Breaking News

Uncategorized

ಅಂಕೋಲಾ ಹೆದ್ದಾರಿಯಲ್ಲಿ ಟ್ಯಾಂಕರ್ ಅಗ್ನಿ ಅವಘಡ: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಅಂಕೋಲಾ: ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ರಾಸಾಯನಿಕ ಅಥವಾ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಪಲ್ಟಿಯಾಗಿ ಭಾರಿ ಬೆಂಕಿಗೆ ಆಹುತಿಯಾಗಿದೆ. ರಸ್ತೆಯ ಮಧ್ಯೆಯೇ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿಯುತ್ತಿರುವ ಪರಿಣಾಮ, ಅಂಕೋಲಾ-ಹುಬ್ಬಳ್ಳಿ ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಅಗಸೂರು ಪಂಚಾಯತ್ ವ್ಯಾಪ್ತಿಗೆ ಸೇರುವ ಕಂಚಿನಬಾಗಿಲು ಬಳಿ ಈ ಘಟನೆ ಸಂಭವಿಸಿದೆ. ನೋಂದಣಿ ಸಂಖ್ಯೆಯ ಈ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ …

Read More »

ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸುತ್ತಿರುವ ನೀರು ಮೂರು ದಿನಗಳವರೆಗೆ ಹೆಚ್ಚುವರಿ ವಿಸ್ತರಣೆ

ಗೋಕಾಕ; ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಣೆ ಮಾಡಿರುವುದಕ್ಕೆ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ 10 ದಿನಗಳತನಕ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸಿದ್ದು, ಆದರೂ ಕೌಜಲಗಿ ಉಪ ವಿಭಾಗದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ ಗ್ರಾಮಗಳಿಗೆ ನೀರು …

Read More »

ಸಿದ್ದಾಪುರದ ಮೂಲದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್‌ಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಬಡ್ತಿ

ಸಿದ್ದಾಪುರ :ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ, ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದವರಾದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್ ಅವರಿಗೆ ಕೇಂದ್ರ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ಒಲಿದುಬಂದಿದೆ. ಕೇಂದ್ರ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ, ಇದೀಗ ಕೇಂದ್ರ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ. ದಕ್ಷ ಅಧಿಕಾರಿಗೆ ಒಲಿದ ಉನ್ನತ ಹುದ್ದೆ: …

Read More »

ವಿನಯ್ ಕುಲಕರ್ಣಿ ಕ್ರೌರ್ಯಕ್ಕೆ ನಲುಗಿತ್ತು ಧಾರವಾಡ ಮುರುಘಾಮಠದ ಶಿವಯೋಗಿ ಶ್ರೀ ಹೃದಯ..!

ಸಣ್ಣ ವಯಸ್ಸಿನಲ್ಲಿ ಸಿಕ್ಕ ಪದವಿಯಿಂದ ಈ ಮನುಷ್ಯ ರಾಕ್ಷಸನಾಗಿ ಪರಿವರ್ತನೆಯಾಗಿದ್ದ. ಧಾರವಾಡದ ಮುರುಘಾ ಮಠದ ಶ್ರೇಷ್ಠ ಪರಂಪರೆಯ ಸರಳ‌ ಸಂತ ಶಿವಯೋಗಿ ಸ್ವಾಮೀಜಿ ವಿನಯ್ ಕುಲಕರ್ಣಿ ಎಂಬ ರಾಕ್ಷಸನ ಕೈಯಲ್ಲಿ‌ ಸಿಲುಕಿ ನರಳಿ ಹೋಗಿದ್ದರು. ಮುರುಘಾ ಮಠದ ಹಿರಿಯ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿ ಪಾದ ಕಮಲಗಳಿಂದ ಅರಳಿದ್ದ ಶಿವಯೋಗಿ ಶ್ರೀ ಮಗು ಮನಸ್ಸಿನಿಂದ ಭಕ್ತರ ಹೃಯದ ಗೆದ್ದಿದ್ದರು. ಆದರೆ ಅಧಿಕಾರ ಹಾಗೂ ಮಠದ ಆಸ್ತಿ ಮೇಲೆ ವಿನಯ್ ಕುಲಕರ್ಣಿ …

Read More »

ಜಮಖಂಡಿ ಜೈಲರ್ PSI ವೀರಭದ್ರ ಕುಂಬಾರ ಕಾರ್ಯವೈಖರಿಗೆ ಕಾರಾಗೃಹ DGP ಅಲೋಕ್ ಕುಮಾರ್ ಮೆಚ್ಚುಗೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಾರಾಗೃಹಕ್ಕೆ ಇಂದು ಬೆಳಿಗ್ಗೆ ಧಿಡೀರ್ ಭೇಟಿ ನೀಡಿದ DGP ಅಲೋಕ್ ಕುಮಾರ ಕಾರಾಗೃಹ ವೀಕ್ಷಣೆ ಮಾಡಿ ಕೈದಿಗಳೊಂದಿಗೆ ಮಾತನಾಡಿ ಜೈಲಿನಲ್ಲಿ ನೀಡುತ್ತಿರುವ ಸೌಕರ್ಯ ಕುರಿತು ಚರ್ಚಿಸಿದ್ದಾರೆ. ಅದರಂತೆ ಕೈದಿಗಳು ನಮಗೇ ಯಾವುದೇ ತೊಂದರೆ ಇಲ್ಲ ನಮಗೇ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿದ್ದಾರೆ. ಪ್ರತಿವಾರ ಶುದ್ಧವಾದ ಮಾಂಸಹಾರ ಆಹಾರ ಕೂಡ ನೀಡಲಾಗುತ್ತಿದೆ. ಪ್ರತಿ ನಿತ್ಯ ಸರಿಯಾದ ಸಮಯಕ್ಕೆ ಊಟ ನೀಡಲಾಗುತ್ತಿದೆ ಕೈದಿಗಳು ಹೇಳಿದ್ದಾರೆ. ಜೊತೆಗೆ ಇಲ್ಲಿನ …

Read More »

ನಿರಾಕರಿಸಿದಾಗ ಬೆತ್ತಲೆ ವಿಡಿಯೋ ಕಳುಹಿಸುವಂತೆ ಒತ್ತಡ ಬೆತ್ತಲೆ ವಿಡಿಯೋ ಕಳುಹಿಸಿದ ನಂತರ ಬ್ಲ್ಯಾಕ್‌ಮೇಲ್

ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಮರ್ಮಾಂಗ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ಬೆಂಗಳೂರು – ಲವ್ ಜಿಹಾದಿಯೊಬ್ಬ ತನಗೆ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡು ಹಿಂದೂ ಶಿಕ್ಷಕಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ. ೧. ಒಂದು ವರ್ಷದ ಹಿಂದೆ ಆಂಧ್ರಪ್ರದೇಶದ ಪುಟ್ಟಪರ್ತಿಯ ಅರ್ಷದ್ ಎಂಬಾತ ಬೆಂಗಳೂರಿನ ಸಂತ್ರಸ್ತ ಶಿಕ್ಷಕಿಗೆ ವಾಟ್ಸಾಪ್ ಮೂಲಕ ಅಪರಿಚಿತ ಸಂದೇಶ ಕಳುಹಿಸಿದ್ದ. ‘ನಾನು ನಿನ್ನ ಹಳೆಯ ಸಹಪಾಠಿ’ ಎಂದು ಪರಿಚಯಿಸಿಕೊಂಡು ಆಕೆಯೊಂದಿಗೆ ಸ್ನೇಹದಿಂದ ಮಾತನಾಡಿದ್ದ. ಆತನ ಮಾತನ್ನು …

Read More »

ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಪ್ರಭಾಕರ ಕೋರೆ

ನವದೆಹಲಿ: ಕೆ.ಎಲ್.ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು, ಕೆ.ಎಲ್.ಇ ನಿರ್ದೇಶಕರಾದ ಶ್ರೀ ವಿಜಯ್ ಮೆಟಗುಡ್ ಅವರೊಂದಿಗೆ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕರ್ನಾಟಕದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿಗಾಗಿ ಮನವಿ ಮಾಡಿದರು. ಸವದತ್ತಿ ತಾಲೂಕಿನ ರೈತರ ಹಿತದೃಷ್ಟಿಯಿಂದ ಎನ್.ಹೆಚ್-748ಎ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಬೆಳಗಾವಿ ಜಿಲ್ಲೆಯ ಎನ್.ಹೆಚ್-548ಬಿ …

Read More »

