ಹಿರೆನಂದಿ: ಸಂತೋಷ್ ಜಾರಕಿಹೊಳಿ ಅವರ ನೇತೃತ್ವದ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಲಕ್ಷ್ಮಿ ದೇವಿ ಮೂರ್ತಿ ಪ್ರತಿಷ್ಠಾಪನೆ,
ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗಿ, ಹಾಗೂ ಜೊತೆಗೆ ಸೂರ್ಯ ಶ್ರೇಷ್ಠ ಜಾರಕಿಹೊಳಿ ಸಣ್ಣ ಸಾಹುಕಾರರು ಶ್ರೀಮತಿ ಜಯಶ್ರೀ ರಮೇಶ್ ಜಾರಕಿಹೊಳಿ, ಹಾಗೂ ಜಯಶ್ರೀ ನಾಯಿಕ ಈ ಒಂದು ಸಮಾರಂಭಕ್ಕೆ ಹಾಜರ್ ಇದ್ದರೂ
ಹೌದು ತಮ್ಮ ಫ್ಯಾಕ್ಟರಿ ಆವರಣ ದಲ್ಲಿ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಅಧ್ಬ್ಬೂತ ವಾದ ಒಂದು ದೇವಾಲಯವನ್ನು ನಿರ್ಮಿಸಿ ಇಂದು ಅಲ್ಲಿ ಲಕ್ಷ್ಮಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿದೆ.ಹಿರೆನಂದಿ ಗ್ರಾಮದಲ್ಲಿ ಭವ್ಯ ಮಂದಿರವನ್ನು ನಿರ್ಮಿಸುವ ಕಾರ್ಯ ಸುಮಾರು ದಿನ ಗಳಿಂದ ನಡೆದಿತ್ತು .
ಇಂದು ಅಲ್ಲಿಯ ಗುರು ಹಿರಿಯರು ಗ್ರಾಮದ ಮುಖ್ಯಸ್ಥರು ಹಾಗೂ ಫ್ಯಾಕ್ಟರಿ ಸಿಬ್ಬಂದಿ ವರ್ಗ ಹಾಗೂ ಪ್ರಮುಖ ವಾಗಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರ ಸಹ ಉಪಸ್ಥಿತಿಯಲ್ಲಿ ಈ ಒಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು
ಸುತ್ತ ಮುತ್ತಲಿನ ಊರಿನಲ್ಲಿ ತಾಯಿಯ ಮೆರವಣಿಗೆ ಮಾಡಿ ಶಾಸ್ತ್ರೋಕ್ತ ವಾಗಿ ವಿಧಿ ವಿಧಾನ ಗಳ ಪ್ರಕಾರ ಇಂದು ಈ ಒಂದು ಕಾರ್ಯಕ್ರಮ ನಡೆಯಿತು.
ಸಹಸ್ರಾರು ಜನರು ಭಾಗಿ ಯಾಗಿ ದೇವಾಲಯ ನಿರ್ಮಾಣದ ಬಗ್ಗೆ ಪ್ರಶಂಸೆಯ ಮಾತು ಗಳನ್ನಾ ಆಡಿದ್ದಾರೆ .
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹೋಗುವ ಮುಂಭಾಗದಲ್ಲಿ ಈ ದೇವಾಲಯ ನಿರ್ಮಿಸಿದ ಸಂತೋಷ್ ಜಾರಕಿಹೊಳಿ ಅವರ್ ಬಗ್ಗೆ ಹೊಗಳಿಕೆಯ ಮಾತುಗಳನ್ನ ಗ್ರಾಮದ ಜನತೆ ಆಡಿದ್ದಾರೆ.
ಇನ್ನು ಇವರ ಈ ಒಂದು ಕಾರ್ಯಕ್ಕೆ ಗ್ರಾಮದ ತುಂಬಾ ಒಳ್ಳೆಯ ಮೆಚ್ಚುಗೆ ವ್ಯಕ್ತ ವಾಗಿದ್ದು ದೈವ ಭಕ್ತ ಇವರು ಎಂದು ಕೂಡ ಗ್ರಾಮದ ಜನರ ಬಾಯಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಅಷ್ಟೇ ಅಲ್ಲದೆ ಪ್ರತಿ ಶನಿವಾರ ಮಾಡುವ ಅನ್ನದಾನ ಕಾರ್ಯಕ್ರಮ,
ಶಾಲಾ ಮಕ್ಕಳಿಗೆ ನೀರಿನ ಫಿಲ್ಟರ್ ಹಾಗೂ ಅನೇಕ ರೀತಿಯ ಸಾಮಾಜಿಕ ಕಾರ್ಯಗಳು ಸಂತೋಷ್ ಜಾರಕಿಹೊಳಿ ಅವರು ತೆರೆ ಹಿಂದೆಯ ಮಾಡುತ್ತಿದ್ದಾರೆ ಇವರ ಕಾರ್ಯಕ್ಕೆ ಒಳ್ಳೆಯದಾಗಲಿ ಎಂದು ಕೂಡ ಗ್ರಾಮಸ್ಥರು ಹಾರೈಸಿದ್ದಾರೆ.
ಇಂದು ಲಕ್ಷ್ಮಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಸಾರೋಹಣ ಸಮಾರಂಭ ಜರುಗಿದ್ದು ದೇವಸ್ಥಾನ ನೋಡಲು ತುಂಬಾ ಸುಂದರವಾಗಿದೆ ಗ್ರಾಮದ ಜನರು ಹಾಗೂ ಸುತ್ತ ಮುತ್ತಲಿನ ಜನ ಸುತ್ತ ಮುತ್ತಲಿನ ಜನ ಈ ಸಮಾರಂಭಕ್ಕೆ ಭಾಗಿಯಾಗಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದು ಕೊಳ್ಳ ಬೇಕು ಎಂಬುದೇ ನಮ್ಮ ಆಶಯ ಕೂಡ ಆಗಿದೆ.
ಇನ್ನು ಈ ಒಂದು ಶುಭ ಸಂಧರ್ಭ ದಲ್ಲಿ, ಹಾಗೂ ಅಪಾರ ಅಭಿಮಾನಿ ಬಳಗ, ಕಾರ್ಖಾನೆಯ ಸಿಬ್ಬಂದಿ ವರ್ಗ, ಹಾಗೂ ಜಾರಕಿಹೊಳಿ ಕುಟುಂಬದ ಅನೇಕರು ಕೂಡ ಭಾಗಿ ಯಾಗಿದ್ದಾರೆ..