Breaking News

ಮಳೆ ಜಾಸ್ತಿ ಆದ್ರೂ, ಕಡಿಮೆ ಆದ್ರೂ ಮೋದಿನೇ ಕಾರಣ – ಇದು ಕಾಂಗ್ರೆಸ್‌ ನೀತಿ: ಜೋಶಿ ಕಿಡಿಬೆಂಗಳೂರು: ಬರದ ವಿಚಾರದಲ್ಲಿ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ರಾಜಕೀಯ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು (Pralhad Joshi) ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬರ ಅಧ್ಯಯನ ತಂಡ ಕಳಿಸುವಂತೆ ಪ್ರಧಾನಿ ಮೋದಿ (Narendra Modi) ಅವರಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ರಾಜ್ಯ ಸರ್ಕಾರ ಮಳೆ ಎಷ್ಟು ಆಗಿದೆ. ಎಷ್ಟು ಆಗಬೇಕು, ಬಿತ್ತನೆ ಎಷ್ಟು ಆಗಿದೆ ಎಂದು ಕೇಂದ್ರಕ್ಕೆ ಮೊದಲು ಮಾಹಿತಿ ಕೊಡಲಿ. 12 ವರ್ಷಗಳಿಂದ ಕಾಂಗ್ರೆಸ್ ನೀತಿ ಮಳೆ ಜಾಸ್ತಿ ಆದ್ರೆ, ಕಡಿಮೆ ಆದ್ರೆ ಮೋದಿ ಕಾರಣ. ಜನಸಂಖ್ಯೆ ಜಾಸ್ತಿ ಆದ್ರೂ, ಕಡಿಮೆ ಆದ್ರೂ ಮೋದಿ ಕಾರಣ. ಈ ರೀತಿ ಮಾತಾಡೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಈ ಧೋರಣೆ ಕೈ ಬಿಡಬೇಕು. ಮೋದಿಗೆ ಕರ್ನಾಟಕದ ಜನ ಮತ ಹಾಕಿದ್ದಾರೆ. ಇಲ್ಲಿನ ಜನ ನಮ್ಮವರೇ. ಇದರಲ್ಲಿ ಬೇಧ ಮಾಡಲ್ಲ. ರಾಜಕೀಯ ಮಾಡೋದು ಬಿಟ್ಟು ಅಂಕಿಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಸ್ತೆ ಕಾಮಗಾರಿ ವೇಳೆ ಟೆಂಡರ್‌ ಉಲ್ಲಂಘನೆ; ಕರ್ತವ್ಯ ಲೋಪ – ಇಬ್ಬರು ಅಧಿಕಾರಿಗಳ ಅಮಾನತು d.k.shivakumar ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ, ಕ್ಯಾಬಿನೆಟ್ ಮಾಡೋಕೆ ರಾಹುಲ್ ಗಾಂಧಿ ಇಷ್ಟು ದಿನ ನಾಪತ್ತೆ ಆಗಿದ್ರು. ಅವರು ಎಲ್ಲಿಗೆ ಹೋಗಿದ್ರು