ನವದೆಹಲಿ : ರೈತರ ಹೋರಾಟವನ್ನು ಬೆಂಬಲಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕರು ವಿಧಾನಸಭೆಯಲ್ಲಿ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದರು
ನಾನು ಮೊದಲು ಈ ದೇಶದ ಪ್ರಜೆ, ನಂತರ ಮುಖ್ಯಮಂತ್ರಿ
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರುದ್ಧ ಆಪ್ ಸರ್ಕಾರ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, ಬಿಜೆಪಿ ಚುನಾವಣೆಗಾಗಿ ಹಣ ಸಂಗ್ರಹಿಸಲು ಈ ಕಾನೂನುಗಳನ್ನು ಮಾಡಿದೆಯೇ ಹೊರತು, ರೈತರಿಗಲ್ಲ. ಹೊಸ ಕೃಷಿ ಕಾನೂಗಳ ಪ್ರತಿಯನ್ನು ಹರಿದು ಹಾಕುವುದರಲ್ಲಿ ನನಗೆ ನೋವಿದೆ, ನಾನು ಇದನ್ನು ಉದ್ದೇಶಿಸಿರಲಿಲ್ಲ. ಆದರೆ, -2 ಡಿಗ್ರಿ ಸೆಲ್ಸಿಯಸ್ ಇರುವ ತಾಪಮಾನದಲ್ಲಿ ಬೀದಿಗಳಲ್ಲಿ ಮಲಗಿರುವ ನನ್ನ ದೇಶದ ರೈತರಿಗೆ ನಾನು ದ್ರೋಹ ಮಾಡಲು ಸಾಧ್ಯವಿಲ್ಲ. ನಾನು ಮೊದಲು ಈ ದೇಶದ ಪ್ರಜೆ, ನಂತರ ಮುಖ್ಯಮಂತ್ರಿ ಎಂದು ಭಾವನಾತ್ಮಕವಾಗಿ ಹೇಳಿದರು