Breaking News

ಪ್ರವಾಹ ಸಂದರ್ಭದಲ್ಲಿ ಬೆಳೆಹಾನಿ ಪರಿಹಾರ ವಿತರಿಸುವಲ್ಲಿ ಅಕ್ರಮ.

Spread the love

ಬೆಳಗಾವಿ: ಪ್ರವಾಹ ಸಂದರ್ಭದಲ್ಲಿ ಬೆಳೆಹಾನಿ ಪರಿಹಾರ ವಿತರಿಸುವಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ರಾಯಬಾಗ ತಾಲೂಕಿನ ಮೂವರು ಗ್ರಾಮ ಲೆಕ್ಕಿಗರನ್ನು ಅಮಾನತುಗೊಳಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮ ಲೆಕ್ಕಿಗ ಪಿ.ಎಂ ಹಾಲವಡೆರ್, ದಿಗ್ಗೆವಾಡಿಯ ಎಸ್.ಎ. ಬಸ್ತವಾಡೆ, ಭಿರಡಿಯ ಬಿ.ಪಿ ಹಳ್ಳಿ ಅಮಾನತುಗೊಂಡ ಗ್ರಾಮ ಲೆಕ್ಕಿಗರು.

ಬೆಳೆ ಪರಿಹಾರ ವಿತರಸುವಲ್ಲಿ ಅಕ್ರಮ ಎಸಗಿದ ಗ್ರಾಮ ಲೆಕ್ಕಿಗರ ವಿರುದ್ದ ಕ್ರಮ ಜರುಗಿಸಲು ಚಿಕ್ಕೋಡಿ ಎಸಿ, ರಾಯಬಾಗ ತಹಸೀಲ್ದಾರ್ ಅವರಿಗೆ ವರದಿ ನೀಡುವಂತೆ ತಿಳಿಸಿದ್ದರು. ಬೆಳೆ ಪರಿಹಾರಕ್ಕೆ ಸಂಬಂಧಪಟ್ಟಂತೆ ರಾಯಬಾಗ ತಾಲೂಕಿನಲ್ಲಿ ಒಟ್ಟು 799 ತಾಳೆಯಾಗದ ಪ್ರಕರಣ ಪತ್ತೆಯಾಗಿದ್ದವು.

ಇದರಲ್ಲಿ 65 ಪ್ರಕರಣದಲ್ಲಿ ಗ್ರಾಮ ಲೆಕ್ಕಿಗರು ನಿಜವಾದ ಫಲಾನುಭವಿಗಳ ಹೊರಗಿಟ್ಟು, ಅನ್ಯರ ಖಾತೆಗೆ ಹಣ ವರ್ಗಾಯಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಮೂವರು ಗ್ರಾಮಲೆಕ್ಕಿಗರು ಒಟ್ಟು 51 ಪ್ರಕರಣದಲ್ಲಿ ಅನರ್ಹ ಫಲಾನುವಿಗಳ ಖಾತೆಗೆ ಹಣ ಸಂದಾಯ ಮಾಡಿರುವುದು ಸಾಭೀತಾಗಿದ ಹಿನ್ನಲೆ ಅಮಾನತುಗೊಳಿಸ ಸಕ್ಷಮ ಪ್ರಧಾಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.

ಇನ್ನು ಪ್ರಕರಣ ಸಂಬಂಧ ಗ್ರಾಮ ಲೆಕ್ಕಿಗರ ಅಧಿಕಾರಿಗಳಿಗೆ ಸಹಕರಿಸಿದ ಖಾಸಗಿ ಆಪರೇಟರ್, ಅಕ್ರಮ ಹಣ ಸಂಪಾದಿಸಿದ ವ್ಯಕ್ತಿಗಳ ಮೇಲೆ ರಾಯಬಾಗ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