Breaking News
Home / ರಾಜ್ಯ / ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ, ಕೆ-4 ಪ್ರೇಕ್ಷೆಪಕ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಯಶಸ್ವಿ

ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ, ಕೆ-4 ಪ್ರೇಕ್ಷೆಪಕ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಯಶಸ್ವಿ

Spread the love

ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ, ಕೆ-4 ಪ್ರೇಕ್ಷೆಪಕ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಯಶಸ್ವಿ

ನವದೆಹಲಿ,ಜ.20- ವೈರಿ ಪಡೆಗಳ ಮೇಲೆ ಅತ್ಯಂತ ನಿಖರ ದಾಳಿ ನಡೆಸುವ ಭಾರತದ ನೌಕಾದಳ ಬತ್ತಳಿಕೆಗೆ ಮತ್ತೊಂದು ಅಘಾತ ಸಾಮಥ್ರ್ಯದ ಪ್ರಬಲ ಶಸ್ತ್ರಾಸ್ತ್ರವೊಂದು ಸೇರ್ಪಡೆಯಾಗಿದೆ. ಸಾಗರ ಗರ್ಭದಲ್ಲಿ ಜಲಾಂತರ್ಗಾಮಿಯಿಂದ ಅಣ್ವಸ್ತ್ರ ಸಾಮಥ್ರ್ಯದ ಕೆ-4 ಪ್ರೇಕ್ಷೆಪಕ ಕ್ಷಿಪಣಿ ಪರೀಕ್ಷೆಯನ್ನು ಆಂಧ್ರಪ್ರದೇಶ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

3,500 ಕಿ.ಲೋ ದೂರದ ವೈರಿ ನೆಲೆಯನ್ನು ನಿಖರವಾಗಿ ತಲುಪ ಬಲ್ಲ ಈ ಖಂಡಾಂತರ ಕ್ಷಿಪಣಿ ನೌಕಾಪಡೆಯ ಐಎನ್‍ಎಸ್ ಹರಿಯಂತ್ ಯುದ್ಧ ಹಡಗು ಮತ್ತು ಸಬ್‍ಮೆರೇನ್‍ನಲ್ಲಿ ಅಳವಡಿಸಬಹುದಾಗಿದೆ. ಆಂಧ್ರದ ಕರಾವಳಿ ಪ್ರದೇಶದಲ್ಲಿ ಸಮುದ್ರದಾಳದಿಂದ ಕೆ-4 ಬ್ಯಾಲಿಸ್ಟಿಕ್ ಮಿಸೈಲ್‍ನ್ನು ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ದಿ ಸಂಘಟನೆ(ಡಿಆರ್‍ಡಿಒ) ದೇಶವಾಗಿ ನಿಮ್ಸಿರುವ ಈ ಕ್ಷಿಪಣಿಯನ್ನು ಮತ್ತಷ್ಟು ಪ್ರಯೋಗಕ್ಕೆ ಒಳಪಡಿಸಿದ ನಂತರ ಅಧಿಕೃತವಾಗಿ ನೌಕಾಪಡೆಯ ಹರಿಯಂತ್ ಯುದ್ದ ಹಡಗು ಮತ್ತು ಕ್ಷಿಪಣಿಗೆ ಅಳವಡಿಸಲಾಗುತ್ತದೆ.  ಈಗಾಗಲೇ ನೌಕಾಪಡೆಯಲ್ಲಿ ಬಿಒ-5 ಕ್ಷಿಪಣಿಯನ್ನು ರಕ್ಷಣೆಗೆ ಇರಿಸಲಾಗಿದ್ದು, ಇದು 700 ಕಿ.ಮೀ ಶ್ರೇಣಿಯ ಸಾಮಥ್ರ್ಯ ಹೊಂದಿದೆ

.


Spread the love

About Laxminews 24x7

Check Also

ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆದಿದ್ದ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ ಇಬ್ಬರು ಶಿಕ್ಷಕರ ಅಮಾನತು

Spread the love ನವದೆಹಲಿ: ಪರೀಕ್ಷಾರ್ಥಿಗಳಿಗೆ ಅವರ ಉತ್ತರಗಳ ಗುಣಮಟ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಉತ್ತರ ಪ್ರದೇಶದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