ಬೆಂಗಳೂರು : ಅಪರಿಚಿತರಿಬ್ಬರು ನಿಸ್ಸಾಹಯಕ ಸ್ಥಿತಿಯಲ್ಲಿದ್ದವರನ್ನು ಗಮನಿಸಿದ ಚಿಕ್ಕಪೇಟೆ ಸಂಚಾರ ಠಾಣಾ ಅಧಿಕಾರಿ ಆರೈಕೆಗಾಗಿ ಪೋಸ್ಕೊ ಬೆಗ್ಗರ್ ಕೇರ್ ಗೆ ಕಳುಹಿಸಿರುತ್ತಾರೆ.
ಚಿಕ್ಕಪೇಟೆ ಸಂಚಾರ ಠಾಣೆಯ ಅಧಿಕಾರಿ ಶಾಂತರಾಜು ಪಿ. ಎಎಸ್ ಐ ರವರು ಮತ್ತು ಅವರ ತಂಡದಿಂದ ಸಿಟಿ ರೈಲ್ವೆ ಸ್ಟೇಷನ್ ಮುಂಭಾಗ ಇವರ ಅಪರಿಚಿರ ಬಗ್ಗೆ ಮಾನವೀಯತೆ ತೋರಿದ್ದಾರೆ. ಈ ಹಿನ್ನೆಲೆ ಈ ಹೃದಯಸ್ಪರ್ಶಿ ಕಾರ್ಯಕ್ಕೆ ಇಲಾಖಾ ವತಿಯಿಂದಲೂ ಪ್ರಶಂಸೆ ನೀಡಲಾಗಿದೆ.
ಈ ವೇಳೆ ಮಾತನಾಡಿದ ಪಿಎಎಸ್ ಐ ಶಾಂತರಾಜು ಯಾರೇ ನಿಸ್ಸಾಹಕ ಸ್ಥಿತಿಯಲ್ಲಿದ್ದರೂ ನಮ್ಮ ಗಮನಕ್ಕೆ ತನ್ನಿ, ನಿಸ್ಸಾಯಕರ ಪರಿಸ್ಥಿತಿಯನ್ನು ಕರುಣೆ ಇಟ್ಟುಕೊಳ್ಳಿ, ಮಾನವೀಯತೆ ಮನುಷ್ಯನ ಗುಣ ಅದನ್ನು ಸದಾಕಾಲ ರೂಢಿಸಿಕೊಳ್ಳಿ, ಕೈಲಾದಷ್ಟು ಸಹಾಯ ಮಾಡಿದರೆ ಮನುಷ್ಯನ ಧರ್ಮ ಸಾರ್ಥಕತೆ ಮೆರೆದಂತೆ ಎಂದರು.