Breaking News
Home / ಜಿಲ್ಲೆ / ಚಿಕ್ಕ ಬಳ್ಳಾಪುರ / ಗುಣಮುಖರಾದ ಸೋಂಕಿತರಿಗೆ ಹೂ ಗಿಡ, ಹಣ್ಣು ಕೊಟ್ಟು ಬೀಳ್ಕೊಡುಗೆ

ಗುಣಮುಖರಾದ ಸೋಂಕಿತರಿಗೆ ಹೂ ಗಿಡ, ಹಣ್ಣು ಕೊಟ್ಟು ಬೀಳ್ಕೊಡುಗೆ

Spread the love

ಇದುವರೆಗೂ 8 ಮಂದಿ ಸೋಂಕಿತರು ಗುಣಮುಖ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 5 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಒಂದೇ ಕುಟುಂಬದ ನಾಲ್ವರು ಏಕಕಾಲದಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಗುಣಮುಖರಾದ ನಾಲ್ವರನ್ನ ಇಂದು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಒಂದೇ ಕುಟುಂಬದ ನಾಲ್ವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅವರು ಮನೆಗೆ ಹೋಗುವಾಗ ಸರದಿ ಸಾಲಿನಲ್ಲಿ ನಿಂತು ಚಪ್ಪಾಳೆ ತಟ್ಟಿದ್ದಾರೆ. ಗುಣಮುಖರಾದ 4 ಮಂದಿಗೆ ಹೂವಿನ ಗಿಡ ಹಾಗೂ ಹಣ್ಣು ನೀಡಿ ಬೀಳ್ಕೊಡುಗೆ ನೀಡಲಾಗಿದೆ. ಇದರಿಂದ ಗುಣಮುಖರಾದ ನಾಲ್ವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂಬಂತಾಗಿತ್ತು.

ಈ ವೇಳೆ ತಮ್ಮ ಸಂಸತ ಹಂಚಿಕೊಂಡ ಗುಣಮುಖನಾದ ವ್ಯಕ್ತಿ, ನಾವು ಆಸ್ಪತ್ರೆಗೆ ಬಂದಾಗ ಬರಿ ಕೈಯಲ್ಲಿ ಬಂದಿದ್ದೆವು. ಆದರೆ ಇಲ್ಲಿ ನಮಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ನಮ್ಮನ್ನ ಪ್ರೀತಿ ಅಭಿಮಾನದಿಂದ ಸ್ನೇಹಿತರ ರೀತಿ ನಮ್ಮ ಜೊತೆ ವರ್ತನೆ ಮಾಡಿದರು. ಸದ್ಯ ನಾವು ಗುಣಮುಖರಾಗಿ ಹೋಗುತ್ತಿದ್ದು, ಸರ್ಕಾರ, ಜಿಲ್ಲೆಯ ಜಿಲ್ಲಾಧಿಕಾರಿ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

ಅಂದಹಾಗೆ ಜಿಲ್ಲೆಯಲ್ಲಿ ಇದುವರೆಗೂ 12 ಮಂದಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ 70 ವರ್ಷದ ವೃದ್ಧೆ ಮೃತಪಟ್ಟಿದ್ದರು. ಈ ವೃದ್ಧೆಯಿಂದ ಆಕೆಯ ಮಗ, ಸೊಸೆ, ಸೊಸೆಯ ತಮ್ಮ ಹಾಗೂ ಮೊಮ್ಮಗನಿಗೆ ಸೋಂಕು ತಗುಲಿತ್ತು. ಈಗ ಆ ಒಂದೇ ಕುಂಟುಂಬದ ನಾಲ್ವರು ಸಹ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಾಲ್ಕು ಜನರ ಜೊತೆಗೆ ಜಿಲ್ಲೆಯಲ್ಲಿ ಮೊದಲು ಕೊರೊನಾ ಸೋಂಕಿಗೆ ಗುರಿಯಾಗಿದ್ದ 31 ವರ್ಷದ ವ್ಯಕ್ತಿ ಸಹ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೊದಲು ಸಹ 3 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಒಟ್ಟಾರೆ 12 ಮಂದಿಯಲ್ಲಿ ಒಬ್ಬರು ಮೃತಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದು, ಉಳಿದ ಮೂವರು ಚಿಕಿತ್ಸೆಯಲ್ಲಿದ್ದಾರೆ.

ಜಿಲ್ಲೆಯ ಕೊರೊನಾ ಸೋಂಕಿತರ ವಿವರಗಳು:
1. ರೋಗಿ 19 – ಇಂದು ಡಿಸ್ಚಾರ್ಜ್ (31 ವರ್ಷದ ವ್ಯಕ್ತಿ)
2. ರೋಗಿ 22 – ಈ ಮೊದಲೇ ಡಿಸ್ಚಾರ್ಜ್
3. ರೋಗಿ 37 – ಈ ಮೊದಲು ಡಿಸ್ಚಾರ್ಜ್
4. ರೋಗಿ 53 – ಮೃತ (70 ವರ್ಷದ ವೃದ್ಧೆ)
5. ರೋಗಿ 69 – ಇಂದು ಡಿಸ್ಚಾರ್ಜ್
6. ರೋಗಿ 70 – ಈ ಮೊದಲು ಡಿಸ್ಚಾರ್ಜ್ (31 ವರ್ಷದ ಪ್ರಥಮ ಸೋಂಕಿತನ ತಂದೆ)
7. ರೋಗಿ 71, 72, 73 – ಇಂದು ಡಿಸ್ಚಾರ್ಜ್
8. ರೋಗಿ 94, 181 ಮತ್ತು 191 ಚಿಕಿತ್ಸೆಯಲ್ಲಿದ್ದಾರೆ.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ‌ ಸ್ಪೀಕರ್, ಸಭಾಪತಿಗಳು ಹಸಿರೀಕರಣಕ್ಕೆ ಪಣ ತೊಟ್ಟಿದ್ದಾರೆ

Spread the loveಬೆಳಗಾವಿ: ಸುವರ್ಣಸೌಧದಲ್ಲಿ ಪರಿಸರ ಕಾಳಜಿ ಮೆರೆಯುವ ನಿಟ್ಟಿನಲ್ಲಿ ಸ್ಪೀಕರ್ ಯು ಟಿ ಖಾದರ್ ಚಳಿಗಾಲದ‌ ಅಧಿವೇಶನದಲ್ಲಿ ವಿನೂತನ ಪ್ರಯೋಗವೊಂದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