ಬೆಳಗಾವಿ: ನಗರದಲ್ಲಿ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಉದ್ಯಮಬಾಗ ಪೊಲೀಸ್ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಭೋಲು ಪ್ರಜಾಪತಿ (39) ಬಂಧಿತ ಆರೋಪಿ. ಬೆಳಗಾವಿ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ …
Read More »ಆರಂಭದಲ್ಲಿ ಎಲ್ಲರೂ ರಸ್ತೆ ಅಪಘಾತ ಎಂದೇ ಭಾವಿಸಿದ್ದರು.. ಕಟ್ ಮಾಡಿದ್ರೆ ಹೆಂಡತಿಯೇ ಕೊ+ಲೆಯ ಮಾಸ್ಟರ್ ಮೈಂಡ್!
ಬೆಳಗಾಗುತ್ತಲೇ ಪ್ರಶಾಂತವಾಗಿರುತ್ತಿದ್ದ ಆ ಕಾಲೋನಿಯಲ್ಲಿ ಆ ದಿನ ಬೆಳಿಗ್ಗೆ ಒಂದೇ ಸಮನೆ ಆತಂಕ ಮನೆಮಾಡಿತ್ತು. ಆಂಧ್ರಪ್ರದೇಶದ ಪೀಲೇರು-ತಿರುಪತಿ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶ+ವವಾಗಿ ಬಿದ್ದಿದ್ದನು. ತಲೆಗೆ ತೀವ್ರ ಗಾ+ಯಗಳಾಗಿ, ಮೈಯೆಲ್ಲಾ ರ+ಕ್ತದ ಮೈಲಿಗೆಯೊಂದಿಗೆ ಬಿದ್ದಿದ್ದ ಆ ಮೃತದೇಹವನ್ನು ಕಂಡವರು ಯಾರೇ ಆಗಲಿ, “ರಾತ್ರಿ ವೇಳೆ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ, ಭೀಕರ ರಸ್ತೆ ಅ+ಪಘಾತ ಇದು” ಎಂದೇ ಭಾವಿಸಿದ್ದರು. ಪೊಲೀಸರು ಹಾಗೂ ಸ್ಥಳೀಯರೂ ಕೂಡ ಆರಂಭದಲ್ಲಿ …
Read More »ಬಗೆದಷ್ಟು ಬಯಲಾಗ್ತಿದೆ ಕೆಪಿಎಸ್ಸಿ ಕರ್ಮಕಾಂಡ – ದಲ್ಲಾಳಿಗಳಿಗೆ ಸಾಥ್ ಕೊಡ್ತಿದ್ದ ಕೆ.ಪಿ.ಎಸ್ಸಿ ಉದ್ಯೋಗಿಗಳು ಅರೆಸ್ಟ್..!
ಬಗೆದಷ್ಟು ಬಯಲಾಗ್ತಿದೆ ಕೆಪಿಎಸ್ಸಿ ಕರ್ಮಕಾಂಡ – ದಲ್ಲಾಳಿಗಳಿಗೆ ಸಾಥ್ ಕೊಡ್ತಿದ್ದ ಕೆ.ಪಿ.ಎಸ್ಸಿ ಉದ್ಯೋಗಿಗಳು ಅರೆಸ್ಟ್..! ಕೆಲಸ ಕೊಡಿಸ್ತೀವಿ, ಫೈನಲ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರತ್ತೆ ಅಂತ ವಂಚಿಸ್ತಿದ್ದ ದಲ್ಲಾಳಿಗಳು. ದಲ್ಲಾಳಿಗಳಿಗೆ ಸಾಥ್ ನೀಡ್ತಿದ್ದ ಕೆಪಿಎಸ್ಸಿ ಸಿಬ್ಬಂದಿಗಳಾದ ಸೀನಿಯರ್ ಅಸಿಸ್ಟೆಂಟ್ ಸ್ವಾಮಿದಾಸ್, ಟೆಕ್ನಿಕಲ್ ಅಸಿಸ್ಟೆಂಟ್ ಶರಣಪ್ಪ, ಬಂಧಿತರು. ಕೆಪಿಎಸ್ಸಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರ ಮೊಬೈಲ್ ನಂಬರ್ ಪಡಿತಿದ್ರು ಪರೀಕ್ಷಾರ್ಥಿಗಳನ್ಮ ಸಂಪರ್ಕಿಸಲು ದಲ್ಲಾಳಿಗಳಿಗೆ ಮೊಬೈಲ್ ನಂಬರ್ ಕೊಡ್ತಿದ್ದ ಆರೋಪಿಗಳು. ಇಂಟರ್ …
Read More »ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ.
ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ. ವಿದೇಶ ಪ್ರವಾಸದಲ್ಲಿರುವ ಜನನಾಯಕ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ ದೇಶದಲ್ಲಿರುವ ಬರ್ಮಿಂಗ್ ಹ್ಯಾಮ್ನಲ್ಲಿರುವ ಹಿಂದೂ ಧರ್ಮದ ಪವಿತ್ರ ಗ್ರಂಥ ಶ್ರೀ ರಾಮಾಯಣ ಸೃಷ್ಟಿಕರ್ತ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ ನೀಡಿ ಮಹರ್ಷಿ ಶ್ರೀ ವಾಲ್ಮೀಕಿ ದರ್ಶನ ಪಡೆದರು. ವಿದೇಶದ ನೆಲದಲ್ಲಿಯೂ ನಮ್ಮ ಸನಾತನ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಭಾರತೀಯ ಮೌಲ್ಯಗಳನ್ನು ಜೀವಂತವಾಗಿರಿಸಿ ಕೊಂಡಿರುವ …
Read More »ರಾಜ್ಯ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿನ 3 ಹಾಗೂ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಆಹಾರ ಮಾದರಿಗಳ ಪರಿಶೀಲನೆ
ಬೆಂಗಳೂರು: ರಾಜ್ಯ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿನ 3 ಹಾಗೂ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಆಹಾರ ಮಾದರಿಗಳ ಪರಿಶೀಲನೆಯನ್ನು ಮುಂದುವರಿಸಿದ್ದು, ಕೆಜಿಗಟ್ಟಲೇ ಕೊಳೆತ ಮಾಂಸ, ತರಕಾರಿಗಳು ಪತ್ತೆಯಾಗಿವೆ. ಅದುವೆ ಐಷಾರಾಮಿ ಹೋಟೆಲ್ಗಳಲ್ಲಿ ಎಂಬುದು ಆಘಾತಕಾರಿ ಸಂಗತಿ. ಈಗಾಗಲೇ ನಿಯಮ ಉಲ್ಲಂಘನೆಯ ಮೇರೆಗೆ ವಶಪಡಿಸಿಕೊಂಡಿರುವ ಪದಾರ್ಥಗಳು ಟೆಸ್ಟಿಂಗ್ ಸಲುವಾಗಿ ಲ್ಯಾಬ್ಗೆ ರವಾನೆಗೊಂಡಿದೆ. 3 ಹಾಗೂ ಫೈವ್ ಸ್ಟಾರ್ನಂತಹ ಲಕ್ಸುರಿ ಹೋಟೆಲ್ಗಳಲ್ಲಿ ಶುಚಿ-ರುಚಿ ಜೊತೆಗೆ ಶುದ್ಧವಾದ …
Read More »ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳ ಆಪ್ತರ ಭೇಟಿ: ಹಿರಿಯ ಜೀವಗಳಿಗೆ ಆತ್ಮೀಯ ಸಾಂತ್ವನ
ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳ ಆಪ್ತರ ಭೇಟಿ: ಹಿರಿಯ ಜೀವಗಳಿಗೆ ಆತ್ಮೀಯ ಸಾಂತ್ವನ ಬೆಳಗಾವಿಯ ಶಾಂತಾಯಿ ಚೈಲ್ಡ್ಹುಡ್ ವೃದ್ಧಾಶ್ರಮಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳ ಆಪ್ತ ಮಂಗೇಶ್ ಚಿವಟೆ ಭೇಟಿ ನೀಡಿದ್ದಾರೆ. ಅಲ್ಲಿನ ಆಶ್ರಮವಾಸಿಗಳೊಂದಿಗೆ ಸಮಯ ಕಳೆದು, ಅವರ ಯೋಗಕ್ಷೇಮ ವಿಚಾರಿಸಿದ ಅವರು ಸಂಸ್ಥೆಯ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಳಗಾವಿಯ ಶಾಂತಾಯಿ ಆಶ್ರಯಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ (OSD) ಹಾಗೂ ವೈದ್ಯಕೀಯ ನೆರವು ಕೋಶದ ಜವಾಬ್ದಾರಿ ಹೊತ್ತಿರುವ ಮಂಗೇಶ್ ಚಿವಟೆ …
Read More »40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ನನಸು; ಸಚಿವ ಎಂ.ಬಿ. ಪಾಟೀಲ್ ಪ್ರಯತ್ನದಿಂದ ಬಸ್ ಸಂಚಾರ ಆರಂಭ
