Breaking News

ಜುನ್ನೆ ಬೆಳಗಾವಿ ಶಾಲೆ ನಂ. 33ರ ಆವರಣದಲ್ಲಿದ್ದ ಜೀರ್ಣಾವಸ್ಥೆಯ ನೀರಿನ ಟ್ಯಾಂಕ್ ತೆರವು: ನಿರಾಳರಾದ ವಿದ್ಯಾರ್ಥಿಗಳು-ಪೋಷಕರು

ಜುನ್ನೆ ಬೆಳಗಾವಿ ಶಾಲೆ ನಂ. 33ರ ಆವರಣದಲ್ಲಿದ್ದ ಜೀರ್ಣಾವಸ್ಥೆಯ ನೀರಿನ ಟ್ಯಾಂಕ್ ತೆರವು: ನಿರಾಳರಾದ ವಿದ್ಯಾರ್ಥಿಗಳು-ಪೋಷಕರು • ಜುನ್ನೆ ಬೆಳಗಾವಿ ಶಾಲೆಯ ಟ್ಯಾಂಕ್ ತೆರವು • ಏಳೆಂಟು ವರ್ಷಗಳ ಹೋರಾಟಕ್ಕೆ ಸಿಕ್ಕಿತು ಜಯ • ಎಚ್ಚೆತ್ತುಕೊಂಡ ಆಡಳಿತದಿಂದ ತಕ್ಷಣದ ಕ್ರಮ ಆರಂಭ • ಹರ್ಷ ವ್ಯಕ್ತಪಡಿಸಿದ ಪೋಷಕರು ಮತ್ತು ಗ್ರಾಮಸ್ಥರು ಜುನ್ನೆ ಬೆಳಗಾವಿಯ ಮರಾಠಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಸಂಖ್ಯೆ 33ರ ಆವರಣದಲ್ಲಿದ್ದ ಅತ್ಯಂತ ಅಪಾಯಕಾರಿ ನೀರಿನ …

Read More »

ವಡಗಾವನ ಶ್ರೀ ಮಂಗಾಯಿ ದೇವಿ ಜಾತ್ರೆ: ಕುಮಾರಿಕೆಯರಿಗೆ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ

• ವಡಗಾವ್ ಮಂಗಾಯಿ ದೇವಿ ವಾರ್ಷಿಕ ಜಾತ್ರೆ. • ಕುಮಾರಿಕೆಯರಿಂದ ದೇವಿಗೆ ವಿಶೇಷ ಜಲಾಭಿಷೇಕ ಪೂಜೆ. • ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಣೆ. • ಮಂಗಳವಾರದಿಂದ ಮುಖ್ಯಾಚರಣೆ: ಸಿಸಿಟಿವಿ ಭದ್ರತೆ ಹೆಚ್ಚಳ. ವಡಗಾವನ ಗ್ರಾಮದೇವತೆ ಶ್ರೀ ಮಂಗಾಯಿ ದೇವಿಯ ವಾರ್ಷಿಕ ಜಾತ್ರೆಯ ಕೊನೆಯ ದಿನದ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕ ಹಾಗೂ ಭಕ್ತಿಪೂರ್ವಕ ವಾತಾವರಣದಲ್ಲಿ ನೆರವೇರಿದವು. ನೂರಾರು ವರ್ಷಗಳ ಪರಂಪರೆಯಂತೆ ಕುಮಾರಿಕೆಯರು ದೇವಿಗೆ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. …

Read More »

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಖತರ್ನಾಕ್ ದಂಪತಿ ಬಂಧನ

ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು ಎಂದು ಜನರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿಯಾಗಿ ಪಡೆದು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ಹಾಗೂ ರೀಲ್ಸ್‌ಗಳನ್ನು ಹರಿಬಿಟ್ಟು ಸಾವಿರಾರು ಜನರನ್ನು ಸೆಳೆಯುತ್ತಿದ್ದ ಆರೋಪಿಗಳಿಂದ ಭಾರೀ ಪ್ರಮಾಣದ ವಂಚನೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರನ್ನು ಕಿರಣ್ ಮತ್ತು ಅವರ ಪತ್ನಿ …

Read More »

ಮದುವೆಯನ್ನು ಸಮಾಜ ಸೇವೆಯ ವೇದಿಕೆಯಾಗಿಸಿದ ವರ..!

