Breaking News

ಬಾಗಲಕೋಟೆ ಮೋಟಗಿಯಲ್ಲಿ ಶುರುವಾಗಿದೆ ಜಾನುವಾರು ಜಾತ್ರೆ

Spread the love

ಬಾಗಲಕೋಟೆ: ಸಾಲು ಸಾಲಾಗಿ ಮಾರಾಟಕ್ಕೆ ಸಿದ್ದವಾಗಿ ನಿಂತಿರುವ ಎತ್ತು, ಹೋರಿಗಳು. ತಮ್ಮ ತಮ್ಮ ಎತ್ತುಗಳನ್ನು ಹಿಡಿದು ನಿಂತಿರುವ ರೈತರು. ಮಾರಾಟವಾದ ಎತ್ತುಗಳ ಮೈಮೇಲೆ ಬಣ್ಣದೋಕುಳಿ. ಇನ್ನೊಂದೆಡೆ ಕಿಲಾರಿ ಹೋರಿ, ಎತ್ತುಗಳ ಪ್ರದರ್ಶನ ಸ್ಪರ್ಧೆ. ಪಶು ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳಿಂದ ಜಾನುವಾರುಗಳ ಆಯ್ಕೆ.

ಬಾಗಲಕೋಟೆ  ಮೋಟಗಿ ಬಸವೇಶ್ವರ ಜಾತ್ರೆ ಪ್ರಯುಕ್ತ ಜಾನುವಾರು ಜಾತ್ರೆ ನಡೆಯುತ್ತಿದೆ. ಕೇಸನೂರು ಗ್ರಾಮದ ವ್ಯಾಪ್ತಿಯಲ್ಲಿ ಜಾನುವಾರು ಜಾತ್ರೆ  ಆಯೋಜಿಸಿದ್ದು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಗದಗ ಭಾಗದಿಂದಲೂ ಜಾನುವಾರುಗಳನ್ನು ತರಲಾಗಿದೆ.

ಈ ಹಿಂದೆ ಪ್ರತಿ ವರ್ಷ 6 ಸಾವಿರಕ್ಕೂ ಅಧಿಕ ಜಾನುವಾರುಗಳು ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದವು. ಆದರೆ ಈ ವರ್ಷ 3-4 ಸಾವಿರಕ್ಕೆ ಇಳಿಕೆಯಾಗಿದೆ. ಯಂತ್ರಾಧರಿತ ಕೃಷಿ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗಿದ್ದರಿಂದ ಕಡಿಮೆ ಸಂಖ್ಯೆಯ ಜಾನುವಾರುಗಳು ಜಾತ್ರೆಯಲ್ಲಿ ಭಾಗಿಯಾಗಿವೆ.

ಮೋಟಗಿ ಬಸವೇಶ್ವರ ಜಾತ್ರಾ ಸಮಿತಿ ಎಪಿಎಂಸಿ ಹಾಗೂ ಪಶುಸಂಗೋಪನಾ ಇಲಾಖೆ ವತಿಯಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. 4 ದಿನದ ಜಾನುವಾರು ಜಾತ್ರೆಯಲ್ಲಿ ಮೂಡಲ, ಕಿಲಾರಿ, ಹಳ್ಳಿಕಾರ ಕರಸುಂಡಿಯಂತಹ ಯೋಗ್ಯ ತಳಿಗಳೂ ಇಲ್ಲಿ ಬಂದಿವೆ. ವಿವಿಧ ತಳಿಯ ಹಸುಗಳು ಮಾರಾಟಕ್ಕೆ ಬಂದಿವೆ. ಆದರೆ ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದ್ದು ರೈತರಿಗೆ ಬೇಸರ ತಂದಿದೆ.

ಈ ವರ್ಷ ಹೋರಿಗಳು 75 ಸಾವಿರದಿಂದ 3 ಲಕ್ಷ ರೂ. ವರೆಗೆ ಮಾರಾಟವಾಗಿವೆ. ಆಕಳುಗಳು 15 ರಿಂದ 50 ಸಾವಿರ ರೂ.ವರೆಗೆ ಒಟ್ಟು 141 ಹೋರಿಗಳು ಮಾರಾಟವಾಗಿವೆ. ಉತ್ತಮ ತಳಿಯ ಜಾನುವಾರುಗಳಿಗೆ ಏಳು ವಿಭಾಗದಲ್ಲಿ ಬಹುಮಾನ ನೀಡಲಾಗುತ್ತದೆ. 

ಹಾಲಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಜೋಡೆತ್ತು, ಕಿಲಾರಿ ಆಕಳುಗಳು, ಕಿಲಾರಿ ಆಕಳು ಮಣಕ ಇವುಗಳಿಗೆ ಮೊದಲ ಬಹುಮಾನ 10 ಸಾವಿರ ರೂ., 2ನೇ ಬಹುಮಾನ 7,500 ರೂ., 3ನೇ ಬಹುಮಾನ 5 ಸಾವಿರ ರೂ., ಜೊತೆಗೆ 3 ಸಮಾಧಾನಕರ ಬಹುಮಾನಗಳು ಇರಲಿವೆ.

Spread the love

About Laxminews 24x7

Check Also

ಬಿಜೆಪಿಗೆ ಆನೆಬಲ, ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆ

Spread the loveಬಾಗಲಕೋಟೆ: ಉಪಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ ಹೆಚ್ಚುತ್ತಿದ್ದು ರಾಜಕೀಯ ಚಟುವಟಿಕೆಗಳು ಬರದಿಂದ ಸಾಗಿವೆ. ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯವನ್ನು‌ಮೆಚ್ವಿಕೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