Breaking News
Home / ಜಿಲ್ಲೆ / ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

Spread the love

ಬೆಂಗಳೂರು: ಸಿಲಿಕಾನ್ ಸಿಟಿ, ಗ್ರೀನ್‍ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ಈಗ ಕೊರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ಬೆಂಗಳೂರಿನಲ್ಲಿ 2 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಟಿಪ್ಪುನಗರ, ಆನಂದಪುರ ವಾರ್ಡ್‌ಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, 40 ಹಾಟ್‍ಸ್ಪಾಟ್‍ಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ.

ಲಾಕ್‍ಡೌನ್ ಮಾಡಿ ಎಷ್ಟೇ ಮನವಿ ಮಾಡಿ, ಬುದ್ಧಿ ಹೇಳಿದರೂ ಜನರು ಕೇಳುತ್ತಿಲ್ಲ. ಸುಖಾಸುಮ್ಮನೇ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇದರ ಪರಿಣಾಮವೇ ರಾಜ್ಯದಲ್ಲಿನ ಕೊರೊನಾ ಲಿಸ್ಟ್ ನಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನವೂ ಕೇಸ್ ದಾಖಲಾಗುತ್ತಿದ್ದು, ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ 80 ಕೊರೊನಾ ಕೇಸ್ ದಾಖಲಾಗಿದೆ.

ಇದನ್ನ ಮನಗಂಡ ಬಿಬಿಎಂಪಿ ಕೊರೊನಾ ತಡೆಗೆ ಬ್ಲೂ ಪ್ರಿಂಟ್ ಸಿದ್ಧ ಪಡಿಸಿಕೊಂಡಿದೆ. ಬೆಂಗಳೂರಿನ ಆರು ವಲಯಗಳಲ್ಲಿ 40 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಿದೆ. ಇದರಲ್ಲಿ ಈಗಾಗಲೇ ಪಾದರಾಯನಪುರ, ಬಾಪೂಜಿನಗರ, ಜೆಜೆ ನಗರ ವಾರ್ಡ್ ಗಳು ಸೀಲ್‍ಡೌನ್ ಆಗಿದೆ. ಇವುಗಳ ಜೊತೆಗೆ 40 ವಾರ್ಡಿನಲ್ಲಿ ಟಫ್ ಲಾಕ್‍ಡೌನ್ ಜಾರಿಯಾಗಲಿದೆ. ಈ ವಾರ್ಡ್‌ಗಳನ್ನು ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರಬಾರದಂತೆ ನಿಗಾ ವಹಿಸಲು ಪ್ಲಾನ್ ಆಗುತ್ತಿದೆ. ಹೀಗಾಗಿ ಅಡ್ಡ ರಸ್ತೆಗಳನ್ನ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಗ್ತಿದೆ.

ಬೆಂಗಳೂರು ದಕ್ಷಿಣ ವಲಯ-12 ವಾರ್ಡ್
* ಜೆ.ಪಿ.ನಗರ – 4 ಕೇಸ್
* ಶಾಕಂಬರಿನಗರ – 3 ಕೇಸ್
* ಬಾಪೂಜಿನಗರ – 2 ಕೇಸ್
* ಮಡಿವಾಳ – 2 ಕೇಸ್
* ಗಿರಿನಗರ – 1 ಕೇಸ್
* ಆಡುಗೋಡಿ – 1 ಕೇಸ್
* ಸುದ್ದುಗುಂಟೆಪಾಳ್ಯ – 1 ಕೇಸ್
* ಹೊಸಹಳ್ಳಿ – 1 ಕೇಸ್
* ಸುಧಾಮನಗರ – 1 ಕೇಸ್
* ಅತ್ತಿಕುಪ್ಪೆ – 1 ಕೇಸ್
* ಕರಿಸಂದ್ರ – 1 ಕೇಸ್

ಪೂರ್ವ ವಲಯ – 9 ವಾರ್ಡ್
* ವಸಂತನಗರ – 2 ಕೇಸ್
* ಗಂಗಾನಗರ – 1 ಕೇಸ್
* ಲಿಂಗರಾಜಪುರ – 1 ಕೇಸ್
* ಜೀವನ್ ಭೀಮಾನಗರ – 2 ಕೇಸ್
* ರಾಧಕೃಷ್ಣ ಟೆಂಪಲ್ – 4 ಕೇಸ್
* ಸಿ.ವಿ ರಾಮನ್ ನಗರ – 1 ಕೇಸ್
* ರಾಮಸ್ವಾಮಿ ಪಾಳ್ಯ – 1 ಕೇಸ್
* ಮಾರುತಿಸೇವಾ ನಗರ – 1 ಕೇಸ್
* ಸಂಪಗಿರಾಮ ನಗರ