ಮದುವೆಯನ್ನು ಸಮಾಜ ಸೇವೆಯ ವೇದಿಕೆಯಾಗಿಸಿದ ವರ..! ಸಾಮಾನ್ಯವಾಗಿ ಮದುವೆ ಎಂದರೆ ದುಬಾರಿ ಉಡುಗೊರೆಗಳು, ಅದ್ಧೂರಿ ಸಂಭ್ರಮವೇ ಹೆಚ್ಚು ಸುದ್ದಿಯಾಗುತ್ತದೆ. ಆದರೆ ಸಿದ್ಧೇಶ್ವರ್ ಪೇಠ್ಕರ್ ಮತ್ತು ಅವರ ಕುಟುಂಬ ತಮ್ಮ ಮದುವೆಯನ್ನು ಸಮಾಜ ಸೇವೆಯ ಮೂಲಕ ಮಾದರಿಯನ್ನಾಗಿ ಮಾಡಿದ್ದಾರೆ. ಮದುವೆಯ ಸಂದರ್ಭದಲ್ಲಿ ದುಬಾರಿ ಉಡುಗೊರೆಗಳನ್ನು ಸ್ವೀಕರಿಸುವ ಅಥವಾ ನೀಡುವ ಬದಲು, ತಮ್ಮ ಗ್ರಾಮದ 3,465 ನಿವಾಸಿಗಳಿಗೆ ತಲಾ ₹1 ಲಕ್ಷ ಮೊತ್ತದ ಒಂದು ವರ್ಷದ ಅಪಘಾತ ವಿಮೆ ಮಾಡಿಸಿಕೊಟ್ಟಿದ್ದಾರೆ. ಇದರಿಂದ ಗ್ರಾಮದ …

Read More »

ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ

ಬೆಂಗಳೂರು: ರಾಜಧಾನಿಯ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ. ಆರೋಪಿ ಧೀರಜ್ ಕುಮಾರ್ (24) ತನ್ನ ಪತ್ನಿ ರೀಮಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ರೀಲ್ಸ್ ಮಾಡುವ ವಿಚಾರ, ದಾಂಪತ್ಯ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯ ಹಾಗೂ ಆಗಾಗ ನಡೆಯುತ್ತಿದ್ದ ಜಗಳವೇ ಕೊಲೆಗೆ ಕಾರಣವೆಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ಬಿಹಾರ …

Read More »

ಹೈವೇ ದರೋಡೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಚಿತ್ರದುರ್ಗ: ಹೈವೇ ದರೋಡೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಿರಿಯೂರು ತಾಲ್ಲೂಕಿನ ಹುಲುಗಲಕುಂಟೆ ನಿವಾಸಿಗಳಾದ ಆರ್. ಸುನೀಲ್ ಹಾಗೂ ಎನ್. ಸುನೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಪರಮೇನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ, ಅವರಿಂದ ಹಣ ದೋಚುತ್ತಿದ್ದರು …

Read More »

ಶಿಕ್ಷಣದ ದೇಗುಲ ಕಳಂಕ: ಕ್ಲಾಸ್‌ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿ ರೊಮ್ಯಾನ್ಸ್, ಹೆಂಡತಿ ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಮುಕ!

ಶಿಕ್ಷಣದ ದೇಗುಲ ಕಳಂಕ: ಕ್ಲಾಸ್‌ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿ ರೊಮ್ಯಾನ್ಸ್, ಹೆಂಡತಿ ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಮುಕ! ​ಕನ್ನೌಜ್: ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಿಂದ ಶಿಕ್ಷಣದ ಕ್ಷೇತ್ರಕ್ಕೆ ಮಸಿ ಬಳಿಯುವಂಥ ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯೊಂದರ ತರಗತಿ ಕೋಣೆಯೊಳಗೆ ಶಿಕ್ಷಕ ಹಾಗೂ ಶಿಕ್ಷಕಿ ನಡುವಿನ ರಾಸಲೀಲೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ​ಅಸಲಿ ಕಥೆ ಏನು? ​ಲಭ್ಯವಿರುವ ಮಾಹಿತಿಯ …

Read More »

ಕಿತ್ತೂರಿನಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ, ಮಕ್ಕಳಿಗೆ ಬೆಂಗಾವಲಾಗಿ ನಿಂತ ಪೋಷಕರು!

