Breaking News
Home / ಅಂತರಾಷ್ಟ್ರೀಯ / ಬಾಂಗ್ಲಾದೇಶದ ಢಾಕಾದಲ್ಲಿ ಮನಕಲುಕುವ ಘಟನೆ

ಬಾಂಗ್ಲಾದೇಶದ ಢಾಕಾದಲ್ಲಿ ಮನಕಲುಕುವ ಘಟನೆ

Spread the love

ಢಾಕಾ: ಬಾಂಗ್ಲಾದೇಶದ ಢಾಕಾದಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಸರ್ಕಾರ ರಿಕ್ಷಾ ಸೀಜ್ ಮಾಡಿದೆ. ಇನ್ನೊಂದೆಡೆ ರಿಕ್ಷಾ ಕಳೆದುಕೊಂಡು ಚಾಲಕರು ಕಣ್ಣೀರಿಡುತ್ತಿದ್ದಾರೆ. ಇಂತಹ ಮೂವರಿಗೆ ಅಪರಿಚಿತರೊಬ್ಬರು ಮೂರು ಹೊಸ ಆಟೋ ಕೊಡಿಸುವ ಮೂಲಕ ಅವರ ಜೀವನಕ್ಕೆ ಆಸರೆಯಾಗಿದ್ದಾರೆ.

ರಿಕ್ಷಾ ನಡೆಸುತ್ತಿದ್ದ ಫಜ್ಲೂರ್ ರಹಮಾನ್ ತಮ್ಮ ರಿಕ್ಷಾ ಕಳೆದುಕೊಂಡು ನಡು ರಸ್ತೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಢಾಕಾ ಸೌತ್ ಸಿಟಿ ಕಾರ್ಪೋರೇಷನ್(ಡಿಎಸ್‍ಸಿಸಿ) ಅಧಿಕಾರಿಗಳು ರಹಮಾನ್ ಆಟೋವನ್ನು ಸೀಜ್ ಮಾಡಿದ್ದಾರೆ. ಢಾಕಾದಲ್ಲಿ ಆಟೋ ರಿಕ್ಷಾಗಳು ಹೆಚ್ಚುತ್ತಿರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹೀಗಾಗಿ ಆಟೋಗಳ ನಿಷೇಧಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆ. ಹೀಗಾಗಿ ಅಧಿಕಾರಿಗಳು ರಿಕ್ಷಾ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಢಾಕಾದಲ್ಲಿ ಬ್ಯಾಟರಿ ಚಾಲಿತ, ಮೊಟರೈಸಡ್ ಸೇರಿದಂತೆ ಎಲ್ಲ ಬಗೆಯ ಆಟೋ ರಿಕ್ಷಾ ಹಾಗೂ ವ್ಯಾನ್‍ಗಳನ್ನು ನಿಷೇಧಿಸಲಾಗಿದೆ. ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಹಮಾನ್ ಅವರ ರಿಕ್ಷಾವನ್ನು ವಶಪಡಿಸಿಕೊಂಡ ಬಳಿಕ ನಡುರಸ್ತೆಯಲ್ಲೇ ಗೋಗರೆದಿದ್ದಾರೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ತಕ್ಷಣವೇ ವಿಡಿಯೋ ವೈರಲ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಜನ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆ ರಹಮಾನ್ ಅವರು ಕೆಲಸ ಕಳೆದುಕೊಂಡಿದ್ದರು. ನಂತರ 69 ಸಾವಿರ ರೂ. ಸಾಲ ಪಡೆದು ಜೀವನೋಪಾಯಕ್ಕಾಗಿ ಕೇವಲ 15 ದಿನಗಳ ಹಿಂದೆ ಬ್ಯಾಟರಿ ಚಾಲಿತ ರಿಕ್ಷಾ ಖರೀದಿಸಿದ್ದರು. ಆದರೆ ಖರೀದಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಇವರ ರಿಕ್ಷಾವನ್ನು ಸೀಜ್ ಮಾಡಿದೆ. ಹೀಗಾಗಿ ಗೋಳಾಡಿದ್ದಾರೆ.

ভাইরাল রিক্সা চালকের সাথে আরও দুইজন রিক্সা চালক ছিলেন যাদের বুক ফাটা কান্না ক্যামেরার ফ্রেমে ধরা পড়েনি আর তাই তাদের…

Posted by Ahsan Bhuiyan on Thursday, October 8, 2020

ಇವರ ಕಷ್ಟದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇವರ ಅರಿತ ಅಪರಿಚಿತ ವ್ಯಕ್ತಿ ಅಹ್ಸಾನ್ ಭುಯಾನ್, ರಹಮಾನ್‍ಗಾಗಿ ಹೊಸ ಆಟೋ ಬುಕ್ ಮಾಡಿದ್ದಾರೆ. ನಾವು ಬಯಸಿದರೆ ಬದಲಾಯಿಸಬಹುದು. ಹೊಸ ರಿಕ್ಷಾ ಆರ್ಡರ್ ಮಾಡಿ ಮನಗೆ ತೆರಳಿದ್ದೇನೆ. ನಂತರದ ದಿನವೇ ಡೆಲಿವರಿ ಆಗಿದೆ ಎಂದು ಭುಯಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆನ್‍ಲೈನ್ ದಿನಸಿ ಮಾರಾಟ ಮಳಿಗೆ ಶ್ವಾಪ್ನೋ ಸಹ ರಹಮಾನ್‍ಗೆ ಸಹಾಯ ಮಾಡಲು ಮುಂದಾಗಿದ್ದು, ಇನ್ನೆರಡು ಆಟೋ ಖರೀದಿಸಿದೆ. ಹೀಗಾಗಿ ಹೋಮ್ ಡೆಲಿವರಿ ಸೇವೆಯನ್ನು ಸಹ ಆರಂಭಿಸಲು ರಹಮಾನ್ ಯೋಚಿಸಿದ್ದಾರೆ. ಅಲ್ಲದೆ ರಹಮಾನ್ ಜೊತೆಗಿದ್ದ ಇನ್ನಿಬ್ಬರು ಚಾಲಕರಿಗೂ ಭುಯಾನ್ ಅವರು ಆಟೋ ಬುಕ್ ಮಾಡಿದ್ದಾರೆ. ಈ ಮೂಲಕ ಕಷ್ಟದಲ್ಲಿರುವ ಚಾಲಕರ ನೆರವಿಗೆ ನಿಂತಿದ್ದಾರೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