ಪಶ್ಚಿಮ ವಲಯ – 7 ವಾರ್ಡ್ ಗಳು
* ಅರಮನೆನಗರ – 3 ಕೇಸ್
* ನಾಗರಭಾವಿ – 1 ಕೇಸ್
* ನಾಗಪುರ – 1 ಕೇಸ್
* ಶಿವನಗರ – 1 ಕೇಸ್
* ಆಜಾದ್‍ನಗರ – 5 ಕೇಸ್
* ಜಗಜೀವನ್‍ರಾಮ್ ನಗರ – 1 ಕೇಸ್
* ಸುಭಾಷ್ ನಗರ

ಯಲಹಂಕ ವಲಯದಲ್ಲಿ ಒಟ್ಟು 2 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ.
* ಥಣಿಸಂಧ್ರ – 1 ಕೇಸ್
* ಬ್ಯಾಟರಾಯನಪುರ – 1 ಕೇಸ್

ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 2 ಹಾಟ್‍ಸ್ಪಾಟ್ ವಾರ್ಡ್‌ಗಳಿವೆ.
* ಸಿಂಗಸಂದ್ರ – 4 ಕೇಸ್
* ಬೇಗೂರು – 1 ಕೇಸ್

ಮಹದೇವಪುರ ವಲಯದಲ್ಲಿ 6 ವಾರ್ಡ್ ಗಳು ಹಾಟ್‍ಸ್ಟಾಟ್ ಆಗಿವೆ.
* ಹೊರಮಾವು – 2 ಕೇಸ್
* ಹಗದೂರು – 1 ಕೇಸ್
* ರಾಮಮೂರ್ತಿನಗರ – 1 ಕೇಸ್
* ಹೂಡಿ – 1 ಕೇಸ್
* ವರ್ತೂರು – 1 ಕೇಸ್
* ಗರುಡಾಚಾರ್ ಪಾಳ್ಯ – 1 ಕೇಸ್

ಇಷ್ಟು ನಗರಗಳು ಬೆಂಗಳೂರಿನಲ್ಲಿ ಕೊರೊನಾ ಹಾಟ್‍ಸ್ಪಾಟ್‍ಗಳಾಗಿವೆ. ಈ ಬಗ್ಗೆ ಡಿಜಿ ಪ್ರವೀಣ್ ಸೂದ್ ಅವರ ಜೊತೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಅವರು ಚರ್ಚೆ ಮಾಡಿದ್ದಾರೆ. ಹಾಟ್‍ಸ್ಪಾಟ್‍ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಿ ಅಂತ ಭಾಸ್ಕರ್ ರಾವ್ ಅವರಿಗೆ ಡಿಜಿ ಸೂಚಿಸಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಕೂಡ ಕಠಿಣ ಕ್ರಮ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಸಹಾಯವಾಣಿ ಕೇಂದ್ರ ತೆರೆದು ಎಲ್ಲ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕೊಡಲು ಬಿಬಿಎಂಪಿಯಲ್ಲಿ ಚರ್ಚೆಯಾಗಿದೆ. ರೆಡ್ ಝೋನ್‍ಗಳಲ್ಲಿ ಹೊರಗಿನವರು ಒಳಗೆ, ಒಳಗಿನವರು ಹೊರಗೆ ಬಾರದಂತೆ ಕ್ರಮವಹಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.


Spread the love

About Laxminews 24x7

Check Also

ನರಗುಂದ: ಕೃಷಿಹೊಂಡವೇ ಜೀವನಕ್ಕೆ ಆಧಾರ, ಬಹುಹಂತದ ಕೃಷಿಯಿಂದ ಲಕ್ಷಾಂತರ ಆದಾಯ

Spread the loveನರಗುಂದ: ಬರದ ನೆಪ ಒಡ್ಡಿ ಕೈ ಕಟ್ಟಿ ಕುಳಿತರೆ ಕೃಷಿ ಸಾಗಿಸಲಾಗದು. ಮನಸ್ಸಿಟ್ಟು ಕಾಯಕ ಮಾಡಿದರೆ ಕೃಷಿಯಿಂದ ಲಕ್ಷಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