Breaking News
Home / ಜಿಲ್ಲೆ / ಬೆಂಗಳೂರು:ಸರ್ವೇಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ

ಬೆಂಗಳೂರು:ಸರ್ವೇಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ

Spread the love

ಬೆಂಗಳೂರು: ನಗರದಲ್ಲಿ   ಕೊರೊನಾ ಸೋಂಕು ಸಂಬಂಧ ಸರ್ವೇಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು  ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತಲಿದ್ದು, ಈ ಹಿನ್ನೆಲೆಯಲ್ಲಿ  ನಗರದ ನಿವಾಸಿಗಳ ಪರೀಕ್ಷೆಗೆ  ಆರೋಗ್ಯ ಇಲಾಖೆ ಮುಂದಾಗಿದೆ. ಅದರಂತೆ ಇಂದು ಸಾಧಿಕ ನಗರದಲ್ಲಿ  ಪರೀಕ್ಷೆ ನಡೆಸಲು  ತೆರಳಿದ್ದ ಸಿಬ್ಬಂದಿ ಮೇಲೇ 10 ಜನರ ಗುಂಪು  ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಆಶಾ ಕಾರ್ಯಕರ್ತೆಯರು  ಪಡೆದ ರಿಪೋರ್ಟ್ ಕಾರ್ಡ್ ನ್ನು ಸಹ ಹರಿದು ಹಾಕಿದ್ದಾರೆ. ಮೊಬೈಲ್ ಕೂಡ ಕಸಿದುಕೊಂಡು ಲ್ಲದೇ ಫೋನ್​ ಕೂಡ ಕಸಿದುಕೊಂಡು ಯಾರನ್ನ ಕರಿತ್ತಿಯೋ ಕರೀ ಎಂದು ಕೂಡ ಆವಾಜ್ ಹಾಕಿದ್ದಾರೆ.

ಇವರಿಗೆ ಯಾರೂ ಯಾವುದೇ ಮಾಹಿತಿ ಕೂಡ ಕೊಡಬೇಡಿ ಎಂದು ಘೋಷಣೆ ಕೂಡ ಮಾಡಲಾದ ಬೆಳವಣಿಗೆ ಕೂಡ ನಡೆದಿದೆ. ಇನ್ನು ಜನರ ವರ್ತನೆ ನೋಡಿ ಕಾರ್ಯಕರ್ತೆಯರು ಕಣ್ಣೀರು ಕೂಡ ಹಾಕಿದ್ದಾರೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