ಸಾರ್ವಜನಿಕ ಶ್ರೀ ಪಾಂಡುರಂಗ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿದ್ದರು.
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದಲ್ಲಿ 8 ನೇ ವರ್ಷದ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಕೊಟುರ ಶಿವಾಪುರ ಗ್ರಾಮದ ಶ್ರೀ ದ್ಯಾಮವ್ವದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರು ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ, ತವನಪ್ಪಾ ಟೊಪ್ಪನ್ನವರ ( ಪುಟ್ಟು) ಶಿವಲಿಂಗಯ್ಯ ಮಠಪತಿ , ಮಹಾದೇವ ಕುಂದರಗಿ, ಸುರೇಶ್ ಪೋಲಿಸ್, ಸುಕುಮಾರ್ ಟೊಪ್ಪನ್ನವರ, ಚಾಯಪ್ಪಾ ಹುಂಡೆಕರ, ಗೋಪಾಲ ಹುಕ್ಕೇರಿ, ಮಲ್ಲಪ್ಪಾ ಡೊಣ, ಮಹಾವೀರ ಹುಕ್ಕೇರಿ, ಮಹಾದೇವ ಡೋಳಿ, ದುರ್ಗಪ್ಪಾ ನಡುವಿನಮನಿ ಹಾಗೂ ನಾಗೇಶ್ ಸರ್, ಪ್ರಶಾಂತ್ ಪಾಟೀಲ್ ಹಾಗೂ ಸಂತರು, ಮುಖಂಡರು, ಯುವಕರು ಉಪಸ್ಥಿತರಿದ್ದರು.