ಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- ರುಕ್ಮಿಣಿ ಮಂದಿರ ಸಾಕ್ಷಿಯಾಗಿದೆ. ಇದರಿಂದ ನಾವು ಎಲ್ಲರೂ ಧರ್ಮದ ರಕ್ಷಣೆ ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡಲಿದೆ, ಧರ್ಮೋ ಧರ್ಮ ರಕ್ಷಿತಾ ಎಂದು ಪರಮಾನಂದವಾಡಿ ಅಭಿನವ ಮಠದ ಡಾಕ್ಟರ್ ಅಭಿನವ ಸ್ವಾಮೀಜಿ ಕಾಗವಾಡದಲ್ಲಿ ಹೇಳಿದರು. ಶನಿವಾರ ರಂದು ಕಾಗವಾಡದ ಸಾವಿರಾರು ಭಕ್ತರ ಶ್ರದ್ಧಾ ಸ್ಥಾನವಾಗಿರುವ ಶ್ರೀ ಅಂಬಾಬಾಯಿ ಮಂದಿರದಲ್ಲಿ ವಿಠಲ …
Read More »ಧಾರವಾಡದಲ್ಲಿ ನಿವೃತ್ತಿಯದ ಸೈನಿಕನಿಗೆ ಅದ್ದೂರಿ ಸ್ವಾಗತ… ಸ್ವಗ್ರಾಮದಲ್ಲಿ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ
ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಧಾರವಾಡದ ಕಲ್ಲೂರು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಮಹ್ಮದ್ಸಾದಿಕ್ ಹಂಚಿಮನಿ ಊರ್ಫ್ ಸೈಯದ್ನವರ ಯೋಧ ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಮರಾಠಾ ಲೈಫ್ ಇನ್ಫೆಂಟರಿ ರೆಜೆಂಟ್ ಮೂಲಕ ಭಾರತೀಯ ಸೇನೆ ಸೇರಿದ ಮಹ್ಮದ್ಸಾದಿಕ್ ಅವರು ಮಣಿಪುರ, ಸೌತ್ಸುಡಾನ್, ಅಸ್ಸಾಂ, …
Read More »ನಮ್ಮ ‘ಮಸಾಲ ದೋಸೆ’ ಈಗ ವಿಶ್ವ ವಿಜೇತ! ಕನ್ನಡಿಗರ ನೆಚ್ಚಿನ ತಿಂಡಿಗೆ ಜಾಗತಿಕ ಮನ್ನಣೆ!
ದೋಸೆ ಪ್ರಿಯರೇ, ಸಂಭ್ರಮಿಸಲು ಇಲ್ಲಿದೆ ಒಂದು ಅದ್ಭುತ ಸುದ್ದಿ! ವಿಶ್ವದ ‘ಟಾಪ್ 50 ಅತ್ಯುತ್ತಮ ಪ್ಯಾನ್ಕೇಕ್ಗಳ’ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಮಸಾಲ ದೋಸೆ ಮತ್ತು ಪೇಪರ್ ದೋಸೆ ಭರ್ಜರಿಯಾಗಿ ಸ್ಥಾನ ಪಡೆದಿವೆ! ಏನಿದು ವಿಶೇಷ? ಖ್ಯಾತ ಆಹಾರ ವಿಶ್ಲೇಷಣಾ ಸಂಸ್ಥೆ ‘ಟೇಸ್ಟ್ ಅಟ್ಲಾಸ್’ (TasteAtlas) ಬಿಡುಗಡೆ ಮಾಡಿರುವ ವಿಶ್ವದ ಅತ್ಯುತ್ತಮ ಪ್ಯಾನ್ಕೇಕ್ಗಳ ಪಟ್ಟಿಯಲ್ಲಿ ಭಾರತದ ದೋಸೆಗಳು ಜಗತ್ತಿನ ದಿಗ್ಗಜ ಆಹಾರ ಪದಾರ್ಥಗಳಿಗೆ ಫೈಟ್ ನೀಡಿ ಟಾಪ್ ಲಿಸ್ಟ್ ಸೇರಿವೆ. ಪಟ್ಟಿಯಲ್ಲಿ …
Read More »ಮದುವೆ ಎಂಬ ನಂಬಿಕೆಯ ಹೆಸರಲ್ಲಿ ವಂಚನೆ: ಟೆಕ್ಕಿಯೊಬ್ಬನ ಬಲಿ ಪಡೆದ ವಿಧಿ!
