Home / Laxminews 24x7 (page 1970)

Laxminews 24x7

ಸಾರಿಗೆ ಸಚಿವರ ತವರೂರಲ್ಲಿಯೇ ಬಸ್​ಗಾಗಿ ವಿದ್ಯಾರ್ಥಿಗಳ ಪರದಾಟ

ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು ತವರೂರಲ್ಲಿಯೇ ವಿದ್ಯಾರ್ಥಿಗಳು ಬಸ್​ಗಳಿಗಾಗಿ ಪರದಾಟ ನಡೆಸಿದ ಘಟನೆ ನಡೆದಿದೆ. ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ, ಒಂದೇ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬಸ್​ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ನರಕ ದರ್ಶನ ಅನುಭವಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಬಸ್ ಹತ್ತುತ್ತಿದ್ದಾರೆ. ಬಳ್ಳಾರಿಯಿಂದ ಹಡ್ಲಿಗಿ ಮಾರ್ಗವಾಗಿ ಸಂಚಾರ ಮಾಡುವ ಬಸ್​ನಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್​ ಬಾಗಿಲಲ್ಲಿ ನೇತಾಡುತ್ತ ಸಂಚಾರ …

Read More »

ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶ

ಚಿಕ್ಕೋಡಿ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಾವಿರಾರು ಟನ್ ಕಬ್ಬು ಬೆಳೆ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ನಡೆದಿದೆ. ಯಡೂರವಾಡಿ ಮತ್ತು ಮಾಂಜರಿವಾಡಿ ಗ್ರಾಮಕ್ಕೆ ಸೇರಿದ 15 ಕ್ಕೂ ಹೆಚ್ಚು ರೈತರ ಜಮೀನುಗಳ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ ಪಡುತ್ತಿದ್ದಾರೆ.. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಿಂದ 15 …

Read More »

ವೆಂಟಿಲೇಟರ್ ಬೆಡ್ ಸಿಗದೆ ಸಂಬಂಧಿಕರನ್ನು ಕಳೆದುಕೊಂಡೆ: ಬಿಜೆಪಿ ಶಾಸಕ ಹರತಾಳು ಹಾಲಪ್ಪ

ಬೆಂಗಳೂರು: ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪಕ್ಷಾತೀತವಾಗಿ ಶಾಸಕರು ಆಕ್ರೋಶ ತೋಡಿಕೊಂಡ ಘಟನೆಗೆ ಬುಧವಾರ ವಿಧಾನಸಭೆ ಸಾಕ್ಷಿಯಾಯಿತು. ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಬೆಲೆ ಏರಿಕೆ ಚರ್ಚೆಗೆ ಸ್ಪೀಕರ್‌ ಕಾಗೇರಿ ಸಿದ್ದರಾಮಯ್ಯ ಅವರನ್ನು ಕರೆದರು. ಆಗ ಎದ್ದು ನಿಂತ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ನನ್ನ ವಿಷಯವೊಂದಿತ್ತು ಎಂದು ನೆನಪಿಸಿದರು. ಆಗ ಹೌದೌದು ಎನ್ನುತ್ತ ಅವಕಾಶ ನೀಡಿದರು. ಬಳಿಕ ಮಾತನಾಡಿದ ಹಾಲಪ್ಪ ಅವರು, ಪಾರ್ಶ್ವವಾಯು ರೋಗಿಗೆ …

Read More »

ನನ್ನನ್ನು ಬದುಕಿಸಬೇಡಿ, ಸಾಯಬೇಕು: ಧಾರವಾಡದ ಆಸ್ಪತ್ರೆಯಲ್ಲೇ ಶುಶ್ರೂಷಕಿ ಆತ್ಮಹತ್ಯೆ ಯತ್ನ

ಧಾರವಾಡ): ಧಾರವಾಡದ ಹೆಬ್ಬಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಶುಶೂಷಕಿ ಆಸ್ಪತ್ರೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಮಲಾ ನಾಗೇಶ್ವರರಾವ್, ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿಯಾಗಿದ್ದಾರೆ. ಇವರು ಹಿರಿಯ ಆರೋಗ್ಯ ಶುಶ್ರೂಷಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ನೀಡುತ್ತಿರುವುದಾಗಿ ಹೇಳಿದ ಇವರು ತಾವು ಸಾಯಬೇಕು, ನನ್ನನ್ನು ಬದುಕಿಸಬೇಡಿ ಎಂದು ಹೇಳುತ್ತಲೇ ಆಸ್ಪತ್ರೆ ಕೊಠಡಿಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಇವರನ್ನು ಇತರೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ …

Read More »

