Breaking News
Home / ರಾಜಕೀಯ / ಸದ್ಯದಲ್ಲೇ ರಾಜಕೀಯ ಪ್ರವೇಶಿಸಲಿದ್ದಾರಾ ಐಪಿಎಸ್​​​ ಅಧಿಕಾರಿ ಭಾಸ್ಕರ್​​ ರಾವ್​​​?

ಸದ್ಯದಲ್ಲೇ ರಾಜಕೀಯ ಪ್ರವೇಶಿಸಲಿದ್ದಾರಾ ಐಪಿಎಸ್​​​ ಅಧಿಕಾರಿ ಭಾಸ್ಕರ್​​ ರಾವ್​​​?

Spread the love

ಬೆಂಗಳೂರು: ಐಪಿಎಸ್​ ಅಧಿಕಾರಿ ಭಾಸ್ಕರ್​​​ ರಾವ್ ಅವರು​​ ರಾಜಕೀಯ ಪ್ರವೇಶಿಸಲು ತೀರ್ಮಾನಿಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್​ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರಿಂದ ಕಾಲ್​​ ಮೇಲೆ ಕಾಲ್​​ ಬರುತ್ತಿದೆಯಂತೆ. ಕಾಂಗ್ರೆಸ್​ ಮತ್ತು ಬಿಜೆಪಿ ಎರಡು ಪಕ್ಷಗಳಿಂದಲೂ ಭಾಸ್ಕರ್​​​ ರಾವ್​ ಅವರಿಗೆ ಆಫರ್​​ ಇದೆಯಂತೆ. ಕಳೆದು 15 ದಿನಗಳಿಂದ ರಾಷ್ಟ್ರೀಯ ನಾಯಕರು ಕಾಲ್​​​​ ಮಾಡಿ ಏನು ತೀರ್ಮಾನ ತೆಗೆದುಕೊಂಡಿರಿ ಎಂದು ವಿಚಾರಿಸಿದ್ದಾರಂತೆ. ಹೀಗೊಂದು ಸುದ್ದಿ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೀಗಾಗಿ ಭಾಸ್ಕರ್​​ ರಾವ್ ಅವರು​​ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಭಾಸ್ಕರ್​​ ರಾವ್ ಅವರು​ ಕಣಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯ ಸಿಎಂ ಯೋಗಿ ಆದಿತ್ಯನಾಥ್​​​​ ವಿರುದ್ಧ ಮುನಿಸಿಕೊಂಡಿದ್ದಾರೆ. ಇವರು ಸಮಾಧಾನ ಮಾಡಲು ಬಲಿಷ್ಠರು ಅದರಲ್ಲೂ ಅಲ್ಲೇ ಕೆಲಸ ಮಾಡಿದ ಬ್ರಾಹ್ಮಣ ಸಮುದಾಯದ ನಾಯಕರನ್ನು ಕಣಕ್ಕಿಳಿಸುವ ಯೋಚನೆ ಬಿಜೆಪಿಯದ್ದು. ಹೀಗಾಗಿ ಬಿಜೆಪಿಗೆ ಬಂದಲ್ಲಿ ಭಾಸ್ಕರ್​​ ರಾವ್​ ಅವರು​​ ಉತ್ತರ ಪ್ರದೇಶದಿಂದಲೇ ರಾಜಕೀಯಕ್ಕೆ ಎಂಟ್ರಿ ಕೊಡಬಹುದು ಎನ್ನಲಾಗುತ್ತಿದೆ.

ಇನ್ನು, ಕಾಂಗ್ರೆಸ್​ ಪಕ್ಷದಿಂದಲೂ ಭಾಸ್ಕರ್​​ ರಾವ್​ ಅವರಿಗೆ​ ಆಫರ್​​ ನೀಡಲಾಗಿದೆ. ಬಸವನಗುಡಿ, ಮಲ್ಲೇಶ್ವರಂ, ಜಯನಗರ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕಿಳಿಯಬಹುದು. ಈ ರೀತಿಯ ಸ್ವಾತಂತ್ರ್ಯವನ್ನ ಕಾಂಗ್ರಸ್ ಪಕ್ಷ ನೀಡಿದೆ ಎನ್ನುವ ಮಾತು ಕೇಳಿ ಬಂದಿದೆ. ಹೀಗಿದ್ದರೂ ಎರಡೂ ಪಕ್ಷಗಳಿಗೆ ಯಾವುದೇ ಉತ್ತರ ಭಾಸ್ಕರ್ ರಾವ್ ಅವರು ನೀಡಿಲ್ಲ.

ಈ ಹಿಂದೆಯೇ ರಾಜಕೀಯಕ್ಕೆ ಬರುವುದಾಗಿ ಭಾಸ್ಕರ್​ ರಾವ್​​ ಅವರು ಹೇಳಿಕೆ ನೀಡಿದ್ದರು. ಇನ್ನು ಎಲ್ಲಾ ಪಕ್ಷವರಿಗೂ ಭಾಸ್ಕರ್​ ರಾವ್​ ಅವರು ಉತ್ತಮ ಸ್ನೇಹಿತರು. ಅದರಲ್ಲಂತೂ ಕೇಂದ್ರ ಗೃಹ ಸಚಿವರಾದ ಅಮಿತ್​​ ಶಾ ಅವರಿಗೆ ಹೆಚ್ಚು ಆಪ್ತರು. ಹೀಗಾಗಿ ಕೇಂದ್ರದಿಂದಲೇ ಭಾಸ್ಕರ್​​ ರಾವ್​ ಅವರು ತಮ್ಮ ರಾಜಕೀಯ ಪ್ರವೇಶ ಮಾಡಬಹುದು ಎಂದು ಹೇಳಲಾಗುತ್ತಿದೆ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