ತುಮಕೂರು : ಜಾಡಿಸಿ ಒದ್ರೆ ಎಲ್ಲೋ ಹೋಗಿ ಎಲ್ಲೋ ಬಿದ್ದಿರ್ತಿಯಾ ಎಂದು ಜಿಲ್ಲಾ ಪಂಚಾಯಿತಿ ಎಇಇ ವಿರುದ್ಧ ಸಚಿವ ಮಾಧುಸ್ವಾಮಿ ನಾಲಗೆ ಹರಿಬಿಟ್ಟಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಎಇಇ ರಂಗಸ್ವಾಮಿ ಜೊತೆ ಮಾತನಾಡುವಾಗ ಸಚಿವ ಜೆ.ಸಿ. ಮಾಧುಸ್ವಾಮಿ ಗರಂ ಆಗಿರುವ ಘಟನೆ ನಡೆದಿದ್ದು, ಸಭೆಯಲ್ಲಿ ಸಿಇಇ ವಿರುದ್ಧ ದರ್ಪದ ಮಾತುಗಳನ್ನಾಡಿದ್ದಾರೆ. ರಾಸ್ಕಲ್ ಕತ್ತೆ ಕಾಯೋಕೆ ಹೋಗು, ಜಾಡಿಸಿ ಒದ್ರೆ ಎಲ್ಲೋ …
Read More »Daily Archives: ಜನವರಿ 7, 2021
ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ; ಬಂಧಿತ ಯುವರಾಜ್ ಜೊತೆ ಮತ್ತಷ್ಟು ಸ್ಯಾಂಡಲ್ವುಡ್ ನಟಿಯರ ನಂಟು ಪತ್ತೆ
ಬೆಂಗಳೂರು (ಜ. 7): ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಜೊತೆ ಮತ್ತಷ್ಟು ಸ್ಯಾಂಡಲ್ವುಡ್ ನಟಿಯರು ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಯುವರಾಜ್ ಹಣಕಾಸಿನ ವಹಿವಾಟು ನಡೆಸಿದ್ದ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದರು. ಇದೀಗ ಸ್ಯಾಂಡಲ್ವುಡ್ನ ಹಲವು ನಟಿಯರ ಜೊತೆ ಯುವರಾಜ್ ಅಲಿಯಾಸ್ ಸ್ವಾಮಿ …
Read More »ಮಹಾಲಿಂಗಪುರ ಘಟನೆ ಉಮಾಶ್ರೀ ನಿರ್ದೇಶನದ ಡ್ರಾಮಾ, ನಾವೂ ಪ್ರತಿದೂರು ದಾಖಲಿಸುತ್ತೇವೆ – ಶಾಸಕ ಸಿದ್ದು ಸವದಿ
ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಸದಸ್ಯೆಯರ ಎಳೆದಾಡಿದ ಘಟನೆ, ಗೊಂದಲಕ್ಕೆ ಕಾಂಗ್ರೆಸ್ ಹಾಗೂ ಉಮಾಶ್ರೀ ಕಾರಣ. ನನ್ನ ಹೆಸರು ಕೆಡಿಸಲು ರಾಜಕೀಯ ದುರುದ್ದೇಶದಿಂದ ಉಮಾಶ್ರೀ ಕುತಂತ್ರ ಮಾಡುತ್ತಿದ್ದಾರೆ. ಇದು ಉಮಾಶ್ರೀ ನಿರ್ದೇಶನದ ನಾಟಕ. ಯಾಕಂದ್ರೆ ಉಮಾಶ್ರೀಗೆ ಡ್ರಾಮಾ ಬರುತ್ತೇ. ನಮಗೆ ಬರಲ್ಲ. ಆ ವಾತಾವರಣದಲ್ಲಿ ಅವರು ಬೆಳೆದುಬಂದಿದ್ದಾರೆ. ಅನೇಕ ಸಿನಿಮಾ ಮಾಡಿದ್ದಾರೆ. ಯಾವ್ಯಾವ ಸಂದರ್ಭದಲ್ಲಿ ಯಾವ ಪಾತ್ರ ಮಾಡಬೇಕು ಹಾಗೆ ಚೆನ್ನಾಗಿ ನಟಿಸುತ್ತಾರೆ. ಅದೇ ಪಾತ್ರವನ್ನು ಈಗ ಇಲ್ಲಿ ಮಾಡುತ್ತಿದ್ದಾರೆ ಎಂದು …
