ಬೆಳಗಾವಿಯ: ಸುವರ್ಣ ಸೌಧಕ್ಕೆಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ.ಕೆಲವೊಂದು ಮಹತ್ವದ ನಿರ್ಧಾರಗಳನ್ನು
ಕೈಗೊಳ್ಳಲು ತೀರ್ಮಾನಿಸಿದ್ದೇನೆ”
ಇಂದು ರವಿವಾರ ಸಂಜೆಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿತಮ್ಮನ್ನು ಭೆಟ್ಟಿಯಾದ ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯನಿಯೋಗಕ್ಕೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಈ ಭರವಸೆನೀಡಿದ್ದಾರೆ.
ಗಡಿ ಅಭಿವೃದ್ಧಿ ಪ್ರಾಧಿಕಾರ,ಗಡಿ ಸಂರಕ್ಷಣಾ ಆಯೋಗ,ಸುವರ್ಣ ಸೌಧಕ್ಕೆ
ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂಮುಂಬಯಿ ಕರ್ನಾಟಕಕ್ಕೆ ಕಿತ್ತೂರುಕರ್ನಾಟಕ ಎಂದು ಮರು ನಾಮಕರಣಮಾಡುವ ಕುರಿತು ನಿಯೋಗವು ಬೊಮ್ಮಾಯಿ ಅವರೊಂದಿಗೆ ಚರ್ಚಿಸಿತು.
2006 ರ ಫೆಬ್ರುವರಿ 16 ರಂದು
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ2014 ರ ಅಕ್ಟೋಬರ 14 ರಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುವಿಧಾನ ಸೌಧದಲ್ಲಿ ನಾಡು,ನುಡಿ ಹಾಗೂ
ಗಡಿಗೆ ಸಂಬಂಧಿಸಿದಂತೆ ಕನ್ನಡ ಪರಹೋರಾಟಗಾರರ,ಚಿಂತಕರ ಸಭೆಕರೆದಿದ್ದರು.ತಾವೂ ಸಹ ಬೆಳಗಾವಿಯಸುವರ್ಣ ಸೌಧದಲ್ಲಿ ಇಂಥ ಸಭೆಯನ್ನುಕರೆಯಬೇಕೆಂದು ಕ್ರಿಯಾ ಸಮಿತಿಅಧ್ಯಕ್ಷ ಅಶೋಕ ಚಂದರಗಿ ಅವರುಬೊಮ್ಮಾಯಿ ಅವರನ್ನು ಆಗ್ರಹಿಸಿದರು.
ಮುಂದಿನ ಅಕ್ಟೋಬರ 23ರಕಿತ್ತೂರು ಚೆನ್ನಮ್ಮ ರಾಣಿಯ ವಿಜಯೋತ್ಸವದ ಮುನ್ನವೇ ಮುಂಬಯಿಕರ್ನಾಟಕಕ್ಕೆ ಕಿತ್ತೂರು ಕರ್ನಾಟಕಎಂದು ನಾಮಕರಣ ಮಾಡಬೇಕೆಂದು
ಅಶೋಕ ಚಂದರಗಿ ಮನವಿ ಮಾಡಿದರು.ನಿಯೋಗದಲ್ಲಿ ಮೈನೋದ್ದೀನ್ಮಕಾನದಾರ,ಶಿವಪ್ಪ ಶಮರಂತ,ಹರೀಶ ಕರಿಗೊನ್ನವರ,ವಿರೇಂದ್ರ ಗೋಬರಿ
ಇದ್ದರು.