Breaking News

ಸತೀಶ ಜಾರಕಿಹೊಳಿ ಅವರ‌ ಸೂಚನೆಯಂತೆ ನಗರದ 21 ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಜರ್, ಮಾಸ್ಕ್ ಸೇರಿ ಹಣ್ಣುಗಳನ್ನು ವಿತರಿಸಿದರು.

Spread the love

ಬೆಳಗಾವಿ: ಪೊಲೀಸ್ ಕಮಿಷನರೆಟ್, ವರಿಷ್ಠಾಧಿಕಾರಿ ಕಚೇರಿಗಳು ಸೇರಿ ನಗರದ 21 ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಜರ್, ಮಾಸ್ಕ್ ಸೇರಿ ಹಣ್ಣುಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ‌ ಸೂಚನೆಯಂತೆ ವಿತರಿಸಿದರು.

ಕೊರೋನಾ ವಿರುದ್ದ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಪೊಲೀಸ್ ಇಲಾಖೆ ಯವರ ಸನ್ಮಾನದಲ್ಲಿ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಈಗಾಗಲೇ ಸ್ಯಾನಿಟೈಜರ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಗಿದೆ. ಅದರ ಭಾಗವಾಗಿ ಇಂದು ನಗರದ ಎಲ್ಲ ಪೊಲೀಸ್ ಕಚೇರಿಗಳಲ್ಲಿ ಮಾಸ್ಕ್ ಸ್ಯಾನಿಟೈಜರ್ ಜೊತೆ ಕಲ್ಲಂಗಡಿ ಹಣ್ಣುಗಳನ್ನು ವಿತರಿಸಲಾಯಿತು.
ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ ಮತ್ತು ಜಯಶ್ರೀ ಮಾಳಗಿ ಅವರ ನೇತೃತ್ವದಲ್ಲಿ ಸಂಜು ನಾಯಕ್, ಶಿವಲಿಂಗ ಬೆಳಗಾವಕರ್ , ಗಿರೀಶ್ ದೊಡಮಣಿ, ಸಂಜಯ್ ರಜಪೂತ, ಅಮಿತ ರಜಪೂತ , ಸಂತೋಷ ವಡ್ಡರ, ಮಹಾಂತೇಶ್ ತುರುಮುರಿ‌ ಈ ಕಾರ್ಯವನ್ನು ನಿರ್ವಹಿಸಲಾಯಿತು.

Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