Breaking News
Home / 2021 / ಆಗಷ್ಟ್ (page 21)

Monthly Archives: ಆಗಷ್ಟ್ 2021

ತಾಕತ್ತಿದ್ದರೆ, ಎಂಈಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ- ಕರವೇ ಸವಾಲು..

.ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಡಿನ ಪರವಾಗಿರುವ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ, ಎಲ್ಲ ಮರಾಠಿ ಭಾಷಿಕ ಅಭ್ಯರ್ಥಿಗಳು ಎಂಈಎಸ್ ಅಭ್ಯರ್ಥಿಗಳು ಎಂದು ಹೇಳುವ ಮೂಲಕ ಎಂಈಎಸ್ ನಾಯಕರು ಮರಾಠಿ ಭಾಷಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ತಾಕತ್ತಿದ್ದರೆ ಎಂಈಎಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸವಾಲು ಹಾಕಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಬಹಳಷ್ಟು ಮರಾಠಿ ಭಾಷಿಕ ನಾಯಕರು ಚುನಾವಣೆಗೆ ಸ್ಪರ್ದೆ …

Read More »

ಕೋವಿಡ್‌ನಿಂದ ಕಣ್ಣಿಗೆ ತೊಂದರೆಯೇ ?

ಇತ್ತೀಚೆಗೆ ನನ್ನ ಕಣ್ಣಿನ ಕ್ಲಿನಿಕ್‌ಗೆ ಬರುವ ಹದಿಹರೆಯದವರು, ಮಕ್ಕಳು ಮತ್ತು 20-35 ವರ್ಷದವರ ಸಂಖ್ಯೆ ವಿಪರೀತವಾಗಿ ಜಾಸ್ತಿಯಾಗಿದೆ. ಮೊನ್ನೆ 15 ವರ್ಷದ ಹುಡುಗನನ್ನು ಕಣ್ಣಿನ ಪರೀಕ್ಷೆಗೆ ಅವನ ಪಾಲಕರು ಕರೆದುಕೊಂಡು ಬಂದಿದ್ದರು. ಡಾಕ್ಟ್ರೇ ನಮ್ಮ ಹುಡುಗ ಒಂದು ವಾರದಿಂದ ಬಹಳ ಕಣ್ಣಿನ ನೋವು, ತಲೆನೋವು ಎಂದು ಹೇಳುತ್ತಾ ಇದ್ದಾನೆ.   ನಾನು ಅವರ ಮಗನ ಬಗ್ಗೆ ಗಮನಿಸುತ್ತಿರುವಾಗಲೇ ಆನ್ ಲೈನ್ ಕ್ಲಾಸ್ ನಡೀತಾ ಇದೆಯಲ್ಲ ಅದರ ಪ್ರಭಾವ ಬಿಡಿ ಎಂದು …

Read More »

ಶಿಕ್ಷಣದಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದು ಹೇಗೆ ?

ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲು, ಮೌಲ್ವಿಕ ವಿಚಾರಗಳನ್ನು ತಿಳಿಯಲು, ವೈಚಾರಿಕ ಪ್ರಜ್ಞೆ ಬೆಳೆಯಲು, ಸುಸಂಸ್ಕೃತ ನಡತೆಗೆ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಓದು ಮಾತ್ರವೇ ರಹದಾರಿ. ಶಿಕ್ಷಣದಲ್ಲಿ ಭಾಷೆಯ ಕಲಿಕೆಯು ಕೇವಲ ಅಂಕಗಳಿಸಲು ಸೀಮಿತವಾಗದೆ ಸಾಹಿತ್ಯ ಓದುವ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು ಶಾಲೆಗಳಲ್ಲಿ ನೈತಿಕ ಶಿಕ್ಷಣದ ಜೊತೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಂತಾಗಬೇಕು. ಮೂರುದಶಕಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಅಸ್ತಿತ್ವಕ್ಕೆ ಬರುವ ಈ ಹೊತ್ತಿನಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿವೆ. ಭಾಷೆ ಮತ್ತು …

Read More »

ಶ್ರೀ ಗುರು ರಾಘವೇಂದ್ರ ಮಹಿಮೆ : ಬೆಂಕಿಯಲ್ಲಿ ಸುಟ್ಟ ರತ್ನಾಹಾರ ಮತ್ತಷ್ಟು ಹೊಳೆದಾಗ..

ಕ್ರಿ.ಶ.೧೬೪೧-೪೨ ರ ಸಮಯ. ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಏರುಪೇರುಗಳಾದವು. ತಂಜಾಪುರದ ರಾಜ ವಿಜಯರಾಘವ ಭೂಪಾಲ ಭಾರೀ ಸೋಲನ್ನನುಭವಿಸಿದ. ಜೀವವುಳಿಸಿಕೊಳ್ಳಲು ಹೆಣಗಾಡಿದ. ದೈವಯೋಗದಿಂದ ಶ್ರೀರಾಘವೇಂದ್ರಗುರುಗಳ ಸಕಾಲಿಕ ಪ್ರಯತ್ನದಿಂದ ಗೆದ್ದವರು ಮತ್ತು ಸೋತವರ ನಡುವೆ ಸಂಧಿಯೇರ್ಪಟ್ಟಿತು. ಆದರೆ ತಂಜಾಪುರ ರಾಜ್ಯದ ದವಸ-ಧಾನ್ಯಗಳು ಸಿರಿ- ಸಂಪತ್ತೆಲ್ಲವೂ ಲೂಟಿಯಾಗಿತ್ತು. ಪ್ರಾಕೃತಿಕ ವಿಕೋಪದಿಂದ ಮಳೆಯಿಲ್ಲದೆ ಬೆಳೆಗಳೆಲ್ಲವೂ ನಾಶವಾದವು. ತಂಜಾಪುರ ಘನಘೋರ ದುರ್ಭಿಕ್ಷಕ್ಕೆ ಈಡಾಯಿತು.     ಸೋತ ನೋವನ್ನು ಮರೆತ ರಾಜ ಪ್ರಜಾಕ್ಷೇಮಕ್ಕೆ ತನ್ನೆಲ್ಲ ಭಂಡಾರವನ್ನೂ …

Read More »

‘ಸಿಎಂ ಸಚಿವಾಲಯ’ದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ..ಯಾರಿಗೆ ಯಾವ ಜವಾಬ್ದಾರಿ.?

ಬೆಂಗಳೂರು : ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ.   ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್, ರಂಗರಾಕ್, ಪೊನ್ನುರಾಜ್, ಹೆಚ್ ಎಸ್ ಸತೀಶ್ ಸೇರಿದಂತೆ ಹಲವರಿಗೆ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ.       ಯಾರಿಗೆ ಯಾವ ಜವಾಬ್ದಾರಿ.?   1) ಮಂಜುನಾಥ್ ಪ್ರಸಾದ್ : ಸಿಎಂ ಪ್ರಧಾನ ಕಾರ್ಯದರ್ಶಿ, ( ಸಚಿವ ಸಂಪುಟದ ಎಲ್ಲಾ ಕಡತಗಳ ನಿರ್ವಹಣೆ, ಎಲ್ಲಾ …

Read More »

ಬೀದಿ ನಾಯಿಗಳ ಹಾವಳಿಯಿಂದ ಆಡು ಕುರಿ ಸೇರಿ ಒಟ್ಟು ಹದಿನೆಂಟು ಸಾವು

    ಅಥಣಿ: ತಾಲೂಕಿನ ಹುಳಗಬಾಳಿ ಗ್ರಾಮದ ರೈತನಾದ “ರಾಹು ಸಖಾರಾಮ್ ಖಾರೆ ” ವೆಂಬುವರ ಒಟ್ಟು ಇಪ್ಪತೈದು ಆಡು ಮತ್ತು ಕುರಿಗಳನ್ನ ರಾತ್ರಿ ಸಮಯದಲ್ಲಿ ಸೇಡ್ಡಿನಲ್ಲಿ ಕಟ್ಟಲಾಗಿತ್ತು. ನಿನ್ನೆ ರಾತ್ರಿ ಸುಮಾರು 11:30 ನಂತರ ಬೀದಿ ನಾಯಿಗಳ ಹಾವಳಿಯಿಂದ ಹದಿನೆಂಟು ಆಡು ಮತ್ತು ಕುರಿಗಳು ಪ್ರಾಣ ಕಳೆದುಕೊಂಡಿವೆ. ಇನ್ನು ಆರರಿಂದ ಏಳು ಆಡುಗಳು ಜಕಂ ಗೊಂಡು ಸಾವು ಬದುಕಿನ ಮದ್ಯ ಹೋರಾಡುತ್ತಿವೆ.         ಸುದ್ದಿ …

Read More »

ರಾಹುಲ್ ಗಾಂಧಿ ಆರೋಪಕ್ಕೆ ಸ್ಮೃತಿ ಇರಾನಿ ಸೇಡು ತೀರಿಸಿಕೊಂಡರು, ಈ ದೊಡ್ಡ ವಿಷಯವನ್ನು ಹೇಳಿದರು

ಕೇಂದ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹಣಕಾಸು ಸಚಿವರು ಮಂಗಳವಾರ ರಾಷ್ಟ್ರೀಯ ನೋಟು ರದ್ದುಗೊಳಿಸುವಿಕೆಯ ಪೈಪ್‌ಲೈನ್ ಘೋಷಣೆಯು ಸರ್ಕಾರವು ತನ್ನ ಮಾಲೀಕತ್ವವನ್ನು ನಗದೀಕರಣ ಪ್ರಕ್ರಿಯೆಯಲ್ಲಿ ಉಳಿಸಿಕೊಳ್ಳಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ರಾಜ್ಯದ ಮಾಲೀಕತ್ವವನ್ನು ಬದಲಿಸದೆ, ಎಲ್ಲಾ ರಾಜ್ಯಗಳು ಈ ಪ್ರಕ್ರಿಯೆಗೆ ತಮ್ಮ ನೋಡಲ್ ಅಧಿಕಾರಿಗಳನ್ನು ಘೋಷಿಸುತ್ತವೆ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಈ ರೀತಿಯ ಹಣಗಳಿಕೆಯನ್ನು ಮಾಡುತ್ತಿರುವ ರಾಜ್ಯ ಸರ್ಕಾರಗಳು ಕೂಡ …

Read More »

ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪಥಸಂಚಲನ

ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸುವ ಮೂಲಕ ಚುನಾವಣೆ ವೇಳೆ ಶಾಂತತೆ ಕಾಪಾಡುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.     ಹೌದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಂಬಂಧ ಮಂಗಳವಾರ ಸಂಜೆ ಆರು ಗಂಟೆ …

Read More »

ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ ಸಂಸದ ಈರಣ್ಣ ಕಡಾಡಿ

ಮೂಡಲಗಿ: ಕೋವಿಡ್ ಎರಡನೇ ಅಲೆ ಕಾರಣ ಸಂಕಷ್ಠದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ಭಾರತ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿತರಿಸಿದರು. ಮಂಗಳವಾರದಂದು ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಲೋಳಸೂರ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿ.ಜಿ, ಮಸಗುಪ್ಪಿ …

Read More »

ಉಗ್ರರ ಉಪಟಳಕ್ಕೆ ಲಗಾಮು ಹಾಕುವುದು ಅನಿವಾರ್ಯ

ಅಫ್ಘಾನಿಸ್ತಾನವನ್ನು ತಾಲಿಬಾನಿ ಗುಂಪು ವಶಕ್ಕೆ ಪಡೆದ ಬಳಿಕ, ಕೆಲ ಗಂಟೆಗಳ ಕಾಲ ಶಾಂತಿ ಪ್ರಿಯವಾಗಿದ್ದೇವೆ ಎನ್ನುವ ಮಾತನ್ನು ಹೇಳಿಕೊಂಡಿತ್ತು. ಈ ಮಾತು ತಾಲಿಬಾನ್ ಉಗ್ರರು ಹೇಳಿದಾಗ ಬಹುತೇಕ ರಾಷ್ಟ್ರಗಳು ಒಪ್ಪದಿದ್ದರೂ, ಬಹುತೇಕ ರಾಷ್ಟ್ರಗಳು ತಟಸ್ಥ ನೀತಿಯನ್ನು ಅನುಸರಿಸಿದ್ದವು.   ಆದರೆ ಅಧಿಕಾರ ಹಿಡಿದ ಮರುದಿನವೇ ತಮ್ಮ ಉಪಟಳವನ್ನು ತೋರಿಸಲು ಶುರುಮಾಡಿರುವ ತಾಲಿಬಾನ್ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕಗೆ ಗುಡುವು ನೀಡಿದೆ. ಇದಿಷ್ಟೇ ಅಲ್ಲದ್ದೇ, ಅಫ್ಘಾನಿಸ್ತಾನ ದಲ್ಲಿ ಅರಾಜಕತೆ ಸೃಷ್ಟಿಸಿ, ನೂರಾರು …

Read More »