Breaking News
Home / ಜಿಲ್ಲೆ / ಡಿಕೆಶಿ ತರ ಕೆಳಹಂತದ ರಾಜಕಾರಣ ಮಾಡಿ ಅಭ್ಯಾಸ ಇಲ್ಲ: ಸುಧಾಕರ್

ಡಿಕೆಶಿ ತರ ಕೆಳಹಂತದ ರಾಜಕಾರಣ ಮಾಡಿ ಅಭ್ಯಾಸ ಇಲ್ಲ: ಸುಧಾಕರ್

Spread the love

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಿಕೆ ಶಿವಕುಮಾರ್ ತರ ಕೆಳಹಂತದ ರಾಜಕಾರಣ ಮಾಡಿ ನನಗೆ ಅಭ್ಯಾಸ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಡಿಕೆಶಿಗೆ ತಿರುಗೇಟು ನೀಡಿದ್ದಾರೆ

ಅಂದಹಾಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಾಧ್ಯಮಗಳಿಗೆ ಈ ಸಂಬಂಧ ಪ್ರತಿಕ್ರಿಯಿಸಿದ ಸುಧಾಕರ್, ಡಿಕೆ ಶಿವಕುಮಾರ್ ಅವರ ಬೇರೆ ಸದ್ಗುಣಗಳು ನನಗೆ ಗೊತ್ತಿತ್ತು. ಈ ರೀತಿಯ ದೊಡ್ಡ ಗುಣ ಸಹ ಇದೇ ಎಂದು ಈಗ ಗೊತ್ತಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಆಸಲಿಗೆ ಕೊರೊನಾ ತುರ್ತು ಸಂದರ್ಭದಲ್ಲಿ ಸಚಿವ ಸುಧಾಕರ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಕುಟುಂಬಸ್ಥರ ಜೊತೆ ಈಜಾಡುತ್ತಿದ್ದ ಫೋಟೋವನ್ನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಟೀಕೆ ಮಾಡಿದ್ದರು. ಕೊರೊನಾ ತುರ್ತು ಸಂದರ್ಭದಲ್ಲಿ ಜವಾಬ್ದಾರಿ ಮರೆತ ಸಚಿವ ಸುಧಾಕರ್ ಎಂಜಾಯ್ ಮಾಡ್ತಿದ್ದಾರೆ ಅಂತ ದೂರಿದ್ದರು. ತದನಂತರ ಸುಧಾಕರ್ ಆ ಫೋಟೋವನ್ನು ಡಿಲೀಟ್ ಮಾಡಿದ್ದರು.

ಈ ಬಗ್ಗೆ ನೆಲಮಂಗಲದಲ್ಲಿ ಮಾತನಾಡಿದ್ದ ಡಿಕೆಶಿ, ಗಾಳಿ ಮತ್ತು ನೀರಿನಿಂದ ಕೊರೊನಾ ಬೇಗ ಹಬ್ಬುತ್ತಿದೆ ಎಂಬುದು ನನಗೆ ಶಾಕಿಂಗ್ ನ್ಯೂಸ್ ಆಗಿದೆ. ಒಬ್ಬ ಮೆಡಿಕಲ್ ಮಿನಿಸ್ಟರ್ ಗೆ ಬೆಂಗಳೂರು ಜವಾಬ್ದಾರಿ ಕೊಟ್ಟಿದ್ದಾರೆ. ಇಂತವರ ನಡತೆ ಬಹಳ ಮುಖ್ಯ. ಇದು ಅವರ ನೈತಿಕವಾದ ವಿಚಾರ. ಹೀಗಾಗಿ ಇಂದೇ ರಾಜೀನಾಮೆಯನ್ನು ಅವರು ತಮ್ಮ ಸ್ವ-ಇಚ್ಚೆಯಿಂದ ಕೊಡಬೇಕಾಗುತ್ತೆ ಎಂದು ಹೇಳಿದ್ದರು.


Spread the love

About Laxminews 24x7

Check Also

ಅದಾನಿ ಮ್ಯಾನೇಜರ್‌ ಮಾತ್ರ, ದುಡ್ಡೆಲ್ಲಾ ಪ್ರಧಾನಿ ನರೇಂದ್ರ ಮೋದಿಯದ್ದು: ಕೇಜ್ರಿವಾಲ್

Spread the love ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