ಎಸ್ ಆರ್ ಪಾಟೀಲ್ ಅವರಿಂದ ಬಾಗಲಕೋಟೆ ಪೊಲೀಸರಿಗೆ ಇನ್ನೊವಾ ಕ್ರಿಸ್ಟಾ ದೇಣಿಗೆ
ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರು ಪೊಲೀಸ್ ಇಲಾಖೆಯ ಬಲವರ್ಧನೆಗಾಗಿ ಎಸ್.ಆರ್. ಪಾಟೀಲ್ ಸಮೂಹ ಸಂಸ್ಥೆಗಳ ವತಿಯಿಂದ ಜಿಲ್ಲಾ ಪೊಲೀಸ್ ಘಟಕಕ್ಕೆ ಇನ್ನೊವಾ ಕ್ರಿಸ್ಟಾ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಸಚಿವ ಮತ್ತು ಎಸ್.ಆರ್. ಪಾಟೀಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಸ್.ಆರ್. ಪಾಟೀಲ್ ಅವರು ಇಂದು ನವನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಳಿ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೊಯಲ್ ಅವರಿಗೆ ಇನ್ನೊವಾ ಕ್ರಿಸ್ಟಾ ವಾಹನದ ಕೀಯನ್ನು ಹಸ್ತಾಂತರಿಸಿದರು. ಎಸ್.ಆರ್. ಪಾಟೀಲ್ ಸಮೂಹ ಸಂಸ್ಥೆಯಿಂದ ಪೊಲೀಸ್ ಇಲಾಖೆಗೆ ವಾಹನ ದೇಣಿಗೆ ನೀಡುವ ಮೂಲಕ ಪಾಟೀಲ್ ಅವರು ಜಿಲ್ಲಾ ಪೊಲೀಸ್ ಘಟಕದ ಕಾರ್ಯಗಳಿಗೆ ಸಹಕಾರ ನೀಡಿದ್ದಾರೆ.
Laxmi News 24×7