ಹೈದರಾಬಾದ್ನಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ತನ್ನ ಜೀವನ ಸಂಗಾತಿಯೇ ತನ್ನನ್ನು ನಡುನೀರಲ್ಲಿ ಕೈಬಿಟ್ಟಾಗ, ಮನನೊಂದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಏನಿದು ಘಟನೆ? ಹೈದರಾಬಾದ್ನ ಟೆಕ್ಕಿಯೊಬ್ಬರು ತನ್ನ ಪತ್ನಿಯ ನಡವಳಿಕೆಯಿಂದ ಬೇಸತ್ತು ಸಾವಿನ ಹಾದಿ ಹಿಡಿದಿದ್ದಾರೆ. ಸಾಯುವ ಮುನ್ನ ಬರೆದ ಡೆತ್ನೋಟ್ನಲ್ಲಿ ಅವರು ಹೇಳಿರುವ ಮಾತುಗಳು ಕರುಳು ಹಿಂಡುವಂತಿವೆ. ನಂಬಿಕೆಯ ದ್ರೋಹ: ತನ್ನ ಪತ್ನಿ ಅನೇಕ ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿರುವ ಅವರು, ಇದರಿಂದ …
Read More »ಕಿತ್ತೂರು ಸೈನಿಕ ಶಾಲೆಯಲ್ಲಿ ‘ಕ್ಯಾಟರ್ ಪಿಲ್ಲರ್ ಟು ಬಟರ್ ಫ್ಲೈ’ ಪುಸ್ತಕ ಬಿಡುಗಡೆ ಹದಿಹರೆಯದ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶಿ
ಕರ್ನಾಟಕದ ಕಿತ್ತೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಸೈನಿಕ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ವೀರೇಂದ್ರ ತೆಗ್ಗಿಮನಿ ಅವರು ಏಪ್ರಿಲ್ 30 ರಂದು ಕರ್ನಲ್ ಡಾ. ರಾಹುಲ್ ಶರ್ಮಾ ಮತ್ತು ಅನಿತಾ ಶರ್ಮಾ ಅವರು ರಚಿಸಿದ “ಕ್ಯಾಟರ್ ಪಿಲ್ಲರ್ ಟು ಬಟರ್ ಫ್ಲೈ – ಎ ಜರ್ನಿ ಆಫ್ ರೆಸಿಲಿಲಿಯನ್ಸ್, ಕಾಮರಾಡೆರಿ ಅಂಡ್ ಅವೇಕನಿಂಗ್” ಎಂಬ ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ವೀರೇಂದ್ರ …
Read More »ಕುರುಬ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಪ್ರಕರಣ: 9 ಜನರ ವಿರುದ್ಧ ಎಫ್ಐಆರ್
ಬೆಳಗಾವಿಯ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದಿಂದ ಕುರುಬ ಕುಟುಂಬಕ್ಕೆ ಸಾಮಾಜೀಕ ಬಹಿಷರ ಹಾಕಿದ ಪ್ರಕರಣದಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಪೂಜೆ ಮತ್ತು ವೈಯಕ್ತಿಕ ಕಾರಣಗಳಿಗಾಗಿ ನರಸೋಬಾ ಕರೆಪ್ಪ ಸಾಂಬ್ರೇಕರ ಅವರ ಕುಟುಂಬವನ್ನು ಗ್ರಾಮದಿಂದ ದೂರ ಇಟ್ಟಿರುವ ಸಂಬಂಧ ಇದೀಗ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗ್ರಾಮದ ಪಂಚರು ನರಸೋಬಾ ಕುಟುಂಬದೊಂದಿಗೆ ಯಾರೂ ಮಾತನಾಡಬಾರದು ಎಂದು ಫರ್ಮಾನು ಹೊರಡಿಸಿದ್ದು ನಿಯಮ …
Read More »ಅಳಿಯನ ಮನೆಯಲ್ಲೇ 16.57 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಅತ್ತೆ!
