ದಾವಣಗೆರೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಆಯಾಯ ವಿದ್ಯುತ್ ಕಂಪನಿಗಳು ಇದೀಗ ಹೊಸ ಡಿಜಿಟಲ್ ವಿದ್ಯುತ್ ಮೀಟರ್ ಜಾರಿ ಮಾಡಲು ಮುಂದಾಗಿವೆ. ಈ ಮೀಟರ್ ಹಳೇ ಮೀಟರ್ಗಿಂತ ಸ್ವಲ್ಪ ಡಿಫರೆಂಟ್ ಎಂಬಂತೆ ಹಣ ಭರಿಸಿದ್ರೆ ಮಾತ್ರ ಜನರಿಗೆ ವಿದ್ಯುತ್ ಲಭ್ಯವಾಗಲಿದೆ.
ಮೊಬೈಲ್ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗಲಿದೆ. ಈಗಾಗಲೇ ಡಿಜಿಟಲ್ ಮೀಟರ್ಗಳು ದಾವಣಗೆರೆ ಬೆಸ್ಕಾಂ ಅಧಿಕಾರಿಗಳ ಕೈಸೇರಿವೆ.
ಹೌದು, ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ ಯಾವುದೇ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಬಂದರೂ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಕೆಇಆರ್ಸಿಯ ಸೂಚನೆ ಬಂದಿದೆ. ಹಾಲಿ ಇರುವ ಹಳೆಯ ಮೀಟರ್ ತೆಗೆದು ಸ್ಮಾರ್ಟ್ ಮೀಟರ್ ಅಳವಡಿಸಲು ಹಂತ ಹಂತವಾಗಿ ದಾವಣಗೆರೆ ಬೆಸ್ಕಾಂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ, ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಬಡ ಜನರು ಕೊಂಚ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಫೆ.15ರಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭ ಆಗಿದ್ದು, ಇಲ್ಲಿತನಕ ದಾವಣಗೆರೆಯಲ್ಲಿ ಯಾವೊಬ್ಬರೂ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.
Laxmi News 24×7