ಮಂಡ್ಯ ಜಿಲ್ಲೆ ದಬ್ಬೇಘಟ್ಟ ಗ್ರಾಮದ ನಿವಾಸಿ ರೈತ ಮಹಿಳೆ ಶಾರದಮ್ಮ ರವರು ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆ ಯಿಂದ ಸಂಕಷ್ಟಕ್ಕೆಂದು ಉಳಿತಾಯ ಮಾಡಿದ್ದ ಹತ್ತು ಸಾವಿರ ಹಣವನ್ನು ಮುಖ್ಯಮಂತ್ರಿಗಳ ಕೊರೋನೊ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ಅವರನ್ನು ಬೇಟಿ ಮಾಡಿದ ಶಾರದಮ್ಮ ಮತ್ತು ಅವರ ಸುಪುತ್ರ ಭರತ್ ಮಾಸ್ತಿ ಅವರು ಹತ್ತು ಸಾವಿರ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರ ಮಾಡಿ ಕೊರೊನೊ ವೈರಸ್ ತಡೆಗೆ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಪರಿಹಾರದ ಚೆಕ್ ಸ್ವೀಕಾರ ಮಾಡಿದ ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಮಾತನಾಡಿ ಕೊರೋನಾ ವೈರಸ್ ನಿಂದಾಗಿ ದೇಶವೇ ತತ್ತರಿಸಿದ್ದು ಕೊರೋನಾ ವೈರಸ್ ಪೀಡಿತರಿಗೆ ಅನುಕೂಲವಾಗಲೆಂದು ದಬ್ಬೇಘಟ್ಟದ ರೈತ ಮಹಿಳೆ ಶಾರದಮ್ಮ ಮತ್ತು ಅವರ ಪುತ್ರ ಭರತ್.ಎಂ. ಮಾಸ್ತಿ ಅವರು ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆ ಯಿಂದ ಬಂದ ಉಳಿತಾಯದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10ಸಾವಿರ ರೂಗಳನ್ನು ಉದಾರವಾಗಿ ದೇಣಿಗೆ ನೀಡಿದ್ದಾರೆ ಇದೇ ರೀತಿ ಉಳ್ಳವರು ತಮ್ಮ ಶಕ್ತಾನುಸಾರ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಅಥವಾ ಪಿಎಂ ಕೇರ್ ನಿಧಿಗೆ ನೀಡುವ ಮೂಲಕ ಕೋರೋನಾ ಸೋಂಕುನಿಂದ ದೇಶದ ಜನರ ರಕ್ಷಣೆಗೆ ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದಾನಿಗಳಾದ ಶಾರದಮ್ಮ, ಭರತ್ ಎಂ ಮಾಸ್ತಿ, ಸಮಾಜ ಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಬಿಸಿಎಂ ಅಧಿಕಾರಿ ವೆಂಕಟೇಶ್, ಮುಖಂಡರಾದ ಶ್ರೀನಿವಾಸ್, ಕಾಮನಹಳ್ಳಿ ಮಂಜುನಾಥ್, ಸುರೇಶ್, ಸೊಳ್ಳೇಪುರ ಶಂಭು ಮತ್ತಿತರರು ಇದ್ದರು.