ಪತಿಯನ್ನು ಕೊಂದು ದರೋಡೆ ನಾಟಕವಾಡಿದ ಪತ್ನಿ-ಕೊಲೆ ಪ್ರಕರಣದ ನೈಜ ರೂಪ ಬಯಲು

ಮಧ್ಯಪ್ರದೇಶದ ಧಾರ್‌ನಲ್ಲಿ ಇತ್ತೀಚಿಗೆ ನಡೆದ ದೇವಕೃಷ್ಣ ಪುರೋಹಿತ್ ಕೊಲೆ ಪ್ರಕರಣದಲ್ಲಿ ಪತ್ನಿ ಪ್ರಿಯಾಂಕಾಳ ಭೀಕರ ಸಂಚು ಬಯಲಾಗಿದೆ. ತನ್ನ ಪ್ರಿಯಕರ ಕಮಲೇಶ್ ಜೊತೆ ಸೇರಿ ಪತಿಯನ್ನು ಕೊಲೆ ಮಾಡಲು 1 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ ಪ್ರಿಯಾಂಕಾ, ಅದನ್ನು ದರೋಡೆ ಪ್ರಕರಣವೆಂದು ಬಿಂಬಿಸಲು ನಾಟಕವಾಡಿದ್ದಳು. ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಂದಿದ್ದು, ಪ್ರಿಯಾಂಕಾ ಮತ್ತು ಕಮಲೇಶ್‌ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸುರೇಂದ್ರ ಭಾಟಿಗಾಗಿ ಶೋಧ ನಡೆಯುತ್ತಿದೆ.

Read More »

ಚಿಕ್ಕೋಡಿ ಸಿಟಿಇ ಸಂಸ್ಥೆಯ 10 ನೇ ತರಗತಿ ಸಿಬಿಎಸ್ಇ ವಿದ್ಯಾರ್ಥಿಗಳ ಅಮೋಘ ಸಾಧನೆ

10ನೇ ತರಗತಿ ಸಿಬಿಎಸ್ಇ ಫಲಿತಾಂಶದಲ್ಲಿ ಚಿಕ್ಕೋಡಿಯ ಸಿ ಟಿ ಇ ಸಂಸ್ಥೆಯ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸತತ 11ನೆ ವರ್ಷ ಶೇಕಡ 100%ರಷ್ಟು ಫಲಿತಾಂಶ. ಸನ್ 2025 – 26 ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು; ಇದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 67 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು; ಅತ್ಯುನ್ನತ ದರ್ಜೆಯಲ್ಲಿ 40 ವಿದ್ಯಾರ್ಥಿಗಳು, ಉನ್ನತ ದರ್ಜೆಯಲ್ಲಿ 14 ವಿದ್ಯಾರ್ಥಿಗಳು, …

Read More »

ನಾದಿನಿ ಮಕ್ಕಳನ್ನ ನೋಡಿಕೊಳ್ಳುವ ವಿಚಾರದಲ್ಲಿ ಪತಿ-ಪತ್ನಿಯರ ನಡುವೆ ಗಲಾಟೆ..

ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಆರೋಪ.. ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿಯಲ್ಲಿ ಘಟನೆ.. ಪತ್ನಿ ಜೀವಿತಾ(26)ಸಾವು.. 6ವರ್ಷದ ಹಿಂದೆ ಮೊಟಗಾನಹಳ್ಳಿಯ ವಿನಯ್ ಜೊತೆ ಮದುವೆ.. ಮೊದಲ ಪತ್ನಿ ದೂರವಾದ ಹಿನ್ನೆಲೆ ಎರಡನೇ ಮದುವೆಯಾಗಿದ್ದ.. ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ ಆರೋಪ.. ದಂಪತಿಗೆ ಎರಡು ವರ್ಷದ ಮಗು ಇದೆ.. ವಿನಯ್ ಬಟ್ಟೆ ಕೈ ಮಗ್ಗ ಇಟ್ಟುಕೊಂಡು ಜೀವನ ನಿರ್ವಹಣೆ.. ಬೇಸಿಗೆ ರಜೆಗೆ ನಾದಿನಿ ತೇಜಸ್ವಿನಿಯ ಇಬ್ಬರು ಮಕ್ಕಳು ಮನೆಗೆ ಬಂದಿದ್ರು,. …

Read More »