Read More »ಫೈನ್ ಹಾಕೋದಷ್ಟೇ ಅಲ್ಲ, ರಸ್ತೆ ಗುಂಡಿ ಮುಚ್ಚುವ ಕಾಯಕದಲ್ಲೂ ಬೆಂಗಳೂರಿನ ಪೊಲೀಸ್
ಬೆಂಗಳೂರು(ಜ. 07): ಅಲ್ಲಲ್ಲಿ ನಿಂತು ಹೆಲ್ಮೆಟ್ ಹಾಕಿಲ್ಲ, ಸೀಟ್ ಬೆಲ್ಟ್ ಹಾಕಿಲ್ಲ ಅಂತ ಜನರಿಗೆ ಕ್ಲಾಸ್ ತಗಳ್ಳೋ ಟ್ರಾಫಿಕ್ ಪೊಲೀಸರು ಈಗ ಬಿಬಿಎಂಪಿ ಜೊತೆ ಸೇರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಹಾಯವಾಗುತ್ತಿದ್ದಾರೆ. ಪಾಟ್ಹೋಲ್ಸ್ನಿಂದಾಗಿ ಇದನ್ನು ಹೆಂಗಪ್ಪಾ ಸರಿ ಮಾಡೋದು ಅಂತ ತಲೆಬಿಸಿಮಾಡಿಕೊಂಡಿದ್ದ ಬಿಬಿಎಂಪಿ ಕೈ ಹಿಡಿದಿದ್ದು ಬೆಂಗಳೂರಿನ ಟ್ರಾಫಿಕ್ ಪೊಲೀಸರು. ಕಳೆದ ಕೆಲ ತಿಂಗಳಿನಿಂದ ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಪೊಲೀಸರೂ ದುಡಿಯುತ್ತಿದ್ದಾರೆ. ಈವರೆಗೆ 6,654 ರಸ್ತೆಗುಂಡಿಗಳನ್ನ ಪತ್ತೆ …
Read More »ಕೊರೋನಾ ದೃಢ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಜನ ಶಿಕ್ಷಕರಿಗೆ ಕೊರಾನಾ ದೃಡವಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಅದರಲ್ಲಿ ಶಾಲೆಗಳಾದ ಕನಸಗೇರಿ ಪ್ರಾಥಮಿಕ ಶಿಕ್ಷಕ ಹಾಗೂ ಹೀರೆನಂದಿ ಪ್ರೌಡಶಾಲೆಯ ಒರ್ವ ಶಿಕ್ಷಕನಿಗೆ ಕೊರಾನಾ ಪೊಸಿಟೀವ್ ದೃಡವಾದ ಹಿನ್ನೆಲೆ ಇಬ್ಬರು ಶಿಕ್ಷಕರು ಸೆಲ್ಪ್ ಹೋಮ್ ಕ್ವಾರೈಂಟೈನ್ ಆಗಿದ್ದು, ಈ ಗ್ರಾಮದ ಎರಡು ಶಾಲೆಗಳನ್ನು ಮೂರು ದಿನ ಬಂದ್ ಮಾಡಿ ಪ್ರಾರಂಭ ಮಾಡುವದಕ್ಕಿಂತ ಮುಂಚೆ ಸ್ಥಳಿಯ ಗ್ರಾಮ ಪಂಚಾಯತಿಯವರಿಂದ ಆ ಶಾಲೆಗಳಿಗೆ ಸಾನಿಟೈಜರ ಮಾಡಿಸಿ …
Read More »ಅತ್ತಿಗೆ-ಮೈದುನರ ನಡುವೆ ಅಕ್ರಮ ಸಂಬಂಧ; ರೋಸಿ ಹೋದ ಗಂಡನಿಂದ ಡಬ್ಬಲ್ ಮರ್ಡರ್