ಅಂತ ಯಾರಿಗಾದರು ಗೊತ್ತಾ? ಯಾವ ದೇಶದಲ್ಲಿ ಇದ್ದರು ಎಂದು ನಮಗೂ ಗೊತ್ತಿಲ್ಲ. ರಾಹುಲ್ ಗಾಂಧಿ ಕಳ್ಳತನದಲ್ಲಿ ಯಾಕೆ ವಿದೇಶಕ್ಕೆ ಹೋಗಬೇಕು ಅಂತ ಪ್ರಶ್ನಿಸಿದರು. More Read Rotary Kambala 2 ವಿವಾದಗಳ ನಡುವೆಯೇ ಕಂಬಳಕ್ಕೆ ಸರ್ಕಾರದಿಂದ ಗುಡ್ ನ್ಯೂಸ್ miscreants cut 600 areca trees at farm in davanagere one arrested ವೈಯಕ್ತಿಕ ದ್ವೇಷಕ್ಕೆ 600ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಕೊಡಲಿ – ದುಷ್ಕರ್ಮಿ ಅರೆಸ್ಟ್‌ Ballari PSI ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನ – ಪ್ರೊಬೆಷನರಿ ಪಿಎಸ್ಐ ಬಂಧನ ದಾಖಲಾತಿ ತೆಗೆಯೋದು IB ಕೆಲಸ. ಅವರು ಮಾಡ್ತಾರಾ, ಇಲ್ಲವಾ ನನಗೆ ಗೊತ್ತಿಲ್ಲ. ನಾವು ಅದನ್ನ ಮಾಡಲ್ಲ. ನಾನು ಇಂತಹ ದೇಶಕ್ಕೆ ಹೋಗಿದ್ದೇನೆ ಅಂತ ಹೇಳೋದು ಅವರ ಕೆಲಸ ಅಲ್ಲ. ಪ್ರಧಾನಿ ಕೇಂದ್ರದ ಮಂತ್ರಿಗಳು ವಿದೇಶಕ್ಕೆ ಹೋದಾಗ ಎಲ್ಲಿಗೆ ಹೋಗಿದ್ವಿ ಅಂತ ಹೇಳ್ತಾರೆ. ನೀವು ಯಾಕೆ ಹೇಳಲ್ಲ? 25 ದಿನಗಳಿಂದ ರಾಹುಲ್ ಗಾಂಧಿ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ದೇಶದ ಜನರಿಂದ ಏನು ಮುಚ್ಚಿಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಅನೇಕ ಕಾರ್ಯಕ್ರಮ ರದ್ದು ಮಾಡಿ ಹೋಗಿದ್ದಾರೆ. ಎಲ್ಲಿಗೆ ಹೋಗಿದ್ದಾರೆ? ವಿರೋಧ ಪಕ್ಷದ ನಾಯಕ, ಎಂಪಿ, ಪ್ರತಿಷ್ಠಿತ ಗಾಂಧಿ ಕುಟುಂಬದವರು ಎಲ್ಲಿಗೆ ಹೋಗಿದ್ದೇವೆ ಅಂತ ಹೇಳೋ ಜವಾಬ್ದಾರಿ ಇಲ್ಲವಾ? ಯಾಕೆ ಹೇಳ್ತಿಲ್ಲ ಅಂತ ಅವರೇ ಹೇಳಬೇಕು ಎಂದು ಆಗ್ರಹಿಸಿದರು. ಬಿಡದಿ ಟೌನ್‌ಶಿಪ್‌ಗೆ (Bidadi Township) ಸಿಎಂ ಡಿ.