ಹುಬ್ಬಳ್ಳಿ: ಗಾಯತ್ರಿ ತಪೋವನ ಬಳಿ ತಾಯಿ-ಮಗು ಉದ್ಯಾನ

ಹುಬ್ಬಳ್ಳಿ: ತಡಸ ಗಾಯಿತ್ರಿ ತಪೋವನದ ಬಳಿ ಸುಮಾರು 20 ಎಕರೆ ಜಾಗದಲ್ಲಿ ತಾಯಿ-ಮಗುವಿನ ಕಲಾಕೃತಿ ಉದ್ಯಾನವನ ನಿರ್ಮಾಣಗೊಳ್ಳಲಿದ್ದು, ಗೊಟಗೋಡಿ ರಾಕ್‌ ಗಾರ್ಡನ್‌ ನಿರ್ಮಾತೃ ದಾಸನೂರು ಕುಟುಂಬದಿಂದ ಮತ್ತೂಂದು ಮೈಲುಗಲ್ಲಾಗಲಿದೆ. ಈಗಾಗಲೇ ರಾಕ್‌ ಗಾರ್ಡನ್‌ನಲ್ಲಿ ನಮ್ಮ ಹಳ್ಳಿ ಸೊಗಡು ಸೇರಿದಂತೆ ಮಗುವಿನ ಜನನದಿಂದ ಹಿಡಿದು ಅವನ ಅಂತ್ಯದವರೆಗೂ ತೋರಿಸಿದ್ದಾರೆ. ವರನಟ ಡಾ| ರಾಜಕುಮಾರ ಕಲಾಕೃತಿ, ರೈತನ ಸೊಬಗು ತೋರಿಸುವ ಕಲಾಕೃತಿ ರಾಕ್‌ ಗಾರ್ಡನ್‌ನಲ್ಲಿ ಇಡಲಾಗಿದ್ದು ಎಲ್ಲರ ಮನಸೆಳೆದಿರುವುದು ಇತಿಹಾಸ. ಅಂತಹ ಮತ್ತೂಂದು …

Read More »

ಹುಟ್ಟುಹಬ್ಬದ ದಿನದಂದೇ ವಿದ್ಯುತ್‌ ಸ್ಪರ್ಶಿಸಿ ಮಗು ಸಾವು

ಚಾಮರಾಜನಗರ: ತಾಲ್ಲೂಕಿನ ಕೆಂಗಾಕಿ ಗ್ರಾಮದಲ್ಲಿ ಮೂರು ವರ್ಷ ಹೆಣ್ಣು ಮಗುವೊಂದು ಹುಟ್ಟುಹಬ್ಬದ ದಿನವಾದ ಬುಧವಾರ ವಿದ್ಯುತ್‌ ಸ್ಪರ್ಶದಿಂದಾಗಿ ಮೃತಪಟ್ಟಿದೆ. ಗ್ರಾಮದ ಸಿದ್ಧಲಿಂಗಸ್ವಾಮಿ ಎಂಬುವವರ ಮಗಳು ನಿವೇದಿತಾ ಮೃತಪಟ್ಟ ದುರ್ದೈವಿ. ಬುಧವಾರವೇ ಆಕೆಯ ಹುಟ್ಟುಹಬ್ಬ ಇತ್ತು. ‘ಸಿದ್ಧಲಿಂಗಸ್ವಾಮಿ ಅವರ ಜಮೀನಿನಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಗು ಜಮೀನಿನಲ್ಲಿದ್ದ ಪಂಪ್‌ ಸ್ಟಾರ್ಟರ್‌ ಹತ್ತಿರ ಹೋಗಿದೆ. ಹೇಗೆ ವಿದ್ಯುತ್‌ ಸ್ಪರ್ಶ ಆಯಿತು ಎಂಬುದು ಪೋಷಕರಿಗೂ ಗೊತ್ತಿಲ್ಲ. ಅಸ್ವಸ್ಥಗೊಂಡಿದ್ದ ಮಗುವನ್ನು ಕಬ್ಬಳ್ಳಿಯ …

Read More »

ಗಂಡು ಮಗು ಮಾರಾಟ

ವಿಜಯಪುರ : ಸಾಕಲು ಆಗದ ಕಾರಣಕ್ಕೆ ಗಂಡು ಮಗುವಿನ ಮಾರಾಟ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯ ಮಟ್ಟದ ಕಾಯಕಲ್ಪಪ್ರಶಸ್ತಿ ಪಡೆದ ಜಿಲ್ಲಾಸ್ಪತ್ರೆಯಲ್ಲಿ ಆ.26ರಂದು ಈ ಘಟನೆ ನಡೆದಿರುವುದಾಗಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಸದಾಶಿವ ಕಾಂಬಳೆ ಎಂಬ ಮಹಿಳೆ ಆ.19ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕಸ್ತೂರಿ ಎಂಬ ನರ್ಸ್ ಪರಿಚಯವಾಗಿ ಮಗು ಕೊಡುತ್ತೀಯಾ ಎಂದು ಕೇಳಿದ್ದಾರೆ. ಮನೆಯಲ್ಲಿ …

Read More »

ಎಂಎಲ್‌ಎ ಆದರೂ ಸಹ ಟೋಲ್ ಬೂತ್​ಗಳಲ್ಲಿ ನಮಗೆ ಅವಮಾನ ಆಗುತ್ತಿದೆ

  ವಿಧಾನಸೌಧ: ಎಂಎಲ್‌ಎ ಆದರೂ ಸಹ ಟೋಲ್ ಬೂತ್​ಗಳಲ್ಲಿ ನಮಗೆ ಅವಮಾನ ಆಗುತ್ತಿದೆ. ಪಾಸ್ ಇದ್ದರೂ ಐಡಿ ಕಾರ್ಡ್ ಕೇಳುತ್ತಾರೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿಧಾನಸಭಾ ಕಲಾಪದಲ್ಲಿ‌ ಸರ್ಕಾರದ ಗಮನ ಸೆಳೆದರು. ಐಟಿ ಕಾರ್ಡನ್ನು ಟೋಲ್ಗಳಲ್ಲಿ ತೋರಿಸಿದರೆ ಸ್ಕ್ಯಾನ್ ಮಾಡಬೇಕು ಅಂತಾರೆ. ತುರ್ತು ಸಂದರ್ಭದಲ್ಲಿ ನಮಗೆ ಕೂಡಾ ಪ್ರಯಾಣಿಸಲಾಗುತ್ತಿಲ್ಲ. ನಮ್ಮ ಪಾಸ್‌ಅನ್ನು ಅನುಮಾನವಾಗಿ ನೋಡುತ್ತಾರೆ. ವಿಪಿಐ ಲೈನ್​ನಲ್ಲಿಯೂ ಅವಕಾಶ‌ ನೀಡುತ್ತಿಲ್ಲ ಎಂದು ಶಾಸಕ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ …

Read More »

ಯಡಿಯೂರಪ್ಪನವರನ್ನೇ ಕೆಳಗಿಳಿಸಲಾಯಿತು. ಹೀಗಿರುವಾಗ ನಿಮ್ಮ ಕಾಲೆಳೆಯುವವರೂ ಇದ್ದಾರೆ ಹುಶಾರ್.: ಸಿದ್ದು

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಬಿಎಸ್ ಯಡಿಯೂರಪ್ಪನವರನ್ನೇ ಕೆಳಗಿಳಿಸಲಾಯಿತು. ಹೀಗಿರುವಾಗ ನಿಮ್ಮ ಕಾಲೆಳೆಯುವವರೂ ಇದ್ದಾರೆ ಹುಶಾರ್. ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಸರ್ಕಾರದ ಉಳಿದ ಅವಧಿ ಪೂರೈಸಲಿ ಎಂಬುದು ನನ್ನ ಆಶಯವೆಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನನ್ನ ಪರವಾರಿಗೆ ಶಾಸಕರು ಹಾಗೂ ಇನ್ನಿತರರಿದ್ದಾರೆ. ಆದರೆ ತಮ್ಮನ್ನು ದೆಹಲಿಗೆ ಕಳುಹಿಸಲು ಹುನ್ನಾರ ನಡೆದಿದೆ. ಅದು ತಮಗೂ ತಿಳಿದಿದೆ. ಹೀಗಾಗಿ ಹುಶಾರಾಗಿರಿ. ನೀವು ವಿಧಾನಸಭೆಯಲ್ಲಿ ಇರುವುದು ನಿಮ್ಮಲ್ಲೇ ಕೆಲವರಿಗೆ …

Read More »

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ, ಸಾಕಾರಗೊಳಿಸಲು ರಾಜ್ಯ ಸರ್ಕಾರ ಬದ್ಧ: ಕಾರಜೋಳ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ, ಸಾಕಾರಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅದೇರೀತಿ ಅಂತರ ರಾಜ್ಯ ನದೀ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎಲ್ಲಾ ಕ್ರಮಕೈಗೊಳ್ಳುವುದಾಗಿ ಮಾನ್ಯ ಜಲ ಸಂಪನ್ಮೂಲ ಸಚಿವ ಶ್ರೀ ಗೋವಿಂದ ಎಂ. ಕಾರಜೋಳರವರು ಇಂದು ವಿಧಾನ ಪರಿಷತ್ತಿನಲ್ಲಿ ಘೋಷಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ವಿಧಾನಪರಿಷತ್ತಿನಲ್ಲಿ ಇಂದು ವಿರೋಧ ಪಕ್ಷದ ನಾಯಕ …

Read More »