ದಿನನಿತ್ಯ ನೂರಾರು ಜನ ಸಂಚರಿಸುವನ ನಗರದ ಮುಖ್ಯ ರಸ್ತೆ ಆದ್ರೆ ರಸ್ತೆ ಅಭಿವೃದ್ಧಿ ಮಾತ್ರ ಮರೀಚಿಕೆ ಯಾಗಿದೆ ದಿನ ಬೆಳಗಾದರೆ ಸಾಕು ಸಂಚರಿಸುವ ಜನರಿಗೆ ತಾಪತ್ರಯ ತಪ್ಪದಾಗಿದೆ.ಹೌದು ಅದು ಕಣಬರ್ಗಿಗ್ರಾಮದ ಮುಖ್ಯ ಪ್ರವೇಶ ದ್ವಾರ ಅಲ್ಲಿಯ ವಾಹನ ಸವಾರರಿಗೆ ಮಾತ್ರ ತಪ್ಪದ ಗೋಳಾಟ.
ಬೆಳಗಾವಿ ಸ್ಮಾರ್ಟ್ ಸಿಟಿ ಅನ್ನೋ ಮಾತು ಈ ರಸ್ತೆ ನೋಡಿದ್ರೆ ಹೆಸರಿಗೆ ಮಾತ್ರ ಅನ್ಸುತ್ತೆ ನಗರದ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಾಲಯ ಇರುವ ಕಂಬರ್ಗಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ಹಲವಾರು ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ ಅಲ್ಲದೆ ಚುನಾವನಿಗೂ ಮೊದಲೇ ಕಾಮಗಾರಿಯನ್ನು ಪೂರ್ಣ ಗೊಳಿಸುವುದಾಗಿ ಹೇಳಿದ್ದ ಅಧಿಕಾರಿಗಳು ಯಾರು ಕೂಡ ತಲೆ ಹಾಕಿಲ್ಲ.
ಸ್ಥಳೀಯರ ವಾಗ್ವಾದ ಮಾಡಿದ ಹಿನ್ನಲೆ ಕೇವಲ ಕಡಿಗಳನ್ನು ಹಾಕಿ ಕೈತೋಳಿದುಕೊಂಡಿದ್ದಾರೆ ಇನ್ನು ಇ ಬಗ್ಗೆ ಕಾರ್ಪೊರೇಟ್ ರ ಸಂಬಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾರು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ ಇದರಿಂದ ಇಲ್ಲಿಯ ಆಸ್ಪತ್ರೆ,ದೇವಾಲಯ, ಹಾಗೂ ಹೊಲಗಳಿಗೆ ಹೋಗುವ ರೈತರು ತುಂಬ ಕಷ್ಟ ಪಡುವಂತಾಗಿದೆ ಅಲ್ಲದೆ ಬೇಗನೆ ಕಾಮಗಾರಿಯನ್ನು ಪೂರ್ಣ ಗೊಳಿಸಿ ಕೊಡದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು