ಹೊಸದಾಗಿ ಬಸ್ ಆರಂಭ ಕಾಟಗಾಳಿ ಗ್ರಾಮಸ್ಥರಿಂದ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮ!!
ಖಾನಾಪೂರ ತಾಲೂಕಿನ ಕಾಟಗಾಳಿಗೆ ಹೊಸ ಬಸ್
ಗ್ರಾಮಸ್ಥರಿದಂದ ಬಸಗೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮ
ಬೆಳಗಾವಿಯಿಂದ ದೇಸೂರ ಮಾರ್ಗವಾಗಿ ಕಾಟಗಾಳಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ
ಖಾನಾಪೂರ ತಾಲೂಕಿನ ಕಾಟಗಾಳಿ ಗ್ರಾಮಕ್ಕೆ ಹೊಸದಾಗಿ ಬಸ್ ಆರಂಭವಾಗಿದೆ. ಹೊಸದಾಗಿ ಬಸ್ ಆರಂಭದ ಖುಷಿಯಿಂದ ಗ್ರಾಮಸ್ಥರು ಬಸಗೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ನಡೆಸಿದರು.
ಖಾನಾಪೂರ ತಾಲೂಕಿನ ಕಾಟಗಾಳಿ ಗ್ರಾಮಕ್ಕೆ ಬೆಳಗಾವಿಯಿಂದ ದೇಸೂರ ಮಾರ್ಗವಾಗಿ ಹೊಸದಾಗಿ ಬಸ್ ಬಿಡಲಾಗಿದೆ. ಇದ್ದರಿಂದ ಖುಷಿಗೊಂಡ ಗ್ರಾಮಸ್ಥರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ನೇತೃತ್ವದಲ್ಲಿ ಸೋಮವಾರ ಬಸಗೆ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾಧ್ಯಕ್ಷ ಮಾಂತೇಶ್ ತಳವಾರ, ರಾಜ್ಯ ಖಜಾಂಚಿ ಸಿದ್ದಪ್ಪ ಕಾಂಬಳೆ, ತಾಲೂಕ ಅಧ್ಯಕ್ಷ ಕೃಷ್ಣರಾಜು ಕೊಲ್ಕಾರ, ಸಂತೋಷ್ ಕಾಂಬಳೆ, ಬಿಜಗರ್ಣಿ ರಾಜಕರಣವರ್, ಲಕ್ಷ್ಮಣ್ ಕಾಂಬಳೆ , ನಾಗೇಶ್ ಕಾಮಶೆಟ್ಟಿ, ರಾಮಣ್ಣ ಚೌಹಾನ, ದೀಪಕ್ ದಬಾಡೆ, ಕಲ್ಲಪ್ಪ ನಾಯಕ, ಆಕಾಶ್ ಕಾಂಬಳೆ, ಮನೋಹರ್ ಅಜ್ಜನಕಟ್ಟಿ, ಆರ್. ಜೆ.ಕಾಂಬಳೆ, ರಾಜಶೇಖರ್ ಇನ್ನವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7