ಕಿತ್ತೂರಿನಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ, ಮಕ್ಕಳಿಗೆ ಬೆಂಗಾವಲಾಗಿ ನಿಂತ ಪೋಷಕರು! ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ಶಾಲಾ ಮಕ್ಕಳಿಗೆ ತಾವೇ ಬೆಂಗಾವಲಾಗಿ ನಿಂತು ಶಾಲೆಗೆ ಕರೆದೊಯ್ಯುವ ಪರಿಸ್ಥಿತಿ ಪೋಷಕರಿಗೆ ಎದುರಾಗಿದೆ. ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿತ್ತೂರು ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಯದಲ್ಲೇ …

Read More »

ಸ್ಕೇಟಿಂಗ್‌ನಲ್ಲಿ ದೇಶಕ್ಕೆ ಕಂಚಿನದ ಪದಕ ತಂದ ಬೆಳಗಾವಿಯ ಶುಭಂ ಸಾಖೆ!

ಖಾನಾಪುರ: ಸ್ಕೇಟಿಂಗ್‌ನಲ್ಲಿ ದೇಶಕ್ಕೆ ಕಂಚಿನದ ಪದಕ ತಂದ ಬೆಳಗಾವಿಯ ಶುಭಂ ಸಾಖೆ! ಚಂಡೀಗಢದಲ್ಲಿ ನಡೆದ ಮುಕ್ತ ರಾಷ್ಟ್ರೀಯ ರ್ಯಾಂಮಕಿಂಗ್ ಸ್ಕೇಟಿಂಗ್ ಟೂರ್ನಮೆಂಟ್‌ನ ‘ಡೌನ್‌ಹಿಲ್’ ವಿಭಾಗದಲ್ಲಿ ಬೆಳಗಾವಿಯ ಪ್ರತಿಭಾನ್ವಿತ ಆಟಗಾರ ಶುಭಂ ಸಾಖೆ ಅದ್ಭುತ ಸಾಧನೆ ಮಾಡುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾನೆ. ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್ ಆಗಿರುವ ಶುಭಂ ಸಾಖೆ, ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯ ‘ಡೌನ್‌ಹಿಲ್’ ವಿಭಾಗದಲ್ಲಿ …

Read More »

ಗಣೇಶೋತ್ಸವ ಅನುಮತಿಗೆ ‘ಸಿಂಗಲ್ ವಿಂಡೋ’ ವ್ಯವಸ್ಥೆಗೆ ಆಗ್ರಹ: ತಹಶೀಲ್ದಾರರಿಗೆ ಮಹಾಮಂಡಳ ಮನವಿ

ಗಣೇಶೋತ್ಸವ ಅನುಮತಿಗೆ ‘ಸಿಂಗಲ್ ವಿಂಡೋ’ ವ್ಯವಸ್ಥೆಗೆ ಆಗ್ರಹ: ತಹಶೀಲ್ದಾರರಿಗೆ ಮಹಾಮಂಡಳ ಮನವಿ ಖಾನಾಪುರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಎದುರಾಗುವ ತೊಂದರೆ ತಪ್ಪಿಸಲು ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆ ಜಾರಿಗೆ ತರಬೇಕೆಂದು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ಒತ್ತಾಯಿಸಿದೆ. ಮಹಾಮಂಡಳದ ಪದಾಧಿಕಾರಿಗಳು ತಹಶೀಲ್ದಾರ್ ದುಂಡಪ್ಪ ಕೋಮಾರ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಈ ಕುರಿತು ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಗಣೇಶೋತ್ಸವಕ್ಕೂ ಮುನ್ನ ರಸ್ತೆ ಗುಂಡಿ ಮುಚ್ಚಲು ಹಾಗೂ ಸ್ವಚ್ಛತೆ ಕಾಪಾಡಲು ಆಗ್ರಹಿಸಿದರು. ಖಾನಾಪುರ …

Read More »