ವಿಜಯಪುರ, (ಜ. 06) ಇದು ನಾಲ್ಕಾರು ವರ್ಷದ ರೋಷ ಜ್ವಾಲಾಗ್ನಿಯಾಗಿ ಸ್ಪೋಟಗೊಂಡ ಕೊಲೆಯಲ್ಲಿ ಅಂತ್ಯವಾದ ಕಥೆ ಇದು. ಹಿರಿಯರು ಕರೆದು ಬುದ್ದಿ ಹೇಳಿದರೂ ಸುಧಾರಿಸದ ಇಬ್ಬರು ರಾತ್ರೋ ರಾತ್ರಿ ಹೆಣವಾಗಿ ಹೋಗಿದ್ದಾರೆ. ಇಲ್ಲಿ ಸಂಬಂಧಕ್ಕಿಂತ ಆಸೆಗಳೇ ಮುಖ್ಯವಾದ ಕಾರಣ ಇಬ್ಬರೂ ಹೆಣವಾಗಿದ್ದಾರೆ. ಹೀಗೆ ಭೀಕರವಾಗಿ ಹೊಲದಲ್ಲಿ ಹೆಣವಾಗಿ ಬಿದ್ದವರು ಅಕ್ಕಪಕ್ಕದ ಬಿದ್ದವರು ಅಕ್ಕಪಕ್ಕದ ತೋಟದ ಮನೆಯವರು. ಮೇಲಾಗಿ ವರಸೆಯಲ್ಲಿ ಅತ್ತಿಗೆ-ಮೈದುನ. ಮಾಡಬಾರದ ಕೆಲಸ ಮಾಡಿ ಹೀಗೆ ಹೊಲದಲ್ಲಿ ಹೆಣವಾಗಿ ಬಿದ್ದಿದ್ದಾರೆ. ಈ …
Read More »ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಮಕ್ಕಳಿಗೆ, ಆನ್ಲೈನ್ ಕ್ಲಾಸ್ ಕೇಳಲು ನೂರು ಮೊಬೈಲ್ಗಳನ್ನು ಉಡುಗೊರೆಯಾಗಿ ಸೋನು ಸೂದ್ ಕೊಟ್ಟಿದ್ದಾರೆ.
ಹೈದರಾಬಾದ್: ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಮಕ್ಕಳಿಗೆ, ಆನ್ಲೈನ್ ಕ್ಲಾಸ್ ಕೇಳಲು ನೂರು ಮೊಬೈಲ್ಗಳನ್ನು ಉಡುಗೊರೆಯಾಗಿ ಸೋನು ಸೂದ್ ಕೊಟ್ಟಿದ್ದಾರೆ. ಸ್ಮಾರ್ಟ್ ಫೋನ್ ಇಲ್ಲದೆ ಆನ್ಲೈನ್ ಶಿಕ್ಷಣ ಪಡೆಯಲು ಮಕ್ಕಳಿಗೆ ಕಷ್ಟವಾಗುತ್ತಿದೆ, ಎಂಬ ಸುದ್ದಿಯನ್ನು ತಿಳಿದ ಸೋನು ಸೂದ್ ತಕ್ಷಣ ನೂರು ಮೊಬೈಲ್ ಫೋನ್ಗಳನ್ನು ಆರ್ಡರ್ ಮಾಡಿದ್ದಾರೆ. ಆಚಾರ್ಯ ಚಿತ್ರತಂಡಲ್ಲಿ ಕೆಲಸ ಮಾಡುತ್ತಿರುವ 100 ಕಾರ್ಮಿಕರಿಗೆ ನೀಡಿದ್ದಾರೆ. ಸೊನು ಸುದ್ ಅವರು ಮೊಬೈಲ್ ತರಿಸಿ ಚಿತ್ರತಂಡದಲ್ಲಿ ಕೆಲಸ ಮಾಡುವ …
Read More »ಸಿಎಂ ತೆಗದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ಖಾತೆ ಬದಲಾವಣೆ ಮಾಡಿದರೂ ಅಡ್ಡಿ ಇಲ್ಲ : ಬಿ.ಸಿ.ಪಾಟೀಲ್
ಕೋಲಾರ: ಸಿಎಂ ತೆಗದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ಖಾತೆ ಬದಲಾವಣೆ ಮಾಡಿದರೂ ಅಡ್ಡಿ ಇಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕು. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಇನ್ನೂ ಮುನಿರತ್ನ, ಆರ್.ಶಂಕರ್ ಹಾಗೂ ಎಂಟಿಬಿಗೆ ಸಚಿವ ಸ್ಥಾನ ಸಿಗಬೇಕಿದೆ, ಸಿಗುತ್ತೆ. …
