೂ ಹರೀಶ್ ರಾಜ್.. ಆದರೆ ಹರೀಶ್ ರಾಜ್ ಅವರಿಗೆ ಅದೃಷ್ಟ ಕೈಗೂಡಲಿಲ್ಲ.. ಫಿನಾಲೆ ವಾರದ ಮಧ್ಯೆ ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರ ಬಂದರು.. ಆನಂತರ ಮನೆಯಲ್ಲಿ ಉಳಿದ ಐದು ಜನರ ಪೈಕಿ ಗೆಲುವಿನ ಪಟ್ಟಕ್ಕೆ ಜಿದ್ದಾಜಿದ್ದಿಯೇ ಇತ್ತಾದರೂ ಎಲ್ಲರು ಅಂದುಕೊಂಡತೆ ಫಿನಾಲೆ ಕಾರ್ಯಕ್ರಮದ ಮೊದಲ ದಿನ ಭೂಮಿ ಶೆಟ್ಟಿ ಹಾಗೂ ದೀಪಿಕಾ ದಾಸ್ ಎಲಿಮಿನೇಟ್ ಆಗಿ ಟಾಪ್ 5 ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡರು..
ಇನ್ನು ಉಳಿದ ಮೂವರು ಸ್ಪರ್ಧಿಗಳಾದ ವಾಸುಕಿ ವೈಭವ್ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಅವರ ನಡುವೆ ಒಬ್ಬರನ್ನು ಎಲಿಮಿನೇಟ್ ಮಾಡುವುದು ಬಹಳ ಕಷ್ಟದ ಕೆಲಸವೇ ಆಗಿತ್ತು.. ಆದರೂ ಕೊನೆಗೆ ಆ ಮೂವರಲ್ಲಿ ವಾಸುಕಿ ವೈಭವ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದರು..
ಆನಂತರ ಉಳಿದ ಇಬ್ಬರು ಕುರಿ ಪ್ರತಾಪ್ ಹಾಗೂ ಶೈನ್ ನಡುವೆ ನಿಜಕ್ಕೂ ಯಾರು ಗೆಲ್ತಾರೆ ಅನ್ನೋದನ್ನ ಊಹಿಸೋಕು ಕೂಡ ಅಸಾಧ್ಯವಾಗಿತ್ತು.. ಇಬ್ಬರೂ ಕೂಡ ಸ್ಟ್ರಾಂಗ್ ಸ್ಪರ್ಧಿಗಳು.. ಶೈನ್ ಶೆಟ್ಟಿ ಮೊದಲ ವಾರದಿಂದಲೂ ಕನ್ಸಿನ್ಸ್ಟೆನ್ಸಿ ಯಾಗಿ ಆಟ ಆಡಿಕೊಂಡು ಬಂದರೆ ಇತ್ತ ಕುರಿ ಪ್ರತಾಪ್ ಅವರೂ ಕೂಡ ನಾನ್ಯಾರಿಗೆ ಕಡಿಮೆ ಎಂಬತೆ ಕೊನೆಯ ಒಂದಷ್ಟು ವಾರಗಳಲ್ಲಿ ಅದ್ಭುತ ಪರ್ಫಾರ್ಮೆನ್ಸ್ ನೀಡಿದರು.. ಎಲ್ಲಕ್ಕಿಂತ ಹೆಚ್ಚಾಗಿ ಕುರಿ ಪ್ರತಾಪ್ ಅವರಿಗೆ ಜನರ ಬೆಂಬಲ ಕೊಂಚ ಹೆಚ್ಚಾಗಿತ್ತು..
ಇನ್ನು ಕೊನೆಯದಾಗಿ ಸ್ವತಃ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಮನೆಗೆ ತೆರಳಿ ಇಬ್ಬರು ಫೈನಲಿಸ್ಟ್ ಗಳನ್ನು ವೇದಿಕೆಗೆ ಕರೆತಂದಿದ್ದಾರೆ. ಎಲ್ಲರಲ್ಲೂ ಯಾರು ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿತ್ತು.. ಸುದೀಪ್ ಅವರ ಎಡಬಲದಲ್ಲಿ ಕುರಿ ಹಾಗೂ ಶೈನ್ ನಿಂತರು ಕೊನೆಗೂ ಸುದೀಪ್ ಅವರು ಒಂದು ಕೈಯನ್ನು ಮೇಲೆತ್ತಿ ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ತಿಳಿಸಿದರು.. ಗೆದ್ದವರು ಮತ್ಯಾರೂ ಅಲ್ಲ ಅದು ಶೈನ್ ಶೆಟ್ಟಿ..
ಹೌದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ.. ಸತತ 112 ದಿನಗಳ ಸೆಣೆಸಾಟದಲ್ಲಿ ಸೀಸನ್ 7 ರ ಕಿರೀಟವನ್ನು ಶೈನ್ ಶೆಟ್ಟಿ ಅವರು ಮುಡಿಗೇರಿಸಿಕೊಂಡು ವಾರದ ಸಂಭಾವನೆಯ ಜೊತೆಗೆ 50 ಲಕ್ಷ ಬಹುಮಾನವನ್ನು ಪಡೆದರು. ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಉಳಿದರು..