ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ (ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ ಪುರುಷರಿಗೆ ಹಾಲು ಕೊಟ್ಟು ಬರ್ತಿತ್ತಂತೆ. ಈ ರೋಚಕ, ವಿಸ್ಮಯ ಚಿನ್ನದ ನಿಧಿಯ ಗುಹೆಯೊಳಗೆ ನಿಜಕ್ಕೂ ರಹಸ್ಯ ಅಡಗಿದೆ.
ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಗದಗ ಜಿಲ್ಲೆಯಲ್ಲಿನ ಹತ್ತಾರು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿಯನ್ನ ರಾಜಧಾನಿ ಮಾಡಿಕೊಂಡು ಅರಸರು ಆಳ್ವಿಕೆ ಮಾಡಿದ್ದರು. ಅಪಾರ ಪ್ರಮಾಣದಲ್ಲಿ ಚಿನ್ನವನ್ನ ಸಂಗ್ರಹ ಮಾಡಿದ್ದರು. ಟಂಕಸಾಲೆಯಲ್ಲಿ ನಾಣ್ಯಗಳ ಮುದ್ರಣ ಮಾಡುತ್ತಿದ್ದರು. ಅರಸ ಮನೆತನಗಳು ಕಪ್ಪತ್ತಗುಡ್ಡದಿಂದ ಚಿನ್ನ ತಗೆದಯುತ್ತಿದ್ದರು. ರಾಜ, ಮಹರಾಜ ಆಳ್ವಿಕೆಯ ಸಮಯದಲ್ಲಿ ಇಂದ್ರನ ಅಮರಾವತಿಗಿಂತಲು ಸಂಪತ್ತು ಇತ್ತು ಎಂದು ಇತಿಹಾಸಗಾರು ಹೇಳುತ್ತಾರೆ.
ಈ ಇತಿಹಾಸಿ ಸತ್ಯ ಅನ್ನೋದು ಒಂದೊಂದಾಗಿ ಸಾಬೀತಾಗುತ್ತ ಹೊರಟಿದೆಯಾ ಅನ್ನೋ ಅನುಮಾನ ಬರುತ್ತಿದೆ. ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಂಪತ್ತು ಆಯ್ತು, ಕಪ್ಪತ್ತುಡ್ಡದ ನಿಗೂಢ ಗುಹೆಗಳ ಸಂಪತ್ತು ಆಯ್ತು. ಐತಿಸಹಾಸಿ ದೇವಸ್ಥಾನಗಳ ಸಂಪತ್ತು ರಹಸ್ಯ ಬಯಲಾಯ್ತು. ಆದರೂ ಜಿಲ್ಲೆಯ ಸಿರಿಸಂಪತ್ತಿನ ರಹಸ್ಯ ಮಾತ್ರ ಇನ್ನೂ ಅಂತ್ಯವಾಗಿಲ್ಲ.
ಇದೀಗ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೂ ನಾಗಾವಿ ಗುಡ್ಡದ ಗುಹೆಗೆ ಸಂಬಂಧ ಇದೆಯಂತೆ. ಗದಗ ತಾಲೂಕಿನ ನಾಗಾವಿ ಗ್ರಾಮದ ಯಲ್ಲಮ್ಮ ದೇವಿಯ ದೇವಸ್ಥಾನದ ಬಳಿಯ ಗುಡ್ಡದಲ್ಲಿ ನಿಗೂಢ, ವಿಸ್ಮಯ ಗುಹೆ ಇದೆ. ಈ ಗುಹೆಯಲ್ಲಿ ರಹಸ್ಯ ಬಾವಿ ಇದೆ. ಆ ಬಾವಿಯಲ್ಲಿ ಅರಿಶಿನ ಹಾರ, ನಿಂಬೆಹಣ್ಣು ಬಿಟ್ಟರೆ ಅದು ಲಕ್ಕುಂಡಿಯ ಸಿದ್ದರ ಬಾವಿಯಲ್ಲಿ ಗೋಚರ ಆಗುತ್ತೆ. ಲಕ್ಕುಂಡಿಯ ಮುಸ್ಕಿನಬಾವಿಗೂ ನಾಗಾವಿ ಗುಹೆಗೆ ಲಿಂಕ್ ಇದೆ. ಗುಹೆಯಲ್ಲಿ ಅಪಾರ ಪ್ರಮಾಣ ಚಿನ್ನದ ನಿಧಿ ಇದೆ. ನಿಧಿಗೆ ಸರ್ಪಕಾವಲು ಕಾಯುತ್ತಿದೆ ಎಂದು ಈ ಹಿಂದೊಮ್ಮೆ ಗುಹೆಯಲ್ಲಿ ಹೋಗಿ ಬಂದಿರುವ ಗ್ರಾಮದ ಹಿರಿಯರು ಗೋವಿಂದರಡ್ಡಿ ಮರಡ್ಡಿ ಅವರ ಮಾತು.
