ಐಗಳಿ: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಆದಾಯ ಮೂಲ ಅವಶ್ಯ. ಯುವಕರ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟು ಸ್ವಯಂ ಉದ್ಯೋಗಕ್ಕೆ ಆಸ್ಪದ ನೀಡಬೇಕು. ಗ್ರಾಮೀಣ ಪ್ರದೇಶದ ರೈತ ವಸತಿ ಮನೆಗಳಿಗೂ ನಿರಂತರ ವಿದ್ಯುತ್ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯಿತಿಯ ನಾಲ್ಕು ವ್ಯಾಪಾರ ಮಳಿಗೆ ಹಾಗೂ ಭಜಂತ್ರಿ ವಸತಿ ಪ್ರದೇಶಕ್ಕೆ ನಿರಂತರ ಜ್ಯೋತಿ ಸಂಪರ್ಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಿ.ಎಸ್.ನೇಮಗೌಡ, ಬಿ.ಎಸ್.ಬಿರಾದಾರ, ನೂರಅಹ್ಮದ್ ಡೊಂಗರಗಾಂವ, ಎ.ಎಸ್.ಪಾಟೀಲ, ಬಸವರಾಜ ಬಿರಾದಾರ, ಪ್ರಲ್ಹಾದ ಪಾಟೀಲ, ದುಂಡಪ್ಪ ದೊಡ್ಮನಿ, ಲಕ್ಷ್ಮಣ ತೆಲಸಂಗ, ಶಿವರಾಜ ತೆಲಸಂಗ, ಅಕ್ಷಯ ಬಿರಾದಾರ, ಓಂಕಾರ ಮಠಪತಿ, ಶಕುಂತಲಾ ಪಾಟೀಲ, ಶೋಭಾ ಬೆಳಗಲಿ, ವಿ.ಎ.ವಾಲಿ, ನಿಂಗನಗೌಡ ಬಿರಾದಾರ, ರಾಜೇಂದ್ರ ಪಾಠಕ್, ಜಿ.ವಿ.ಸಂಪನ್ನನವರ ಇತರರಿದ್ದರು.
Laxmi News 24×7