ಹುಬ್ಬಳ್ಳಿ: ಸೈಬರ್ ಅಪರಾಧಗಳನ್ನು ( Cyber Crime ) ತಡೆಯಲು ಖಾತೆಯಿಂದ ಹಣ ಕಡಿತವಾಗಿರುವ ಸಂದೇಶ ಬಂದ ಕೂಡಲೇ ಅದು ಫ್ರಾಡ್ ( Fraud Case ) ಎಂದು ಗೊತ್ತಾಗುತ್ತಿದ್ದಂತೆಯೇ 112 ಗೆ ಕರೆ ಮಾಡಿದರೆ ಒಂದು ಸಂಖ್ಯೆ ಜನರೇಟ್ ಆಗುತ್ತದೆ. ಅಪರಾಧ ( Crime ) ಎಸಗಿರುವವರ ಖಾತೆ ಮತ್ತು ಹಣ ಕಳೆದುಕೊಂಡಿರುವವ ಖಾತೆಯ ಮಾಹಿತಿಯಿಂದ 20 ನಿಮಿಷಗಳೊಳಗೆ ಖಾತೆ ಬ್ಲಾಕ್ ಮಾಡಿ ಹಣ ಹಿಂದಿರುಗಿ ಪಡೆಯಲು ಸಾಧ್ಯವಾಗಲಿದೆ.
ಅದಕ್ಕೆ ಕಾರಣ, ರಾಜ್ಯದ ಹುಬ್ಬಳ್ಳಿಯಲ್ಲಿ ಅಸ್ಥಿತ್ವಕ್ಕೆ ಬಂದಂತ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲ ( FSL Lab ) ಆಗಿದೆ. ಹೀಗಾಗಿ ಇನ್ಮುಂದೆ ಸೈಬರ್ ವಂಚಕರು ( Cyber fraudsters ) ನಿಮ್ಮ ಖಾತೆಗೆ ಕನ್ನ ಹಾಕಿದ್ರೇ, 20 ನಿಮಿಷಗಳಲ್ಲಿ ಆ ಹಣ ನಿಮ್ಮ ಖಾತೆಗೆ ಮರಳಿ ಬರಲಿದೆ..
ಭಾನುವಾರ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ಉದ್ಘಾಟಿಸಿದರು. ಈ ಬಳಿಕ ಮಾತನಾಡಿದ ಅವರು, ಡಿಎನ್ಎ, ಸೈಬರ್, ಮೊಬೈಲ್, ದಾಖಲೀಕರಣ ಹಾಗೂ ಆಡಿಯೋ ವೀಡಿಯೋ ವಿಭಾಗಗಳನ್ನು ಈ ಭಾಗದಲ್ಲಿ ತೆರೆಯಲಾಗಿದೆ. ಮಾದಕವಸ್ತುಗಳ ವಿಭಾಗವನ್ನು ಪ್ರಾರಂಭಿಸುವ ಅಗತ್ಯವಿದೆ. ಈಗಾಗಲೇ 80 ಮಂದಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ಪಡೆದ ನಂತರ ಹುಬ್ಬಳ್ಳಿ ಮತ್ತು ಬಳ್ಳಾರಿಗೆ ಇವರನ್ನು ನೇಮಕ ಮಾಡಲು ಸೂಚನೆ ನೀಡಲಾಗಿದೆ ಎಂದರು.