ಹದಿನಾಳ
ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹದಿನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅಪೆಂಡಿಕ್ಸ-ಇ ಗ್ರಾಮ ಪರಿಮಿತಿ ಯೋಜನೆಯಡಿ ಹದಿನಾಳ ಅಪ್ಪಾಚಿವಾಡಿಯಿಂದ ರಾ.ಹೆ -4 ಕೂಡು ರಸ್ತೆ ಕಿ.ಮೀ ನಂ.1 20 ರಿಂದ 2.50 ವರೆಗೆ ಹಾಗೂ ಭಾವೇಶ್ವರಿ ಮಂದಿರದಿಂದ ನಾಗನಾಥವಾಡಿ ವರೆಗೆ ಸುಮಾರು 1 ಕೋಟಿ 92 ಲಕ್ಷ ರೂಗಳ ಮೊತ್ತದಲ್ಲಿ ರಸ್ತೆ ಅಗಲೀಕರಣ ಹಾಗೂ ಸುಧಾರಣೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೂಮಿಪೂಜೆ ನೆರವೇರಿಸಿ, ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪಪ್ಪಾ ಜಿ ಯವರ ಮಹತ್ವಾಕಾಂಕ್ಷೆ ಭಾಗ್ಯಲಕ್ಷೀ ಯೋಜನೆಯ ಮೂರು ಫಲಾನುಭವಿಗಳಿಗೆ ಭಾಗ್ಯಲಕ್ಷೀ ಬಾಂಡ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ, ಮಾಜಿ ಅಧ್ಯಕ್ಷರಾದ ಶ್ರೀ ಸಂಜಯ ಶಿಂತ್ರೆ, ತಾಲೂಕು ಪಂಚಾಯತ ಸದಸ್ಯ ಶ್ರೀಮತಿ ಲತಾ ಖೋತ, ಶ್ರೀ ಆನಂದರಾವ ಯಾದವ, ಶ್ರೀ ರಂಗರಾವ ಶೇಳಕೆ, ಶ್ರೀ ತುಕಾರಾಮ ಶೇಳಕೆ, ಶ್ರೀ ನಾಮದೇವ ಪಾಡೇಕರ, ಶ್ರೀ ಅಣ್ಣಾಸಾಹೇಬ ಪಾಟೀಲ, ಶ್ರೀ ಸಂಜಯ ಪಾಟೀಲ ಶ್ರೀ ನವನಾಥ ಚೌಗುಲೆ, ಶ್ರೀ ಅಶೋಕ ಕಾಂಬಳೆ, ಶ್ರೀ ಬಿ.ಜೆ ಪಾಟೀಲ, ಶ್ರೀ ರಘುನಾಥ್ ಪಾಟೀಲ, ಶ್ರೀ ಮಚ್ಚೇಂದ್ರ ನಿಖಾಡೆ, ಶ್ರೀ ರಾಜು ಶಿಂತ್ರೆ, ಶ್ರೀ ವಿನೋದ ಮಾನೆ ಹಾಗೂ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು