ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.
ನಿನ್ನೆ ಸಂಜೆ 7 ಗಂಟೆಗೆ ಮತ ಎಣಿಕೆ ಆರಂಭವಾಗಿ, ಮದ್ಯರಾತ್ರಿ 2 ಗಂಟೆಗೆ ಮುಕ್ತಾಯವಾಯಿತು. ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಅವರ ತಂಡ ಸೋಲು ಅನುಭವಿಸಿದೆ.
ಆರಂಭದಲ್ಲಿ ನಾಸೀರ್ ಬಾಗವಾನ್ ಬೆಂಬಲಿತ ತಂಡದ ಮಹಿಳಾ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿದ್ದರು. ಬಳಿಕ ಅ ವರ್ಗ, ಬ ವರ್ಗ ಮತ್ತು ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿ ನಾಸೀರ್ ಬಾಗವಾನ್ ಅವರ ಗುಂಪಿಗೆ ಭರ್ಜರಿ ಜಯ ದೊರಕಿಸಿಕೊಟ್ಟರು.
ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2452 ಮತಗಳಲ್ಲಿ,2049 ಮತಗಳು ಚಲಾವಣೆ ಆಗಿದ್ದವು
ಗೆಲವು ಸಾಧಿಸಿದ ಅಭ್ಯರ್ಥಿಗಳ ವಿವರ: ಗಂದಿಗವಾಡದ ನಾಶೀರುದ್ದಿನ ಬಾಗವಾನ್, ಅಶೋಕ ಯಮಕನಮರಡಿ, ಚಿಕ್ಕಮುನವಳ್ಳಿಯ ಅಶೋಕ ಬೆಂಡಿಗೇರಿ, ದಾಸ್ತಿಕೊಪ್ಪದ ಮಂಜುನಾಥ ಪಾಟೀಲ, ಮಲ್ಲಾಪುರ ಕೆ.ಎ.ಲಕ್ಷ್ಮಣ ಎಮ್ಮಿ, ಹುಲಿಕಟ್ಟಿ ಸಿದ್ದಪ್ಪ ದೊರೆಪ್ಪನವರ, ದೇವರಶಿಗಿಹಳ್ಳಿ ಭರತೇಶ ಶೇಬಣ್ಣವರ, ಎಂ.ಕೆ.ಹುಬ್ಬಳ್ಳಿ ಬಸವರಾಜ ಬೆಂಡಿಗೇರಿ, ಸಂಜೀವ್ ಹುಬಳ್ಯೆಪ್ಪನವರ, ಕಾದರವಳ್ಳಿ ಗ್ರಾಮದ ಜ್ಯೋತಿಬಾ ಹೈಬತ್ತಿ, ಇಟಗಿ ಬಸವರಾಜ ಪುಂಡಿ, ಬೈಲೂರು ಶಂಕರಗೌಡ ಪಾಟೀಲ, ತಿಗಡೊಳ್ಳಿ ಸಾವಂತ ಕಿರಬನವರ, ಬೋಗೂರ ಗ್ರಾಮದ ಮೀನಾಕ್ಷಿ ನೆಲಗಳಿ, ಹಿರೇಬಾಗೇವಾಡಿಯ ಲಕ್ಷ್ಮಿ ಅರಳಿ ಕಟ್ಟಿ ಗೆಲವು ಸಾಧಿಸಿದ ಅಭ್ಯರ್ಥಿಗಳಾಗಿದ್ದಾರೆ.