ನಾಗಾವಿಯ ನಿಗೂಢ ಗುಹೆ. ಇಲ್ಲಿ ಸಿದ್ಧಿಪುರುಷರು ವಾಸವಾಗಿದ್ರಂತೆ. ನಿತ್ಯ ನಸುಕಿನ ಜಾವ ಭಜನೆ, ಜಾಗಟೆ, ಶಂಕ ನಾದದ ಶಬ್ದ ಗ್ರಾಮಕ್ಕೆ ಕೇಳಿಸುತ್ತಿತ್ತಂತೆ. ಆಗ ಸಿದ್ಧರು ಭಜನೆ ಮಾಡ್ತಾಯಿದ್ದಾರೆ. ನಸುಕಾಯಿತು ಎಲ್ಲರೂ ಏಳಿ ಅಂತ ಹೇಳ್ತಾಯಿದ್ರಂತೆ. ಆ ಗುಹೆಯಲ್ಲಿ ಬಾವಿ ಇದೆ ಬಾವಿಯ ನೀರಿನಿಂದ ದೀಪ ಹಚ್ಚಿ ತಪಸ್ಸು ಮಾಡುತ್ತಿದ್ರು. ಗುಹೆಯಲ್ಲಿದ್ದ ಸಿದ್ದರಿಗೆ ನಿತ್ಯ ಒಂದು ಹಸು ಹೋಗಿ ಹಾಲು ನೀಡಿ ಬರುತ್ತಿತ್ತು.
ಆ ಹಸು ಮನೆಗೆ ಹೋದಾಗ ಹಾಲು ಕೊಡುತ್ತಿರಲಿಲ್ಲ. ಹೀಗಾಗಿ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ ಕೋರಿಯವರ ಮನೆತನದ ವ್ಯಕ್ತಿ ಒಂದು ದಿನ ಹಸುವಿನೊಂದಿಗೆ ಗುಹೆಗೆ ಹೋಗಿದ್ದಾನೆ. ಅಲ್ಲಿಯ ಸಿದ್ದರನ್ನ ನೋಡಿ ನಾನು ಇಲ್ಲೇ ಇರ್ತಿನಿ ಅಂದಿದ್ದಾನೆ. ಹಸು ಮರಳಿ ಮನೆ ಬಂದಿದೆ ಆದರೆ ದನ ಕಾಯಲು ಹೋದ ಮನುಷ್ಯ ಮಾತ್ರ ಮರಳಿ ಬಂದಿಲ್ಲ. ಆ 20 ವರ್ಷದ ಬಳಿಕ ತಾಯಿನ್ನ ನೋಡಬೇಕೆಂದು ಸಿದ್ದರ ಕೇಳಿ ಹೋಗ್ತಾನೆ. ಸಿದ್ದರು ಇಲ್ಲಿಯ ಸಂಪತ್ತು ತೆಗೆದುಕೊಂಡು ಹೋಗಬೇಡ. ಸಂಪತ್ತು ಇರುವ ಬಗ್ಗೆ ಯಾರಿಗೂ ಹೇಳ ಬೇಡ ಅಂದಿದ್ರಂತೆ. ಆತ ಮನೆಗೆ ಹೋದಾಗ ತಾಯಿ ಗುರುತು ಹಿಡಿದಿಲ್ಲ. ಹೀಗಾಗಿ ಗ್ರಾಮದ ಕೆಲವರಿಗೆ ತಾನು ಗುಹೆಯಲ್ಲಿ ಇದೆ ಅಂತಾ ಹೇಳಿದ್ದಾನೆ. ಗುಹೆಯ ರಹಸ್ಯದ ಬಗ್ಗೆಯೂ ಗ್ರಾಮದಲ್ಲಿ ಮಾಹಿತಿ ನೀಡಿದ್ದಾನೆ. ನಂತರ ಗುಹೆಗೆ ಬಂದಿದ್ದಾನೆ ಆದರೆ ಸಿದ್ದರು ಗುಹೆಗೆ ಬಂದ್ರೆ ಮರಳಿ ನಿಂಗೆ ಹೋಗಲು ಆಗೋದಿಲ್ಲವೆಂದಿದ್ದಾರೆ. ಆ ಗುಹೆಯಲ್ಲಿ ಹೋದ ವ್ಯಕ್ತಿ ಮರಳಿ ಬಂದಿಲ್ವಂತೆ. ಹೀಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಗ್ರಾಮಸ್ಥರು ಹೇಳುತ್ತಿದ್ದಾರೆ.
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ಲಕ್ಕುಂಡಿ ಗ್ರಾಮಕ್ಕೆ ಹಾಗೂ ನಾಗಾವಿ ಗ್ರಾಮಕ್ಕೆ ಲಿಂಕ್ ಇದೆ. ಒಟ್ಟಿನಲ್ಲಿ ಸಿದ್ದಿ ಪುರುಷರು ವಾಸ ಮಾಡಿರುವ ಗುಹೆಯಲ್ಲಿ ಅಪಾರ ಪ್ರಮಾಣದ ನಿಧಿ ಇರುವ ಅನುಮಾನ ಕಾಡುತ್ತಿದೆ.
Laxmi News 24×7