Read More »ನಿಂತಿದ್ದ ಲಾರಿಗೆ ಒಮನಿ ಡಿಕ್ಕಿ ಕರೆ ಮಾಡಿ ಸುಮಾರು ಗಂಟೆಗಳ ಆದ್ರೂ ಸ್ಪಂದಿಸದ ಆಂಬ್ಯುಲೆನ್ಸ್ ಮೂವರು ಸಾವಿಗೀಡಾಗಿರುವ ದುರ್ಘಟನೆ
ಚಿತ್ರದುರ್ಗ: ನಿಂತಿದ್ದ ಲಾರಿಗೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿಗೀಡಾಗಿರುವ ದುರ್ಘಟನೆ ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಓಮ್ನಿ ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೇಣುಕಮ್ಮಾ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಪುಟ್ಟಿಲಿಂಗಯ್ಯ(39) ಹಾಗೂ ಶಿವರಾಜ್(55) ಸಾವನ್ನಪ್ಪಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದಾರೆ. ಈ ವೇಳೆ …
Read More »ಒಟಿಟಿಯಲ್ಲಿ ರಿಲೀಸ್ ಮಾಡಿದ್ರೆ ಲಾಭವಾಗುತ್ತಾ – ಸಭೆ ನಡೆಸಿದ ಕನ್ನಡ ಬಿಗ್ ಬಜೆಟ್ ನಿರ್ಮಾಪಕರು
ಬೆಂಗಳೂರು: ಕೋವಿಡ್ 19 ಬಂದ ನಂತರ ಚಿತ್ರೋದ್ಯಮಕ್ಕೆ ಬಲವಾದ ಪೆಟ್ಟು ಬಿದ್ದಿದೆ. ನಿಧಾನವಾಗಿ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿದ್ದರೂ ಚಲನ ಚಿತ್ರ ಮಂದಿರಕ್ಕೆ ಜನ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದೆ ಚಿತ್ರಗಳನ್ನು ಮಂದಿರಗಳಲ್ಲಿ ರಿಲೀಸ್ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸಲು ಸ್ಯಾಂಡಲ್ವುಡ್ ಚಿತ್ರ ನಿರ್ಮಾಪಕರು ಇಂದು ಸಭೆ ನಡೆಸಿದ್ದಾರೆ. ಕೊರೊನಾದಿಂದಾಗಿ ಬಿಡುಗಡೆಯಾಗಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳು ಈ ವರ್ಷಕ್ಕೆ ಮುಂದೂಡಿಕೆಯಾಗಿವೆ. ಈ ನಡುವೆ ಸಿನಿಮಾ ಮಂದಿರಗಳಲ್ಲಿ ಶೇ.50 …
Read More »