ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲು ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸ ಬೇಕು ಎಂದು ಬೆಳಗಾವಿ ಎಸ್ ಪಿ ಸಂಜೀವಕುಮಾರ ಹೇಳಿದರು.
ಅವರು ಇಂದು ಹುಕ್ಕೇರಿ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಿಪ್ಪಾಣಿ ನಗರದ ಕುರ್ಲಿ ಗ್ರಾಮದಲ್ಲಿ ಪತ್ರಕರ್ತರು ಎಂದು ಹೇಳಿ ಮಹಿಳೆಯರು ಇದ್ದ ಮನೆಗೆ ಪ್ರವೇಶಿಸಿ ನಿಮ್ಮ ಮನೆಯಲ್ಲಿ ಆಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ದಾಸ್ತಾನು ಮಾಡಿದ್ದಿರಿ ಇದನ್ನು ವಿಡಿಯೋ ಮಾಡಿ ಪ್ರಸಾರ ಮಾಡಲಾಗುವದು ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ,
ಮನೆಯಲ್ಲಿದ್ದ ಮಹಿಳೆ ಅವರ ಚಲನ ವಲನಗಳನ್ನು ರಹಸ್ಯವಾಗಿ ವಿಡಿಯೋ ಮಾಡಿ ನಿಪ್ಪಾಣಿ ಪೋಲಿಸರಿಗೆ ಮೂವರ ಮೇಲೆ ದೂರು ನೀಡಿದ್ದಾರೆ , ಕಾರಣ ಯಾರೆ ಬಂದು ನಾವು ಪತ್ರಕರ್ತರು ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟರೆ ಅಥವಾ ನಿಮಗೆ ಬ್ಲಾಕ್ ಮೇಲೆ ಮಾಡಲು ಬಂದರೆ ಕೂಡಲೇ 112 ನಂಬರಿಗೆ ಪೋನ ಮಾಡಿ ಪೋಲಿಸರಿಗೆ ಸಹಕರಿಸ ಬೇಕು ಎಂದರು ,
ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ನಂದಗಾಂವಿ, ಗೋಕಾಕ ಡಿ ಎಸ್ಪಿ ಮನೋಜಕುಮಾರ ನಾಯಕ, ಯಮಕನಮರ್ಡಿ ಇನ್ಸಪೇಕ್ಟರ ರಮೇಶ ಛಾಯಾಗೋಳ, ಹುಕ್ಕೇರಿ ಇನ್ಸಪೇಕ್ಟರ ರಫೀಕ ತಹಸಿಲ್ದಾರ ಉಪಸ್ಥಿತರಿದ್ದರು.