ಬೆಳಗಾವಿಯಲ್ಲಿ ಅತ್ತೆಯೇ ಅಳಿಯನ ಮನೆಗೆ ಕನ್ನ ಹಾಕಿರುವ ಘಟನೆ ನಡೆದಿದೆ. ಪುತ್ರಿಯರ ಮದುವೆ ಸಾಲ ತೀರಿಸಲು ಅಡ್ಡದಾರಿ ಹಿಡಿದ ಮಹಿಳೆ, ಅಳಿಯನ ಮನೆಯಲ್ಲೇ ಚಿನ್ನಾಭರಣ ಕದ್ದು ಸಿಕ್ಕಿಬಿದ್ದಿದ್ದಾಳೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ, ಶಿವಾ ಅಪ್ಪಯನವರ ಬಂಧಿತ ಆರೋಪಿಗಳು. ಚಿಕ್ಕ ಮಗಳ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಯಲ್ಲಿ ಮಹಿಳೆ ಉಜ್ವಲಾ, 16.57 ಲಕ್ಷ ಮೌಲ್ಯದ 110 …
Read More »ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ಆತ್ಮಹ*ತ್ಯೆಗೆ ಶರಣಾದ ತಂದೆ.!!!
ತುಮಕೂರು: ಕುಣಿಗಲ್ ತಾಲ್ಲೂಕಿನ ಆಲ್ಕೆರೆ (ಹಾಲ್ಕೆರೆ) ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ದಿಂಬಿನಿಂದ ಕೊಂದು, ನಂತರ ಸ್ವತಃ ನೇಣಿಗೆ ಶರಣಾಗಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮೃತರು ಶಿವಣ್ಣ (40), ಅವನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಎಂದು ಗುರುತಿಸಲಾಗಿದೆ. ಘಟನೆಯ ವಿವರ ಶಿವಣ್ಣನ ಮೃತದೇಹವು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಕ್ಕಳು ಮಂಚದ …
Read More »ಬಿರಿಯಾನಿ, ಕಲ್ಲಂಗಡಿ ಸೇವಿಸಿ ಮೃತಪಟ್ಟ ಒಂದೇ ಕುಟುಂಬದ ನಾಲ್ವರು: ರೋಚಕ ತಿರುವು ಪಡೆದ ಪ್ರಕರಣ.!!!
ಮುಂಬೈನಲ್ಲಿ ಕಲ್ಲಂಗಡಿ ಹಣ್ಣು ತಿಂದ ನಂತರ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಇದು ಆಹಾರ ವಿಷಾಹಾರ (Food Poisoning) ಎಂದು ಶಂಕಿಸಲಾಗಿತ್ತು, ಆದರೆ ಮರಣೋತ್ತರ ಪರೀಕ್ಷೆಯ ವರದಿ ಬೆಚ್ಚಿಬೀಳಿಸುವ ಸತ್ಯವನ್ನು ಹೊರಹಾಕಿದೆ. ಎನ್ಡಿಟಿವಿ ವರದಿಯ ಪ್ರಕಾರ, ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಪ್ರಮುಖ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಪತ್ತೆಯಾಗಿದೆ. ಮೃತ ಅಬ್ದುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ (Morphine) …
Read More »ಡ್ಯಾಡಿಯಾದ ನಟ ಡಾಲಿ ಧನಂಜಯ: ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಧನ್ಯತಾ.!
ಬೆಂಗಳೂರು: ಸ್ಯಾಂಡಲ್ವುಡ್ನ ಜನಪ್ರಿಯ ನಟ ಡಾಲಿ ಧನಂಜಯ್ ಮತ್ತು ಅವರ ಪತ್ನಿ ಡಾ. ಧನ್ಯತಾ ಅವರ ಕುಟುಂಬದಲ್ಲಿ ಸಂತಸದ ಹೊಳೆ ಹರಿದಿದೆ. ಈ ದಂಪತಿಗೆ ಗಂಡು ಮಗುವಿನ ಆಗಮನವಾಗಿದ್ದು, ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಾ. ಧನ್ಯತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸುರಕ್ಷಿತವಾಗಿ ನಡೆದಿದ್ದು ತಾಯಿ ಹಾಗೂ ಮಗು ಇಬ್ಬರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂತಸದ ಸುದ್ದಿಯೊಂದಿಗೆ ಕುಟುಂಬದ …
Read More »
Laxmi News 24×7