ಕೆ ಶಿವಕುಮಾರ್ ಇಷ್ಟು ಆತುರವಾಗಿ ಮಾಡ್ತಿರೋದು ನೋಡಿದ್ರೆ ಇದರ ಹಿಂದೆ ಏನೋ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 2019ರಿಂದ 2023ರವರೆಗೆ ಬಿಜೆಪಿ ಸರ್ಕಾರ ಇತ್ತು. ಆಗ ನಾವು ಮಾಡಲಿಲ್ಲ. ದೇವೇಗೌಡರು ಸಿಎಂ ಡಿ.ಕೆ ಶಿವಕುಮಾರ್ ಮೇಲೆ ದೊಡ್ಡ ಆರೋಪ ಮಾಡಿದ್ರು. ಅದಕ್ಕೆ ಅವರು ಉತ್ತರ ಕೊಟ್ಟಿಲ್ಲ. ಯಾಕೆ ಉತ್ತರ ಕೊಟ್ಟಿಲ್ಲ. ಸಿದ್ದರಾಮಯ್ಯ ಯಾಕೆ ಇದನ್ನ ಮಾಡಿಲ್ಲ. ಇದನ್ನ ಇಷ್ಟು ಆತುರವಾಗಿ ಮಾಡ್ತಿರೋದು ನೋಡಿದ್ರೆ ಇದರ ಹಿಂದೆ ಏನೋ ಇದೆ ಅಂತ ಆರೋಪ ಮಾಡಿದರು. ರೈತರ ಜೊತೆ ಯಾಕೆ ಸಿಎಂ ಮಾತಾಡ್ತಾ ಇಲ್ಲ. ಸಿಎಂ ಅವರು ದಾದಾಗಿರಿ ಮಾಡಿ ಕೆಲಸ ಮಾಡೋದಾ? ರಾಹುಲ್ ಗಾಂಧಿ ಬೇರೆ ರಾಜ್ಯಕ್ಕೆ ಹೋಗಿ ರೈತರ ಜೊತೆ ಇದ್ದೇನೆ ಅಂತಾರೆ. ಆದ್ರೆ ಇಲ್ಲಿ ಏನ್ ಮಾಡ್ತಾ ಇದ್ದಾರೆ. ದೇವೇಗೌಡರ ಆರೋಪಕ್ಕೆ ಉತ್ತರ ನೀಡಲಿ ಮೊದಲು ಅಂತ ಆಗ್ರಹ ಮಾಡಿದರು. ಸಿದ್ದರಾಮಯ್ಯ 3 ವರ್ಷ ಯಾಕೆ ಮಾಡಲಿಲ್ಲ. ಈಗ ಯಾಕೆ ಇಷ್ಟು ಮುತುವರ್ಜಿ ತೋರಿಸ್ತಾ ಇದ್ದಾರೆ. ಬಿಡದಿ ಟೌನ್ ಶಿಪ್ ಮಾಡಿದ್ರೆ ಮಾತ್ರ ಬೆಂಗಳೂರು ಅಭಿವೃದ್ಧಿ ಆಗೊಲ್ಲ. ಅಥವಾ ಒತ್ತಾಯ ಪೂರ್ವಕವಾಗಿ ಜನರ ಭೂಮಿಯನ್ನು ಕಸಿದು ಮಾಡೋದು ಅಲ್ಲ. ಜನರ ಮನವೊಲಿಕೆ ಮಾಡಬೇಕು. ಅದು ಬಿಟ್ಟು ನನ್ನ ಕಡೆ ಪೊಲೀಸ್ ಇದೆ. ನೀವು ಬೇಕಾದ್ದು ಮಾಡಿ ಅನ್ನೋದಾ? ಇದು ಪ್ರಜಾಪ್ರಭುತ್ವನಾ? ಅಂತ ಕಿಡಿಕಾರಿದರು. ರೈತರು ತಿರುಗಿ ಬಿದ್ದ ಕೂಡಲೇ ಈಗ ಒತ್ತಾಯ ಇಲ್ಲ ಅಂತಿದ್ದಾರೆ. ಯಾಕೆ ಜನರ ಜೊತೆ ಮಾತಾಡಿಲ್ಲ. ನೀವು ಮುಖ್ಯಮಂತ್ರಿ ಆದ್ರೆ ಸರ್ವಾಧಿಕಾರಿ ಅಲ್ಲ. ಪ್ರಜಾಪ್ರಭುತ್ವದಲ್ಲಿ ಮಾತುಕತೆ ನಡೆಯಬೇಕು. ಡಿ.