ಇದು ಈಗ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ (Passengers) ಅತ್ಯಂತ ಕಿರಿಕಿರಿಯ ಸಂಗತಿಯಾಗಿ ಪರಿಣಮಿಸಿದೆ. ಈ ರೀತಿಯ ವ್ಯವಸ್ಥೆಯ ಕಾರಣದಿಂದ ಬಸ್ ನಿಗದಿತ ಸಮಯಕ್ಕಿಂತ ವಿಳಂಬವಾಗಿ ತಲುಪಿ, ತಡೆರಹಿತ ಬಸ್ಗಳ ನಿರ್ವಹಣೆಯ ಉದ್ದೇಶವನ್ನು ವಿಫಲಗೊಳಿಸುತ್ತಿದೆ. ಅಲ್ಲದೇ, ಹೆದ್ದಾರಿಯಲ್ಲಿ (Highway) ತುಂಬಾ ಸಮಯ ಬಸ್ ನಿಲ್ಲಿಸುವುದು ಇತರ ವಾಹನಗಳ (Vehicle) ಚಾಲಕರ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಕೂಡ.
ಈ ಪರಿಸ್ಥಿತಿಯನ್ನು ಮನಗಂಡು, ಸ್ವತಃ ಪ್ರಯಾಣಿಕರೇ ನಿರ್ವಾಹಕರ ಕೆಲಸಕ್ಕೆ ಕೈ ಹಾಕಿದ್ದಾರೆ, ಅಂದರೆ, ಪ್ರಯಾಣಿಕರೇ ತಮ್ಮ ಸಹ ಪ್ರಯಾಣಿಕರಿಗೆ ಟಿಕೆಟ್ಗಳನ್ನು ವಿತರಿಸಲು ಮುಂದಾಗಿದ್ದಾರೆ. ಇದರಿಂದ, ಸಮಸ್ಯೆ ಪರಿಹಾರ ಆಗಿದ್ದರೂ ಕೂಡ, ಪ್ರಯಾಣಿಕರು ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( ಎನ್ಡಬ್ಲ್ಯೂಕೆಅರ್ಟಿಸಿ) ಸಿಬ್ಬಂದಿಗೆ, ವ್ಯವಹಾರಗಳ ಸ್ಥಿತಿಯ ಬಗ್ಗೆ ಹೆಚ್ಚಿನ ಸಮಾಧಾನ ಹೊಂದಿಲ್ಲ.
ಬಸ್ಸನ್ನು ಬದಿಗಿ ನಿಲ್ಲಿಸಿ ಟಿಕೆಟ್ ವಿತರಣೆ
ನಿತ್ಯವೂ, ಹುಬ್ಬಳ್ಳಿಯಿಂದ ಗದಗ್ ಗೆ ಪ್ರಯಾಣಿಸುವ ನೀಲೇಶ್ ನಾಯ್ಕ್ ಅವರು ಹೇಳುವ ಪ್ರಕಾರ, ಹುಬ್ಬಳಿಯಿಂದ ಗದಗಕ್ಕೆ ಹೋಗಲು ಒಂದು ಗಂಟೆಗಿಂತ ಹೆಚ್ಚು ಸಮಯ ಬೇಕಿಲ್ಲ. ಆದರೆ, ಚಾಲಕ ಟಿಕೆಟ್ ವಿತರಿಸಲು ಬಸ್ಸನ್ನು ಒಂದು ಕಡೆ ನಿಲ್ಲಿಸಿಟ್ಟುಕೊಳ್ಳಬೇಕಾಗುವ ಕಾರಣ, ಈ ಬಸ್ಗಳು 90 ನಿಮಿಷ ತೆಗೆದುಕೊಳ್ಳುತ್ತವೆ.