ಗೋಕಾಕ:ಭಾರತಕ್ಕೆ ಬೇಕಾಗಿರುವುದು ಮಹಾಪುರುಷರ ಸಿದ್ಧಾಂತಗಳು ಹೊರತು ದೀಪಗಳಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ.
ಇಂದು ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಕ್ಕಳ ಜೊತೆ “ಇಂಡಿಯಾ ನಿಡ್ಸ್ ಗ್ರೆಟ್ ಪೀಪಲ್ಸ್ ಐಡಿಯೊಲೊಜಿ ನೊಟ್ ಲ್ಯಾಂಪ್ಸ್” ಎಂಬ ಸಂದೇಶ ಬರೆದ ಪಟ ಮತ್ತು ಮಹಾ ಮಾನವತಾವಾದಿಗಳಾದ ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಚಿತ್ರವನ್ನು ಹಿಡಿದು ಈ ಸಂದೇಶ ಸಾರಿ ತಮ್ಮದೇ ಶೈಲಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.
ದೇಶಕ್ಕೆ ಈ ಸಂದರ್ಭದಲ್ಲಿ ಮಾನವೀಯತೆ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯವಾಗಿ್ದೆ. ಹೀಗಾಗಿ ಭಾರತಕ್ಕೆ ಬೇಕಾಗಿರುವುದು ಮಹಾಪುರುಷರು ಸಾರಿದ ಮಾನವತಾವಾದಿ ಸಿದ್ದಾಂತಗಳು ಹೊರತು ದೀಪಗಳಲ್ಲ ಎಂದು ಅವರು ಸಂದೇಶದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಿಗೆ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ ಜಾರಕಿಹೊಳಿ ಸಾಥ್ ನೀಡಿದ್ದರು.