Home / ರಾಜ್ಯ (page 2403)

ರಾಜ್ಯ

ಅಭಿಮಾನಿಗಳಿಂದ ಶಾಸಕರಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ; ಮಕ್ಕಳಿಗೆ ಸೇಬು ವಿತರಣೆ..

  ಬಾಕ್ಸ್ : ಏಳಪಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ರಮೇಶ ಜಾರಕಿಹೊಳಿ/ಅಭಿಮಾನಿಗಳಿಂದ ಸೇಬಿನ ಹಾರ ಹಾಕಿ ಗ್ರಾಮಕ್ಕೆ ಸ್ವಾಗತ/ಹಾರಕ್ಕೆ ಬಳಸಿದ ಹಣ್ಣುಗಳು ವಸತಿ ಶಾಲೆ ಮಕ್ಕಳಿಗೆ ವಿತರಣೆ ಕೆಲ ದಿನಗಳ ಹಿಂದೆ ಗೋಕಾಕ ಮತಕ್ಷೇತ್ರದ ಏಳಪಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಸ್ವಾಗತಿಸಿ ಗ್ರಾಮಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡಿದ್ದರು.ನಂತರ ಭವ್ಯ ಮೆರವಣಿಗೆ ಮೂಲಕ ಗ್ರಾಮದ ದೇವಸ್ಥಾನ ಗಳಿಗೆ ಭೇಟಿ ನೀಡಿದ …

Read More »

ಬೆಳಗಾವಿ ನಗರದಲ್ಲಿ ಪ್ಲಾಸ್ಟಿಕ್ ಖರೀಧಿಸಿದ್ರೆ,ಮಾರಿದ್ರೆ ಹುಷಾರ್

ಬೆಳಗಾವಿಯಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಖರೀಧಿಸಿದ್ರೆ,ಮಾರಿದ್ರೆ ಹುಷಾರ್….!!! ಬೆಳಗಾವಿ- ಬೆಳಗಾವಿ ನಗರದಲ್ಲಿ ಪ್ಲಾಸ್ಟಿಕ್ ಖರೀದಿ ,ಮತ್ತು ಮಾರಾಟಕ್ಕೆ ಬ್ರೆಕ್ ಹಾಕಲು ಇಬ್ಬರಿಗೂ ದಂಡ ವಿಧಿಸಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಸಮರ್ಪಕವಾಗಿ ಜಾರಿಗೆ ತರುತ್ತೇವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕಣದ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಎಚ್ಚರಿಕೆ ನೀಡಿದ್ದಾರೆ. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಭೆ ನಡೆಸಿ ಇದಾದಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ …

Read More »

ಶಿವಪುರಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿದ್ದೆಗೆಡಿಸುತ್ತಿರುವ ಕರಡಿ:

ಶಿವಪುರಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿದ್ದೆಗೆಡಿಸುತ್ತಿರುವ ಕರಡಿ:ನಿದ್ರಿಸುತ್ತಿರುವ ಅರಣ್ಯ ಇಲಾಖೆ <-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಷ೯ದಿಂದ ಕರಡಿ ಕಾಣಿಸಿಕೊಳ್ಳೋ ಮೂಲಕ ಗ್ರಾಮಸ್ಥರ ರೈತರ ನಿದ್ದೆಗೆಡಿಸುತ್ತಿದೆ.ಆದರೆ ಅರಣ್ಯ ಇಲಾಖೆ ಕರಡಿ ಹಿಡಿಯದೇ ನಿದ್ರೆಗೆ ಜಾರಿದೆ ಎಂದು ಗ್ರಾಮಗಳ ಗ್ರಾಮಸ್ಥರು. ರೈತರು.ಹಿರಿಯರು.ಸಂಘಟನೆಗಳಿಂದ ಇಲಾಖೆ ನಿಲ೯ಕ್ಷ್ಯವಿರುದ್ಧ ತೀವ್ರ ಆಕ್ರೋಶ ವೆಕ್ತವಾಗಿದೆ.ಕೈವಲ್ಯಾಪುರ ಗ್ರಾಮದ ದುರುಗಪ್ಪ.ಹೆಗ್ಡಾಳು.ಸಾಸಲಾವಡ.ಬಿ.ಬಿ.ತಾಂಡ.ಶಿವಪುರ.ಜಂಗಮಸೋವೇನಹಳ್ಳಿ ಗಳಲ್ಲಿಯ ರೈತರು ಕರಡಿದಾಳಿಗೊಳಗಾಗಿ ಖಾಯಂ ಅಂಗಹೂನರಾಗಿದ್ದಾರೆ.ಕೆಲವರಿಗೆ ಪರಿಹಾರವೂ ದೊರಕಿಲ್ಲ ರೈತರಿಗೆ ರೈತರ ಫಲಗಳಿಗೆ ಸೂಕ್ತ …

