Breaking News
Home / ಜಿಲ್ಲೆ / ನನ್ನ ಬಗ್ಗೆ ಆಗಿರೋ ಅನಾವಶ್ಯಕ ಚರ್ಚೆಗೆ ತೆರೆ ಬಿದ್ದಿದೆ : ಲಕ್ಷ್ಮಣ ಸವದಿ

ನನ್ನ ಬಗ್ಗೆ ಆಗಿರೋ ಅನಾವಶ್ಯಕ ಚರ್ಚೆಗೆ ತೆರೆ ಬಿದ್ದಿದೆ : ಲಕ್ಷ್ಮಣ ಸವದಿ

Spread the love

ಹುಬ್ಬಳ್ಳಿ, ಫೆ.2- ರಾಷ್ಟ್ರೀಯ ನಾಯಕರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನನ್ನ ಹೆಸರು ಅಂತಿಮಗೊಳಿಸಿದ್ದು, ನನ್ನ ಬಗ್ಗೆ ಆಗಿರೋ ಅನಾವಶ್ಯಕ ಚರ್ಚೆಗೆ ತೆರೆ ಬಿದ್ದಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಪಕ್ಷದ ಅಧ್ಯಕ್ಷರು ಸೇರಿದಂತೆ ಮುಖ್ಯಮಂತ್ರಿಗಳೊಂದಿಗೆ ಭೇಟಿ ನೀಡಿ ಚರ್ಚೆ ಮಾಡಿದ್ದು, ನಾಮಪತ್ರ ಸಲ್ಲಿಕೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.

ಎಚ್.ವಿಶ್ವನಾಥ ಅವರನ್ನು ಮಂತ್ರಿ ಮಾಡುವ ಚಿಂತನೆ ಇದ್ದು, ಈ ದಿಸೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಮಾಡಿ ಸಚಿವರನ್ನಾಗಿ ಮಾಡುತ್ತಾರೆ. ಅಲ್ಲದೇ ಆರ್.ಶಂಕರ ಸಹ ಜೂನ್ ತಿಂಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗುವರು. ಈ ದಿಸೆಯಲ್ಲಿ ಜೂನ್ ತಿಂಗಳಲ್ಲಿ ನಾಲ್ಕು ಸ್ಥಾನ ಖಾಲಿಯಾಗಲಿವೆ ಎಂದರು


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