ಬೆಂಗಳೂರು : ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ.
ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್, ರಂಗರಾಕ್, ಪೊನ್ನುರಾಜ್, ಹೆಚ್ ಎಸ್ ಸತೀಶ್ ಸೇರಿದಂತೆ ಹಲವರಿಗೆ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ ಜವಾಬ್ದಾರಿ.?
1) ಮಂಜುನಾಥ್ ಪ್ರಸಾದ್ : ಸಿಎಂ ಪ್ರಧಾನ ಕಾರ್ಯದರ್ಶಿ, ( ಸಚಿವ ಸಂಪುಟದ ಎಲ್ಲಾ ಕಡತಗಳ ನಿರ್ವಹಣೆ, ಎಲ್ಲಾ ವರ್ಗಾವಣೆಗಳ ನಿರ್ವಹಣೆ, ಪ್ರಮುಖ 8 ಇಲಾಖೆಯ ಜವಾಬ್ದಾರಿ)
2) ಅನಿಲ್ ಕುಮಾರ್ : ಸಿಎಂ ಖಾಸಗಿ ಕಾರ್ಯದರ್ಶಿ
3) ರಂಗರಾಜ್ : ಸಿಎಂ ವಿಶೇಷ ಕರ್ತವ್ಯ ಅಧಿಕಾರಿ
4) ಪೊನ್ನುರಾಜ್ : ಸಿಎಂ ಕಾರ್ಯದರ್ಶಿ ( ಗೃಹ ಮತ್ತು ಸಾರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಗರಾಭಿವೃದ್ದಿ, ಸಣ್ಣ ಕೈಗಾರಿಕೆಗಳ ಜವಾಬ್ದಾರಿ
5) ಚನ್ನಬಸವೇಶ : ಸಿಎಂ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿ
6) ರೋಹನ್ ಬಿರಾದಾರ್ : ಸಿಎಂ ವಿಶೇಷ ಕರ್ತವ್ಯ ಅಧಿಕಾರಿ
7) ಹೆಚ್ ಎಸ್ ಸತೀಶ್ : ಸಿಎಂ ವಿಶೇಷ ಅಧಿಕಾರಿ