40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ನನಸು; ಸಚಿವ ಎಂ.ಬಿ. ಪಾಟೀಲ್ ಪ್ರಯತ್ನದಿಂದ ಬಸ್ ಸಂಚಾರ ಆರಂಭ 40 ವರ್ಷಗಳ ದಾಸ್ಯಾಳ ಗ್ರಾಮದ ಕನಸು ಕೊನೆಗೂ ನನಸಾಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂಬ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಇದೀಗ ಸ್ಪಂದನೆ ಸಿಕ್ಕಿದ್ದು, ಸಚಿವ ಎಂ.ಬಿ. ಪಾಟೀಲ್ ಅವರ ಪ್ರಯತ್ನದಿಂದ ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದೆ. ವಿಜಯಪುರ ಜಿಲ್ಲೆಯ ದಾಸ್ಯಾಳ ಗ್ರಾಮದ ಜನರ 40 ವರ್ಷಗಳ ಕನಸಿಗೆ …
Read More »ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ
ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ -ಗಾನ ವಿದೂಷಿ ಪಾವನಿ ಕಾಶೀನಾಥ ವಚನಗಳಲ್ಲಿ ಅಡಗಿರುವ ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ ಎಂದು ತೋರಿಸುವುದರ ಜೊತೆಗೆ 12ನೇ ಶತಮಾನದ ಶರಣರ ವಿಶೇಷ ವಚನಗಳನ್ನು ರಾಗ ತಾಳ ಸಂಯೋಜನೆಯೊಂದಿಗೆ ಸಂಗೀತ ರೂಪದಲ್ಲಿ ಪ್ರಸ್ತುತಪಡಿಸಿ ಸರ್ವರನ್ನು ಭಕ್ತಿಯ ಸಾಗರದಲ್ಲಿ ತೇಲುವಂತೆ ಮಾಡಿದ ಸಂಗೀತ ಕಾರ್ಯಕ್ರಮ ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ …
Read More »ಖಾನಾಪುರ ತಾಲೂಕಿನ ಗರ್ಲಗುಂಜಿ, ಸಿಂಗಿನಕೊಪ್ಪ ಶಾಲೆಯಲ್ಲಿ ಶೈಕ್ಷಣಿಕ ಸಾಮಗ್ರಿ ವಿತರಣೆ
ಖಾನಾಪುರ ತಾಲೂಕಿನ ಗರ್ಲಗುಂಜಿ, ಸಿಂಗಿನಕೊಪ್ಪ ಶಾಲೆಯಲ್ಲಿ ಶೈಕ್ಷಣಿಕ ಸಾಮಗ್ರಿ ವಿತರಣೆ ಖಾನಾಪುರ ತಾಲೂಕಿನ ಗರ್ಲಗುಂಜಿ ಮತ್ತು ಸಿಂಗಿನಕೊಪ್ಪ ಗ್ರಾಮಗಳ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಹಾಗೂ ರಾಜ್ಯ ಮರಾಠಿ ವಿಕಾಸ ಸಂಸ್ಥೆ, ಮುಂಬೈ ಇವುಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಳೆದ ಒಂಬತ್ತು ವರ್ಷಗಳಿಂದ ಗಡಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಈ ಉಪಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಗರ್ಲಗುಂಜಿ ಶಾಲೆಯಲ್ಲಿ …
Read More »ಬರದ ಹೊಡೆತಕ್ಕೆ ಅನ್ನದಾತ ಕಂಗಾಲು; ಪರಿಹಾರದ ಭರವಸೆ ನೀಡಿದ ಸಚಿವ ಎಂ.ಬಿ. ಪಾಟೀಲ
ಬರದ ಹೊಡೆತಕ್ಕೆ ಅನ್ನದಾತ ಕಂಗಾಲು; ಪರಿಹಾರದ ಭರವಸೆ ನೀಡಿದ ಸಚಿವ ಎಂ.ಬಿ. ಪಾಟೀಲ ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಈ ನಡುವೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿ ಬೆಳೆ ಹಾನಿ ಪರಿಶೀಲಿಸಿದ್ದಾರೆ. ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸುವುದಾಗಿ …
Read More »
Laxmi News 24×7