ಕೆ ಶಿವಕುಮಾರ್ ರಾಜ್ಯದ ಸಿಎಂ. ಈ ರಾಜ್ಯದ ಮಹಾರಾಜರು ಅಲ್ಲ. ಇದನ್ನ ಅರ್ಥ ಮಾಡಿಕೊಂಡು ನಡೆನುಡಿ ಸರಿ ಮಾಡಿಕೊಳ್ಳಲಿ. ಭ್ರಷ್ಟಾಚಾರದ ಪರಮ ಆರೋಪಗಳು ಬರುತ್ತಿವೆ. ಇದರ ಬಗ್ಗೆ ಸ್ಪಷ್ಟನೆ ನೀಡಲಿ ಅಂತ ಆಗ್ರಹಿಸಿದರು. bidadi township land ಡಿ.ಕೆ ಶಿವಕುಮಾರ್ ಏನೋ ತಪ್ಪು ಮಾಡಿದ್ದಾರೆ. ಹೀಗಾಗಿ ಜೈಲಿನ ಬಗ್ಗೆ ಮಾತಾಡ್ತಾ ಇದ್ದಾರೆ. ಅವರನ್ನು ಯಾರು ಜೈಲಿಗೆ ಕಳಿಸೋ ವಿಚಾರ ಇಲ್ಲ. ಅವರು ಮಾಡಿದ ಭ್ರಷ್ಟಾಚಾರ, ತಪ್ಪಿನಿಂದ ಅವರು ಜೈಲಿಗೆ ಹೋದ್ರೆ ಯಾರು ಏನು ಮಾಡೋಕೆ ಆಗಲ್ಲ. ನಾವು ಅವರನ್ನು ಜೈಲಿಗೆ ಕಳಿಸೋ ಪ್ರಯತ್ನ ಮಾಡ್ತಾ ಇಲ್ಲ. ಇದೆಲ್ಲಾ ಅನುಕಂಪಕ್ಕೆ ಮಾಡ್ತಾ ಇರೋದು. ಯಾರೋ ವ್ಯಕ್ತಿ ತಪ್ಪು ಮಾಡಿದ್ರೆ ಜೈಲಿಗೆ ಹೋಗ್ತಾರೆ. ಹಾಗಾದರೆ ಏನಾದ್ರು ತಪ್ಪು ಮಾಡಿದ್ದೀರಾ? ನಿಮಗೆ ಭಯ ಇದೆ. ಈ ಭಯದಿಂದ ನೀವು ಹೊರಗೆ ಬನ್ನಿ ಅಂತ ಸಲಹೆ ಕೊಟ್ಟರು. ರಾಜ್ಯದಲ್ಲಿ ಜನರ ಹಿತ ಇಟ್ಟುಕೊಂಡು ಅಧಿಕಾರ ಮಾಡಿ. ರೈತರ ಜೊತೆ ಮಾತುಕತೆ ಮಾಡೊಲ್ಲ. ಅವರ ಮೇಲೆ ಕೇಸ್ ಹಾಕ್ತೀರಾ. ಸಿದ್ದರಾಮಯ್ಯ ಮಾಡಿದ್ದು ನೀವು ಯಾಕೆ ಮಾಡ್ತಾ ಇದ್ದೀರಾ. ಇದರ ಅರ್ಥ ಏನೋ ಡೀಲ್ ಆಗಿದೆ ಅಂತ ಅಲ್ಲವಾ. ಇದರ ಬಗ್ಗೆ ಯಾಕೆ ಉತ್ತರ ಕೊಡ್ತಿಲ್ಲ ಅಂತ ಕಿಡಿಕಾರಿದರು. ಸಿಎಂಗೆ ಪ್ರಶ್ನೆ ಕೇಳಿದ್ರೆ ರೋಷ ಉಕ್ಕಿ ಬರುತ್ತದೆ. ಮನುಷ್ಯ ತಪ್ಪು ಮಾಡಿದಾಗ ಹತಾಶೆಯಾಗಿ ಹೀಗೆ ಕೂಗಾಡ್ತಾರೆ. ಸಿಎಂ ಕೂಗಾಡೋದು ನೋಡಿದ್ರೆ ಏನೋ ತಪ್ಪು ಮಾಡಿದ್ದಾರೆ. ಅದಕ್ಕೆ ಜೈಲಿನ ಬಗ್ಗೆ ಮಾತಾಡ್ತಾ ಇದ್ದಾರೆ. ನಾವು ಯಾಕೆ ಜೈಲಿಗೆ ಹಾಕೋಣ. ನೀವು ಜನರನ್ನ ಜೈಲಿಗೆ ಹಾಕಿದ್ದು ಅಂತ ಕಿಡಿಕಾರಿದರು.

