Breaking News
Home / Uncategorized / ಚೆನ್ನೈ ಸೂಪರ್​ ಕಿಂಗ್ಸ್​ಗೆ ರಾಜಸ್ಥಾನ್​​ ಸವಾಲ್​; ಗೆದ್ದವರ ಹೋರಾಟದಲ್ಲಿ ಯಾರಿಗೆ ಗೆಲುವು..?

ಚೆನ್ನೈ ಸೂಪರ್​ ಕಿಂಗ್ಸ್​ಗೆ ರಾಜಸ್ಥಾನ್​​ ಸವಾಲ್​; ಗೆದ್ದವರ ಹೋರಾಟದಲ್ಲಿ ಯಾರಿಗೆ ಗೆಲುವು..?

Spread the love

ದಿನೇ ದಿನೇ ಕಲರ್​​​​​​​​​​​​​​​​​​​​​​​​​​​​​​ಫುಲ್​ ಲೀಗ್​ನ​​ ರೋಚಕತೆ ಹೆಚ್ಚಾಗ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್​​​ ಮ್ಯಾಚ್​​ಗೆ ವಾಖೆಂಡೆ ಸಜ್ಜಾಗಿದ್ದು, ಇಂದಿನ ಕದನದಲ್ಲಿ ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​ ಕಿಂಗ್ಸ್​​ ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ಗೆದ್ದಿರುವ ಉಭಯ ತಂಡಗಳು, ಗೆಲುವಿನ ಓಟ ಮುಂದುವರಿಸುವ ಲೆಕ್ಕಚಾರದಲ್ಲಿವೆ.

ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಚೆನ್ನೈ ಪಂಜಾಬ್​​ ಕಿಂಗ್ಸ್​​ ವಿರುದ್ಧ ಗೆದ್ದು ಬೀಗಿದೆ. ಇದೀಗ ರಾಜಸ್ಥಾನ್​​ ರಾಯಲ್ಸ್​​​ ವಿರುದ್ಧವೂ ಅದೇ ಗೆಲುವಿನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಪಂಜಾಬ್​ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿದ್ದ ಚೆನ್ನೈ, ರಾಯಲ್ಸ್​ ವಿರುದ್ಧ ತನ್ನದೇ ಆದ ಸ್ಟ್ರಾಟರ್ಜಿ ರೂಪಿಸಿಕೊಂಡು ಕಣಕ್ಕಿಳಿಯುತ್ತಿದೆ. ಆದ್ರೆ ಕೆಲ ಆಟಗಾರರ ವೈಫಲ್ಯ ನಾಯಕ ಮಹೇಂದ್ರ ಸಿಂಗ್​ ಧೋನಿಯ ತಲೆಬಿಸಿ ಹೆಚ್ಚಿಸಿದೆ.

ಸಿಎಸ್​ಕೆಗೆ ತಲೆನೋವು
ಕಳೆದೆರೆಡು ಪಂದ್ಯಗಳಿಂದ ಆರಂಭಿಕರಿಂದ ಉತ್ತಮ ಆರಂಭ ಬಂದಿಲ್ಲ. ಪ್ರಮುಖವಾಗಿ ಯುವ ಆಟಗಾರ ರುತುರಾಜ್​ ಗಾಯಕ್ವಾಡ್​ ವೈಫಲ್ಯ ತಂಡದ ಹಿನ್ನಡೆಗೆ ಕಾರಣವಾಗಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ಧೋನಿಯ ಕಳಪೆ ಆಟ, ಶಾರ್ದೂಲ್​ ಠಾಕೂರ್​ ದುಬಾರಿ ಸ್ಪೆಲ್​ ತಂಡಕ್ಕೆ ತಲೆನೋವು ತಂದಿದೆ. ಇಂದಿನ ಪಂದ್ಯದಲ್ಲಿ ಈ ವೈಫಲ್ಯಗಳನ್ನ ಮೆಟ್ಟಿ ನಿಲ್ಲಬೇಕಾದ ಸವಾಲು ಸಿಎಸ್​ಕೆ ಮುಂದಿದೆ.

ಕೆಲ ಆಟಗಾರರ ವೈಫಲ್ಯದ ನಡುವೆ ಮೊಯಿನ್​ ಆಲಿ, ಸುರೇಶ್​​ ರೈನಾ, ಸ್ಯಾಮ್​ ಕರನ್​ ಪ್ರದರ್ಶನ ಕೊಂಚ ನಿರಾಳತೆ ತಂದಿದೆ. ಇದಲ್ಲದೇ ವೇಗಿ ದೀಪಕ್​ ಚಹರ್​ ಉತ್ತಮ ಲಯ ಹಾಗೂ ಆಲ್​ರೌಂಡರ್ ರವೀಂದ್ರ​ ಜಡೇಜಾ, ಡ್ವೇನ್​​​ ಬ್ರಾವೋ ಎಕಾನಮಿಕಲ್​ ಸ್ಪೆಲ್​ ಬೌಲಿಂಗ್​ ವಿಭಾಗದ ಪ್ಲಸ್​​​ ಪಾಯಿಂಟ್​​ ಆಗಿದೆ. ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಪ್ರದರ್ಶಿಸಿದ್ದ ಆಟ ಆಡಿದರೇ ಗೆಲುವು ಅಸಾಧ್ಯವೇನಲ್ಲ.