Read More »

ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿ ಪ್ರಕಟ

ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿ ಪ್ರಕಟ ಬೆಂಗಳೂರು, ಮೇ. 5: ರಾಜ್ಯದ ಗ್ರಾಮ ಪಂಚಾಯಿತಿಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿಎನ್ ಶ್ರೀನಿವಾಸಾಚಾರಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನೀತಿ ಸಂಹಿತೆ ಮೇ 10 ರಂದು ಜಾರಿಯಾಗಲಿದ್ದು, ಜೂನ್ 5 ರಂದು ಫಲಿತಾಂಶ ಪ್ರಕಟವಾಗಲಿದೆ. ಕಡ್ಡಾಯ ಮತದಾನ ಮತ್ತು ಮಹಿಳೆಯರಿಗೆ ಶೇ. 50 ಮೀಸಲು ಕಲ್ಪಿಸುವ ಪಂಜಾಯತ್ ರಾಜ್ ತಿದ್ದುಪಡಿ ಅನ್ವಯ ಚುನಾವಣೆ ನಡೆಯುತ್ತಿರುವುದು ಈ ಬಾರಿಯ ವಿಶೇಷ.[ಪಂಚಾಯಿತಿ …

Read More »

ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕವಿತ ಎ.ಎಸ್. ಅವರಿಗೆ ಚಿನ್ನದ ಪದಕ

ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕವಿತ ಎ.ಎಸ್. ಅವರಿಗೆ ಚಿನ್ನದ ಪದಕ ಧಾರವಾಡ (ಕರ್ನಾಟಕ ವಾರ್ತೆ) ಜ.೦೫: ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಮಟ್ಟದಲ್ಲಿ ಜರುಗಿದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಡಿ.ಎಫ್. ಇರಗಾರ ತಂಡದವರು ಪ್ರಥಮ ಸ್ಥಾನ, ಪ್ರಶಸ್ತಿ ಪಡೆದುಕೊಂಡರು. ೪೦ ವರ್ಷ ಮೇಲ್ಪಟ್ಟ ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಕವಿತ ಎ.ಎಸ್. ಅವರು ಡಬಲ್ಸ್ನಲ್ಲಿ …

Read More »

ನಮ್ಮ ಬೆಳಗಾವಿಯ ಜನರ ಸೇವೆಗೆ 9 ಹೈಟೆಕ್ ಬಸ್’ಗಳ ಲೋಕಾರ್ಪಣೆ”

“ನಮ್ಮ ಬೆಳಗಾವಿಯ ಜನರ ಸೇವೆಗೆ 9 ಹೈಟೆಕ್ ಬಸ್’ಗಳ ಲೋಕಾರ್ಪಣೆ” ಇಂದು ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ನೂತನ ಒಬ್ಬತ್ತು ಹೈಟೆಕ್ ಬಸ್ ಗಳಿಗೆ ಪೂಜೆ ನೆರವೇರಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಬಳಿಕ ನೂತನ ಮಲ್ಟಿ ಎಕ್ಸಿಲ್ ಬಸ್ ನಲ್ಲಿ ಸುವರ್ಣ ವಿಧಾನಸೌಧಕ್ಕೆ ಪ್ರಯಾಣಿಸಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ …

Read More »

ರಾಜ್ಯದಲ್ಲಿ ಶ್ರೀಮಂತರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ,

ರಾಜ್ಯದಲ್ಲಿ ಶ್ರೀಮಂತರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ, ಅಂತವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲಿ ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆಹಾರ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಚಿತ್ರದುರ್ಗ, ಜನವರಿ 05: ರಾಜ್ಯದಲ್ಲಿ ಶ್ರೀಮಂತರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ, ಅಂತವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲಿ. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆಹಾರ ಇಲಾಖೆ ಸಚಿವೆ …

Read More »

ಬೆಳಗಾವಿಗೆ ಬರುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಟೋಲ್ ನಾಕಾದಲ್ಲೇ ತಡೆ

ಬೆಳಗಾವಿ – ಕನ್ನಡ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ಪೋಲೀಸರು ಹಿರೇಬಾಗೇವಾಡಿ ಟೋಲ್ ನಾಕಾದಲ್ಲೇ ತಡೆದ ಘಟನೆ ನಡೆದಿದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಶಿವಸೇನೆಯ ಉದ್ದಟತನ ಖಂಡಿಸಿ ಪ್ರತಿಭಟಿಸಲು ಬೆಳಗಾವಿಗೆ ಬರುತ್ತಿದ್ದ ಕನ್ನಡದ ನಾಯಕನನ್ನು ನಡು ದಾರಿಯಲ್ಲೇ ಪೋಲೀಸರು ತಡೆಹಿಡಿದಿದ್ದಾರೆ. ಮಹಾರಾಷ್ಟದ ಚಂದಗಡ ಶಾಸಕ ರಾಜೇಶ್ ಪಾಟೀಲರಿಗೆ ಬೆಳಗಾವಿಯಲ್ಲಿ ಸನ್ಮಾನ ಮಾಡಿಸಲು ಪೋಲೀಸರು ಭದ್ರತೆ ನೀಡಿ ಈಗ ಕನ್ನಡದ ನಾಯಕನನ್ನು ಬೆಳಗಾವಿ ನಗರ ಪ್ರವೇಶಿಸಲು …

Read More »

ಜೆಎನ್‍ಯು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ಅಟ್ಟಹಾಸ

ಜೆಎನ್‍ಯು  ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಘಟನೆಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೆಎನ್​​ಯು ಕ್ಯಾಂಪಸ್​​ನಲ್ಲಿ ಶಬರಮತಿ ಹಾಸ್ಟೆಲ್​​ ಬಳಿ ಐಶ್​ ಘೋಷ್​​​ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ …

Read More »

ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಕಾವು ಇನ್ನೂ ಆರಿಲ್ಲ.

ಬೆಂಗಳೂರು: ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಕಾವು ಇನ್ನೂ ಆರಿಲ್ಲ. ಪ್ರತಿದಿನವೂ ಪ್ರತಿಭಟನೆಗಳು ನಡೆಯುತ್ತಿದ್ದು, ಕಾಯ್ದೆಯ ವಿರೋಧದ ಬಗ್ಗೆ ಜನ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ. ಇಂದು ಕೂಡ ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಜೋರಾಗಿದ್ದು ನಗರದ 6 ಕಡೆ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನಲ್ಲಿ 6 ಕಡೆ ಪ್ರತಿಭಟನೆ ನಡೆಯುತ್ತಿರುವ ಕಾರಣ ಇಂದು ಬೆಂಗಳೂರಿಗರಿಗೆ ಟ್ರಾಫಿಕ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದೆ. ಶುಕ್ರವಾರ ಆಶಾ ಕಾರ್ಯಕರ್ತೆಯರ …

Read More »