ಬೆಂಗಳೂರು: ಸುಖಾ ಸುಮ್ಮನೆ ಬೈಕ್ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ ತೋರುತ್ತಿದ್ದ ಟೋಯಿಂಗ್ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಚಾಟಿ ಬೀಸಿದ್ದಾರೆ.
ಈ ಹಿಂದಿನ ಕಮಿಷನರ್ ಭಾಸ್ಕರ್ ರಾವ್ ಟೋಯಿಂಗ್ ಸಮಸ್ಯೆಗೆ ಮುಕ್ತಿ ನೀಡುವ ಸಲವಾಗಿ ಟೋಯಿಂಗ್ ಮಾಡುವ ಸಿಬ್ಬಂದಿ ಗಾಡಿ ಎಳೆದೊಯ್ಯುವಾಗ ಅನೌನ್ಸ್ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಅದನ್ನ ಯಥಾಪ್ರಕಾರವಾಗಿ ಎರಡು ದಿನ ಫಾಲೋ ಮಾಡಿದ ಸಿಬ್ಬಂದಿ, ಮತ್ತೆ ತಮ್ಮ ಚಾಳಿ ಮುಂದುವರೆಸಿ ಬೇಕಾಬಿಟ್ಟಿ ಗಾಡಿಗಳನ್ನ ಎಳೆದೊಯ್ಯಲು ಆರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನು ಕಂಡ ಕಮಿಷನರ್ಪ್ರ ಟೋಯಿಂಗ್ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮೊನ್ನೆಯಷ್ಟೆ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಈ ಸಂಬಂಧ ವೀಡಿಯೋ ಒಂದನ್ನ ಸಾಮಾಜಿಕ ಜಾಲತಾನದಲ್ಲಿ ಹರಿಬಿಡಲಾಗಿತ್ತು. ಒಂದು ಕಡೆ ಬೇಕಾಬಿಟ್ಟಿ ಗಾಡಿ ಎಳೆದೊಯ್ತಿದ್ದ ಟೋಯಿಂಗ್ ಸಿಬ್ಬಂದಿ ಮತ್ತೊಂದು ಕಡೆ ಇದೇ ಟೋಯಿಂಗ್ ಸಿಬ್ಬಂದಿ ಯಾರದ್ದೋ ಬೈಕ್ನ ಪಾರ್ಟ್ಸ್ ಕದ್ದಿದ್ದು ಎರಡೂ ಆ ವಿಡಿಯೋದಲ್ಲಿತ್ತು. ಇದನ್ನು ಕಂಡ ಜನಸಾಮಾನ್ಯರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ನೋಡಿ ಸ್ವಾಮಿ ನಿಮ್ಮದೇ ಸಿಬ್ಬಂದಿ ಏನ್ ಮಾಡ್ತಿದ್ದಾರೆ ಅಂತ ಪ್ರಶ್ನೆ ಕೂಡ ಮಾಡಿದ್ದರು.
ಪ್ರತಿ 2ನೇ ಶನಿವಾರ ನಡೆಯುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಕಮಿಷನರ್ ಕಮಲ್ ಪಂತ್ಗೆ ಜನರು ನೇರವಾಗಿ ಟೋಯಿಂಗ್ ಸಿಬ್ಬಂದಿ ಮಾಡುತ್ತಿರುವ ಎಲ್ಲಾ ದೌರ್ಜನ್ಯದ ಬಗ್ಗೆ ವಿಡಿಯೋ ಸಮೇತ ವಿವರಣೆ ನೀಡಿದ್ದಾರೆ. ಅದನ್ನ ಕಂಡು ಗರಂ ಆದ ಕಮಿಷನರ್ ಕಾರ್ಯಕ್ರಮ ಮುಗಿಸಿದ ಕೂಡಲೇ ಟ್ರಾಫಿಕ್ ಕಮಿಷನರ್ ಜೊತೆ ಸಭೆ ನಡೆಸಿ ವಾರ್ನ್ ಮಾಡಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಕಡಿವಾಣ ಹಾಕೋಕೆ ಅಂತಾಲೆ ನೂತನ ಪ್ಲ್ಯಾನ್ಗೆ ಮುಂದಾಗಿದ್ದಾರೆ.
ಟೋಯಿಂಗ್ ಸಿಬ್ಬಂದಿ ಏನ್ ಮಾಡ್ತಿದ್ದಾರೆ ಅಂತ ಗೊತ್ತಾಗ್ತಿದೆ. ಇದರ ಬಗ್ಗೆ ಜನ ಸಾಮಾನ್ಯರೂ ಕೂಡ ನಮಗೆ ದೂರು ನೀಡಿದ್ದಾರೆ. ಸದ್ಯ ಈ ಕುರಿತು ಟ್ರಾಫಿಕ್ ಕಮಿಷನರ್ಗೆ ತಿಳಿಸಿದ್ದೇನೆ. ಇನ್ನು ಮುಂದೆ ಟೋಯಿಂಗ್ ಸಿಬ್ಬಂದಿ ಯೂನಿಫಾರ್ಮ್ಗೆ ಕ್ಯಾಮೆರಾ ಹಾಗೂ ಡೆಡಿಕೇಟೆಡ್ ಸೆಲ್ ತೆರೆಯಲು ನಿರ್ಧರಿಸಿದ್ದೇವೆ, ಆದಷ್ಟು ಬೇಗ ಇದಕ್ಕೆ ಬ್ರೇಕ್ ಹಾಕುತ್ತೇವೆ.
-ಕಮಲ್ ಪಂತ್, ಕಮಿಷನರ್, ಬೆಂಗಳೂರು
ಟೋಯಿಂಗ್ ಸಿಬ್ಬಂದಿ ಮಾಡ್ತಿರುವ ದೌರ್ಜನ್ಯದ ಕುರಿತು ಸದ್ಯ ಕಮಿಷನರ್ ಒಂದು ದಿಟ್ಟ ನಿರ್ಧಾರ ತಾಳಿದ್ದು ಯೂನಿಫಾರ್ಮ್ ಜೊತೆ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ. ಆ ಮೂಲಕ ಅವರು ಮಾಡುತ್ತಿರುವ ಅನ್ಯಾಯಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಯಾವುದೇ ಜನಸಾಮಾನ್ಯರು ದೂರು ಕೊಡಬೇಕು ಅಂದ್ರೆ ಅದಕ್ಕೆ ಡೆಡಿಕೇಟೆಡ್ ಸೆಲ್ ತೆರೆದು ಟೋಯಿಂಗ್ ಸೆಲ್ ಅಂತ ಮಾಡೋಕೆ ನಿರ್ಧರಿಸಿದ್ದಾರೆ.