ಜಮಖಂಡಿ :ರೈತರ ಜಮೀನಿಗೆ ಖುದ್ದಾಗಿ ಭೇಟಿ ಕೊಟ್ಟು ಅವರು ಬೆಳೆದಿರುವ ಬೆಳೆಗಳನ್ನು ವೀಕ್ಷಣೆ ಮಾಡಿ ಅವರಿಗೆ ಆಗತಕ್ಕಂತಹ ಹಾನಿಯ ಸಂಪೂರ್ಣ ಮಾಹಿತಿ ಪಡೆದುಕೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಾ ಅದರ ಜೊತೆ ಇವತ್ತು ಮಾರುಕಟ್ಟೆಯಲ್ಲಿ ಅವರು ಬೆಳೆದ ಬೆಳೆಗಳನ್ನು ಮಾರಲು ಆಗುತ್ತಿಲ್ಲ ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವಂತಹ ಉದ್ದೇಶವನ್ನು ಇಟ್ಟುಕೊಂಡು ರೈತರಿಂದ ನೇರವಾಗಿ ಖರೀದಿ ಮಾಡಿ ಜಮಖಂಡಿಯಲ್ಲಿ ಇರತಕ್ಕಂತಹ ಬಡಜನರಿಗೆ ಉಚಿತವಾಗಿ ಕೊಡತಕ್ಕಂತಹ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ ಈ ಯೋಜನೆಯಿಂದ ರೈತರಿಗೆ ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿ ಕೊಟ್ಟಂತಾಗುತ್ತದೆ ಹಾಗೂ ಬಡ ಜನರಿಗೆ ದೈನಂದಿನ ಬದುಕಿನಲ್ಲಿ ಆಹಾರದ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಆನಂದ್ ಸಿದ್ದು ನ್ಯಾಮಗೌಡ ಶಾಸಕರು ಹೇಳಿದರು