ಗೆಲುವಿನ ನಡುವೆ ಸಂಜುಗೆ ಕಾಡ್ತಿದೆ ತಂಡದಲ್ಲಿನ ಸಮಸ್ಯೆ.
ಪಂಜಾಬ್​​ ಕಿಂಗ್ಸ್​​​ ವಿರುದ್ಧ ಹೋರಾಡಿ ಸೋತಿದ್ದ ರಾಜಸ್ಥಾನ್​​ ರಾಯಲ್ಸ್​​ ಡೆಲ್ಲಿ ವಿರುದ್ಧ ಬೌಲರ್​ಗಳ ಸಂಘಟಿತ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ತಂಡಕ್ಕೆ ಬ್ಯಾಟಿಂಗ್​​ ಹೊರೆಯಾಗಿತ್ತಾದರೂ ಅಂತಿಮ ಹಂತದಲ್ಲಿ ಡೇವಿಡ್​​​ ಮಿಲ್ಲರ್​, ಕ್ರಿಸ್​​​ ಮಾರಿಸ್​​ ಸ್ಪೋಟಕ ಆಟ ತಂಡವನ್ನ ಗೆಲುವಿನ ದಡ ಸೇರಿಸಿತ್ತು. ಹೀಗಾಗಿ ಇಂದು ಯೆಲ್ಲೋ ಆರ್ಮಿ ವಿರುದ್ಧ ರಾಜಸ್ಥಾನ್​ ರಾಯಲ್ಸ್​​ ಗೆಲ್ಲೋದು ದೊಡ್ಡ ಸವಾಲೇ ಆಗಿದೆ.

ಆರ್​ಆರ್​ ಸಮಸ್ಯೆ ಏನು..?
ಕಳೆದೆರೆಡು ಪಂದ್ಯಗಳಿಂದ ಉತ್ತಮ ಆರಂಭ ಕಂಡುಕೊಳ್ಳುವಲ್ಲಿ ವಿಫಲವಾಗಿರೋ ರಾಜಸ್ಥಾನಕ್ಕೆ ಜೋಸ್​ ಬಟ್ಲರ್​, ಮನನ್​ ವೋಹ್ರಾ ವೈಫಲ್ಯ ತಲೆನೋವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ, ರಿಯಾನ್​ ಪರಾಗ್​ ಜೊತೆಗೆ ರಾಹುಲ್​ ತೆವಾಟಿಯಾ ವೈಫಲ್ಯ ತಂಡದ ಬ್ಯಾಟಿಂಗ್​ ಶಕ್ತಿಯನ್ನ ಕುಂದಿಸಿದೆ. ಅನುಭವಿ ಸ್ಪಿನ್ನರ್​ಗಳ ಕೊರತೆಯ ಜೊತೆಗೆ ವೇಗಿ ಮುಸ್ತಾಫಿಜುರ್​ ರೆಹಾಮಾನ್​ ದುಬಾರಿ ಆಟವೂ ಸಂಜು ತಲೆನೋವಿಗೆ ಕಾರಣವಾಗಿದೆ.

ಆದ್ರೆ, ಮೊದಲ ಪಂದ್ಯದಲ್ಲಿ ಕಿಲ್ಲರ್​ ಮಿಲ್ಲರ್​ ಹಾಗೂ ಕ್ರಿಸ್​ ಮಾರಿಸ್​ ಬ್ಯಾಟಿಂಗ್​ ಸಂಜು ಆತ್ಮವಿಶ್ವಾಸ ಹೆಚ್ಚಿಸಿದೆ. ಚೇತನ ಸಕಾರಿಯಾ ಜೊತೆಗೆ ಜೈದೇವ್​ ಉನಾದ್ಕತ್​ರ ಉತ್ತಮಲಯ ತಂಡಕ್ಕೆ ಬಲ ತುಂಬಿದೆ. ಆದ್ರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವ ರಾಜಸ್ಥಾನ್​ ರಾಯಲ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ಮಣಿಸಲು ಸೂಪರ್​ ಆಟವನ್ನೇ ಆಡಬೇಕಿದೆ.

ಉಭಯ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿಯೇ ಕಾಣುತ್ತಿವೆ. ಆದ್ರೆ ಚಾಣಾಕ್ಷ ಧೋನಿ ಎದುರು ಚೊಚ್ಚಲ ನಾಯಕತ್ವವಹಿಸಿರುವ ಸಂಜು ಯಾವ ರೀತಿಯ ಸ್ಟ್ರಾಟಜಿ, ಗೇಮ್​ಪ್ಲಾನ್​ ಮಾಡ್ತಾರೆ ಕಾದುನೋಡಬೇಕಿದೆ.


Spread the love

About Laxminews 24x7

Check Also

ಚಾಮರಾಜನಗರದ ಈ ಗ್ರಾಮದಲ್ಲಿ ಸೋಮವಾರ ನಡೆಯಲಿದೆ ಮರು ಮತದಾನ

Spread the love ಬೆಂಗಳೂರು: ಚಾಮರಾಜನಗರ ಲೋಕಸಭಾ (Chamarajanagara Loksabha Constituency) ಕ್ಷೇತ್ರದ ಹನೂರು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