ಬೆಂಗಳೂರು: ಸಚಿವ, ಎರಡನೇ ವರ್ಷದ ಜಾತ್ರಾ ಸಮಿತಿ ಅಧ್ಯಕ್ಷ ಬಿ.ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಕೃಪ ಅತಿಥಿಗೃಹದಲ್ಲಿ ನಡೆಯಿತು.
ಸಚಿವರು, ಸಂಸದರು ಹಾಗೂ ಶಾಸಕರು ಮತ್ತು ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಮಹಿಳೆಯರು, ಹಾಗೂ ಯುವಕರ ಅಭಿಲಾಷೆಯಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸವಾ೯ನುಮತದಿಂದ ಮೂರನೇ ವಷ೯ದ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಜತೆಗೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಿದರು.
ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಸಭೆಯ ಸಾನಿಧ್ಯ ವಹಿಸಿದ್ದರು. ಸಭೆಯ ಬಳಿಕ ಶ್ರಿಗಳು ಮಾತನಾಡಿ, ಜಾತಿಗಾಗಿ-ಜಾಗೃತಿ, ಜಾಗೃತಿಗಾಗಿ-ಜಾತ್ರೆ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಅಸಂಘಟಿತ ಸಮುದಾಯವನ್ನ ಒಂದೇ ವೇದಿಕೆಗೆ ತಂದು ಪಕ್ಷಾತೀತವಾಗಿ ಸಂಘಟಿತರಾಗಬೇಕು. ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನ ಸರ್ಕಾರಕ್ಕೆ ಮನನ ಮಾಡಿಕೊಡುವ ಒಂದು ಪ್ರಯತ್ನವಾಗಬೇಕು ಎಂದರು.
ಸಂಸದ ರಾಜಾ ಅಮರೇಶನಾಯಕ, ಶಾಸಕ ಸೋಮಲಿಂಗಪ್ಪನವರು, ನಾಗೇಂದ್ರರವರು, ಟಿ. ರಘುಮೂತಿ೯ರವರು, ರಾಜಾ ವೆಂಕಟಪ್ಪ ನಾಯಕ, ಬಸವನಗೌಡ ದದ್ದಲ್ , ಜೆ.ಎನ್ ಗಣೇಶ್ , ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ , ಗಂಗಾಧರ್ ನಾಯಕ ಇದ್ದರು.