Breaking News

ತಗ್ಗಿದ ಮಳೆ 3 ಬ್ಯಾರೇಜಗಳು ಸಂಚಾರಕ್ಕೆ ಮುಕ್ತ

Spread the love

ಚಿಕ್ಕೋಡಿ:ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರ ಕಡಿಮೆಯಾಗಿದ್ದು,ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿಗಳ ನೀರಿನ ಮಟ್ಟ ಇಳಿಕೆಯಾಗುತ್ತಿದೆ.ಪರಿಣಾಮ 4 ಬ್ಯಾರೇಜಗಳು ಸಂಚಾರಕ್ಕೆ ‌ಮುಕ್ತವಾಗಿವೆ.
ನದಿಗಳ ಮಟ್ಟ ಕ್ಷೀಣಿಸಿದ್ದು ಕೃಷ್ಣಾ ನದಿಯ ಯಡೂರ-ಕಲ್ಲೋಳ,ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ ವೇದಗಂಗಾ ನದಿಯ ಅಕ್ಕೋಳ-ಸಿದ್ನಾಳ ಮತ್ತು ಭೋಜವಾಡಿ-ಶಿವಾಪುರ ಬ್ಯಾರೇಜ್‌ಗಳು ಸಂಚಾರಕ್ಕೆ ಮುಕ್ತಗೊಂಡಿವೆ. ದೂಧಗಂಗಾ ನದಿಗೆ 7,040 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ 26,415 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನದಿಗಳು ಒಡಲು ತುಂಬಿ ಹರಿಯುತ್ತಿವೆ.
ವೇದಗಂಗಾ ನದಿಯ ಬಾರವಾಡ-ಕುನ್ನೂರ,ಕೃಷ್ಣಾ ನದಿಯ ಮಾಂಜರಿ-ಬಾವನಸೌಂದತ್ತಿ ಬ್ಯಾರೇಜ್ ಗಳು ಇನ್ನೂ ಜಲಾವೃತಗೊಂಡಿವೆ. ನಾಳೆಯವರೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.

Spread the love

About Laxminews 24x7

Check Also

ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಿರಂತರವಾಗಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮ

Spread the loveಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಿರಂತರವಾಗಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮಗಳ ಭಾಗವಾಗಿ, ಇಂದು ಅಲದಾಳ ತರಬೇತಿ ಕೇಂದ್ರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