ಬೆಂಗಳೂರು: ಬರದ ವಿಚಾರದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ರಾಜಕೀಯ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬರ ಅಧ್ಯಯನ ತಂಡ ಕಳಿಸುವಂತೆ ಪ್ರಧಾನಿ ಮೋದಿ  ಅವರಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ರಾಜ್ಯ ಸರ್ಕಾರ ಮಳೆ ಎಷ್ಟು ಆಗಿದೆ. ಎಷ್ಟು ಆಗಬೇಕು, ಬಿತ್ತನೆ ಎಷ್ಟು ಆಗಿದೆ ಎಂದು ಕೇಂದ್ರಕ್ಕೆ ಮೊದಲು ಮಾಹಿತಿ ಕೊಡಲಿ. 12 …

Read More »

ವೈಯಕ್ತಿಕ ದ್ವೇಷಕ್ಕೆ 600ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಕೊಡಲಿ – ದುಷ್ಕರ್ಮಿ ಅರೆಸ್ಟ್‌

ದಾವಣಗೆರೆ: ಜಮೀನಿನಲ್ಲಿ ಬೆಳೆದಿದ್ದ 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದ ಅರೋಪಿಯನ್ನು ದಾವಣಗೆರೆ (Davanagere) ಜಿಲ್ಲೆಯ ಮಾಯಕೊಂಡ ಠಾಣೆ ಪೊಲೀಸರು  ಬಂಧಿಸಿದ್ದಾರೆ. ಬುಳ್ಳಾಪುರ ಗ್ರಾಮದ ಕಿರಣ್.ಆರ್ (26) ಬಂಧಿತ ಆರೋಪಿ. ಜುಲೈ 3ರಂದು ಬುಳ್ಳಾಪುರ ತಾಂಡದ ಸಿದ್ದೇಶ್ ನಾಯ್ಕ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದರು. ಸುಮಾರು 5 ಲಕ್ಷ ರೂ.ಗಿಂತಲೂ ಅಧಿಕ ನಷ್ಟ ಉಂಟಾಗಿದೆ ಎಂದು ಮಾಯಕೊಂಡ …

Read More »

ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನ – ಪ್ರೊಬೆಷನರಿ ಪಿಎಸ್ಐ ಬಂಧನ

ಬಳ್ಳಾರಿ: ಪತಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ, ಪ್ರೊಬೆಷನರಿ ಪಿಎಸ್ಐ  ನನ್ನು ಬಂಧಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಪಟ್ಟಣದಲ್ಲಿ ನಡೆದಿದೆ‌. ದೊರೆನಾಯ್ಕ್ ಬಂಧಿತ ಪ್ರೊಬೇಷನರಿ PSI. ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ತಾಂಡಾದ ದೊರೆನಾಯ್ಕ್ ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ PSI ಆಗಿ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದ. ತನ್ನೂರು ಪೂಜಾರಹಳ್ಳಿ ತಾಂಡಾದ ಯುವತಿಯನ್ನು ಮೊದಲ ಮದುವೆಯಾಗಿದ್ದ ದೊರೆನಾಯ್ಕ್, ಆ ಬಳಿಕ ದಾವಣಗೆರೆ ಸಮೀಪದ ಹುಲಿಕಟ್ಟಿ ತಾಂಡಾದ …

Read More »

ಈ ಸರ್ಕಾರ ಕಿತ್ತೊಗೆದು ವಿಧಾನಸೌಧದ 3ನೇ ಮಹಡಿಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕು: ಬೊಮ್ಮಾಯಿ

ಹಾವೇರಿ: ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು, ಒಸಿ ಆಡಿಸುವವರು, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟ್ನರ್‌ಶಿಪ್ ನಡೆಯುತ್ತಿದೆ. ಗಡಿ ಪಾರಾದವರು, ಗೂಂಡಾ ಲಿಸ್ಟ್‌ನಲ್ಲಿದ್ದವರು ಪೊಲೀಸ್ ಸ್ಟೇಷನ್‌ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಈ ಸರ್ಕಾರ  ಕಿತ್ತೊಗೆದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ  ಸರ್ಕಾರವನ್ನು ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ  ಹೇಳಿದರು. ಇಂದು ಹಾವೇರಿಯಲ್ಲಿ  ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಅವರು …

Read More »

ಜೈಲಿಗೆ ಬರುವಾಗ ಊಟ ಕೇಳಿದ – ಜೀಪ್‌ ನಿಲ್ಲಿಸುತ್ತಿದ್ದಂತೆ ಸಿಬ್ಬಂದಿಗೆ ಹಲ್ಲೆ ಮಾಡಿ ಪರಾರಿಯಾದ ಆರೋಪಿ

ಶಿವಮೊಗ್ಗ: ಕಲಬುರಗಿ ಜೈಲಿನಿಂದ  ಖೈದಿಗಳು ಪರಾರಿಯಾದ ಘಟನೆ ಮಾಸುವ ಮುನ್ನವೇ ಶಿವಮೊಗ್ಗದಲ್ಲಿ  ಸಹ ಅಂತಹದ್ದೇ ಒಂದು ಪ್ರಕರಣ ನಡೆದಿದೆ. ಜೈಲಿಗೆ ಕರೆದೊಯ್ಯುತ್ತಿದ್ದ ಆರೋಪಿಯೊಬ್ಬ ಅರಣ್ಯ ಇಲಾಖೆ ಸಿಬ್ಬಂದಿಗೆ  ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಹೊಸನಗರ  ತಾಲೂಕಿನ ಅಡುಗೋಡಿ ನಿವಾಸಿ ವೆಂಕಟೇಶ್ (36) ಅರಣ್ಯ ಇಲಾಖೆ ವಶದಿಂದ ಪರಾರಿಯಾದ ಆರೋಪಿ. ಈತ 2019-20 ರಲ್ಲಿ ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಚಕ್ರಪಾಣಿ ಅವರ ಮೇಲೆ ಹಲ್ಲೆ ಮಾಡಿದ …

Read More »

ನಗರದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಬೆಳಗಾವಿ : ನಗರದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಫ್ಲೈಓವರ್ (ಮೇಲ್ಸೇತುವೆ) ಯೋಜನೆಯ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ  ಲೋಕೋಪಯೋಗಿ ಇಲಾಖೆಯು 4 ರಿಂದ5 ಕಿಮೀ ದೂರದ ಫ್ಲೈಓವರ್ ಯೋಜನೆಯ ಮೊದಲ ಹಂತಕ್ಕೆ 270 ಕೋಟಿ ರೂ. ಬಿಡುಗಡೆ ಮಾಡಿರುವ ಹಿನ್ನೆಲಟೆ ಟೆಂಡರ್ ಕರೆಯಲಾಗಿದೆ. …

Read More »

ಕೈಗಾರಿಕೆ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಿ

ಬೆಳಗಾವಿ  :ಬೆಳಗಾವಿ ನಗರ, ಗ್ರಾಮೀಣ ಭಾಗದ ಕೈಗಾರಿಕೆ ಪ್ರದೇಶಗಳಲ್ಲಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆ ತಕ್ಷಣ ಪರಹರಿಸಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ  ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು. ನಗರದ ಹೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ನಡುವಿನ ಸಮನ್ವಯ ಕೊರತೆ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷೃದಿಂದಾಗಿ ಕೈಗಾರಿಕೆ ಉದ್ಯಮಿದಾರರು ಸಮಸ್ಯೆ ಎದುರಿಸುತ್ತಿರುವುದು ಮೇಲ್ನೋಟಕ್ಕೆ ಅನುಮಾನ ವ್ಯಕ್ತವಾಗಿದೆ. ನಿಮ್ಮ …

Read More »

ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ, ಯುವಕ ಪೊಲೀಸ್ ವಶಕ್ಕೆ

ಸುಬ್ರಹ್ಮಣ್ಯ: ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಕಲ್ಲಾಜೆ ದೇವನಹಳ್ಳಿ ಎಂಬಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಅಪ್ರಾಪ್ತ ಪುತ್ರಿ ಜು.7ರಂದು ಯೇನೆಕಲ್ಲು ಗ್ರಾಮದ ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದು, ಜು.9ರಂದು ಮನೆಗೆ ಹಿಂದಿರುಗಿದ್ದಳು. ಈ ವೇಳೆ ಸ್ನೇಹಿತೆಯ ಮನೆಯಲ್ಲಿ ಇದ್ದಾಗ, ಕಲ್ಲಾಜೆ ದೇವನಹಳ್ಳಿ ನಿವಾಸಿ ಮೋಕ್ಷಿತ್ ಎಂಬಾತ ಮನೆ ಸಮೀಪಕ್ಕೆ ಕರೆದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, …

Read More »

ಪ್ರೇಮ ವೈಫಲ್ಯಕ್ಕೆ ಇಬ್ಬರು ಬಲಿ: ಬೆಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿ ಹತ್ಯೆ

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದ ಇಬ್ಬರು ಯುವತಿಯರು ಭಗ್ನ ಪ್ರೇಮಿಗಳಿಂದ ಹತ್ಯೆಗೀಡಾಗಿದ್ದಾರೆ. ಪ್ರೀತಿಸಲು ನಿರಾಕರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಅಮೃತಾಳನ್ನು ((24) ಬೆಂಗಳೂರಿನ ಜೀವನ್ ಭೀಮಾನಗರದ ಕೋಡಿಹಳ್ಳಿಯಲ್ಲಿ ನಡುರಸ್ತೆಯಲ್ಲೇ ಅಡ್ಡಗಟ್ಟಿದ ಸಹೋದರರಿಬ್ಬರು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವಿಲ್ಸನ್​ಗಾರ್ಡ್​ನ ನಿವಾಸಿ ಧನುಷ್(24) ಹಾಗೂ ಆತನ ಸಹೋದರ ಸೂರ್ಯ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಜು.13ರಂದು ನಡೆದ ಘಟನೆಯಲ್ಲಿ ತೀವ್ರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜು.15ರ ಸಂಜೆ ಮೃತಪಟ್ಟಿದ್ದಾಳೆ. ಆರೋಪಿಗಳ …

Read More »

ಬೆಳಗಾವಿ ಯೂನಿಯನ್ ಜಿಮ್ಖಾನಾ ಭೂಮಿಯನ್ನು ವಶಕ್ಕೆ ಪಡೆದ ರಕ್ಷಣಾ ಸಚಿವಾಲಯ

ಬೆಳಗಾವಿ: 23 ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಂತ್ಯ ಕಂಡಿದೆ. ಅಕ್ರಮವಾಗಿ ವಶದಲ್ಲಿದ್ದ ಬೆಳಗಾವಿಯ ಯೂನಿಯನ್ ಜಿಮ್ಖಾನಾ ರಕ್ಷಣಾ ಇಲಾಖೆ ಭೂಮಿಯನ್ನು ರಕ್ಷಣಾ ಸಚಿವಾಲಯವು 2026ರ ಜುಲೈ 16 ರಂದು ಮರಳಿ ವಶಕ್ಕೆ ಪಡೆದುಕೊಂಡಿದೆ. ಏನಾಯಿತು? ರಕ್ಷಣಾ ಎಸ್ಟೇಟ್ಸ್ ಕಚೇರಿ, ಕರ್ನಾಟಕ ವಲಯದ ಅಧಿಕಾರಿ ದಿವ್ಯಾ ಎಸ್. ಹೊಸೂರು ನೇತೃತ್ವದಲ್ಲಿ ಬೆಳಗಾವಿಯಲ್ಲಿರುವ ಸರಿಸುಮಾರು 6.50 ಎಕರೆ ಅಮೂಲ್ಯ ರಕ್ಷಣಾ ಭೂಮಿಯನ್ನು ವಶಕ್ಕೆ ಪಡೆಯಲಾಯಿತು. 2002ರಲ್ಲಿ ಗುತ್ತಿಗೆ ಅವಧಿ ಮುಗಿದ …

Read More »