ಬಾಗಲಕೋಟೆ : ನಿಯಮ ಮೀರಿ ನಿರಾತಂಕವಾಗಿ ನಡೆದಿರುವ ಗಣಿಗಾರಿಕೆ
ಗಣಿಗಾರಿಕೆ ನಿಯಮ ಬದ್ಧವಾಗಿ ನಡೆಸಲು ಅದಕ್ಕಂತೆನೇ ಇಲಾಖೆ ಇದೆ.ಅಕ್ರಮ,ನಿಯಮ ಮೀರಿ ಗಣಿಗಾರಿಕೆ ನಡೆಸುವವರ ಮೇಲೆ ಕ್ರಮ ವಹಿಸುವ ಮತ್ತು ಗಣಿಗಾರಿಕೆ ಸ್ಥಳ ಪರಿಶೀಲನೆ ಮಾಡುವ ಕೆಲಸ ಮೈನಿಂಗ್ ಅಧಿಕಾರಿಗಳದ್ದು,ಆದ್ರೆ ಇಲ್ಲಿ ಸ್ಥಳೀಯರು ದೂರು ನೀಡಿದ್ರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಅಕ್ರಮ ಮರಂ ಸಾಗಾಟದ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಒಂದೆಡೆ ಜೆಸಿಬಿಗಳ ಮೂಲಕ ಅಗೆಯುತ್ತಿರೋ ಗುಡ್ಡ.ಮತ್ತೊಂದೆಡೆ ಮರಂ ಸಾಗಾಟ ಮಾಡ್ತಿರೋ ಟಿಪ್ಪರ್ ಗಳು.ಇನ್ನೊಂದೆಡೆ ಸ್ಥಳಿಯರಿಗೆ ಸಮಸ್ಯೆ ಆಗ್ತಿದೆ.ಇಲ್ಲಿ ನಿಯಮ ಮೀರಿ ಮರಂ ಸಾಗಾಟ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿರೋ ಸ್ಥಳೀಯರು.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಲೊಕಾಪೂರ ಕಾಡರಕೊಪ್ಪ ರಸ್ತೆ ಪಕ್ಕದ ಗುಡ್ಡದಲ್ಲಿ.ಹೌದು ಮರಂ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮ ಗಾಳಿಗೆ ತೂರಲಾಗಿದೆ.ಸ್ಥಳೀಯರಿಗೆ ನಿತ್ಯ ಸಾವಿರಾರು ಟಿಪ್ಪರಗಳ ಮರಂ ಸಶಗಾಡ ಧೂಳನಿಂದ ರೋಷಿ ಹೋಗಿದ್ದಾರೆ.ಆದ್ರೂ ಬಾಗಲಕೋಟೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಕಣ್ಮುಚ್ಚಿ ಕುಳಿತಿದ್ದಾರೆ. ಸ್ಥಳೀಯರು ನಿಯಮ ಮೀರಿ ಗುಡ್ಡ ವನ್ನ ಭೂಗಳ್ಳರು ರಾಜಾರೋಷವಾಗಿ ಬಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡೆಸುತ್ತಿದ್ದಾರೆ.
ಇನ್ನು ಕಾಡರಕೊಪ್ಪ -ಲೊಕಾಪೂರ ರಸ್ತೆಯಲ್ಲಿ ದಿನದ 24 ಗಂಟೆ ಮರಂ ಸಾಗಾಟ ಮಾಡೋ ಟಿಪ್ಪರ್ ಗಳ ಹಾವಳಿಗೆ ರೋಡ್ ಹಾಳಾಗ್ತಿದ್ದು,ಗಣಿ ಇಲಾಖೆ ನಿಯಮ ಗಾಳಿಗೆ ತೂರಿ ಓವರ್ ಲೋಡ್ ಮರಂ ಸಾಗಾಟ ಮಾಎಲಾಗ್ತಿದೆ.ಈ ಭಾಗದ ಆರ್ ಟಿಓ ಅಧಿಕಾರಿ ಕಣ್ಮುಚ್ಚಿ ಕುಳಿತಿದ್ದಾನೆ.
ಪಟ್ಟಾ ಜಮೀನು ಸೇರಿದಂತೆ ಗುಡ್ಡದ ಇಳಿಜಾರಿನಲ್ಲೂ ಮರಂ ಬಗೆಯುತ್ತಿದ್ದಾರೆ ಭೂ ಕಳ್ಳರು.ಸ್ಥಳೀಯರು ದೂರು ನೀಡಿದ್ರೂ ಸ್ಥಳ ಪರಿಶೀಲನೆ ಮಾಡದ ಮೈನಿಂಗ್ ಇಲಾಖೆ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.ಅಲ್ಲದೆ ಸರ್ಕಾರಕ್ಕೂ ಮಣ್ಣೆರೆಚಿ ರಾಜಧನ ಕಟ್ಟದೆ ಅಕ್ರಮವಾಗಿ ಮರಂ ಸಾಗಾಟ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಆದ್ರೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನಡೆಗೆ ಜನ ಹಿಡಿಶಾಪ ಹಾಕ್ತಿದ್ದಾರೆ.
ಒಟ್ಟಿನಲ್ಲಿ ಭೂ ಗಳ್ಳರ ಜೊತೆ ಅಧಿಕಾರಿಗಳು ಶಾಮಿಲಾಗಿದ್ದಾರೆ.ಅಧಿಕಾರಿಗಳ ಕುಮ್ಮಕ್ಕಿನಿಂದ ನಿಯಮ ಮೀರಿ ಮರಂ ಗಣಿಗಾರಿಕೆ ನಡೆಯುತ್ತಿದ್ದು.ಜಿಲ್ಲಾಡಳಿತ ಭೂಗಳ್ಳರಿಗೆ ಕಡಿವಾನ ಹಾಕಿ ಗುಡ್ಡ ಬಗೆದ ಬಕಾಸೂರರಿಂದ ರಾಜಧನ ವಸೂಲಿ ಮಾಡುತ್ತಾ ಎಂದು ಕಾದುನೋಡಬೇಕಿದೆ.