Breaking News

ಬಸವ ಜಯಂತಿ ಉತ್ಸವ ಪ್ರಯುಕ್ತ 19 ರಂದು “ಸಮಾನತೆಗಾಗಿ” ಬೃಹತ್ ಬೈಕ್ ರ್ಯಾಲಿ

Spread the love

ಬೆಳಗಾವಿ: ಬಸವ ಜಯಂತಿ ನಿಮಿತ್ತ ಇದೆ ರವಿವಾರ ದಿನಾಂಕ 19 ರಂದು ಬೃಹತ್ ಬೈಕ್ ರ್ಯಾಲಿಯನ್ನು ಬೆಳಗಾವಿ ಮಹಾನಗರದಲ್ಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ-2026 ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರಿಂದು ಬೆಳಗಿನ 8:00 ಗಂಟೆಗೆ ಶಹಾಪೂರ ಗೋವಾವೇಸ ಬಸವೇಶ್ವರ ಸರ್ಕಲ್ ದಿಂದ ಆರಂಭವಾಗುವ ಈ ರ್ಯಾಲಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೈಕ್ ಗಳು ಮತ್ತು ಕಾರುಗಳು ಭಾಗಿಯಾಗಲಿವೆ. ಬಸವಣ್ಣನವರು ಸಾರಿದ ಸಮಾನತೆಗಾಗಿ ಈ ರ್ಯಾಲಿಯನ್ನು ಆಯೋಜಿಸಲಾಗಿದ್ದು ಸಮಾಜದ ಸಮಸ್ತ ಜನ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದವರು ವಿನಂತಿಸಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಸ್ವಾಮೀಜಿಯವರು, ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ , ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಡಾ.
ಪ್ರಭಾಕರ್ ಕೋರೆ ಅವರುಗಳು ಚಾಲನೆ ನೀಡಲಿದ್ದಾರೆ. ಬೆಳಗಾವಿಯ ಮಹಾಪೌರ ಶ್ರೀಮತಿ. ಪ್ರೀತಿ ಕಾಮಕರ್, ಉಪಮಹಾಪೌರ ಹನುಮಂತ ಕೊಂಗಾಲಿ, ಶಾಸಕರಾದ ಅಭಯ್ ಪಾಟೀಲ್, ರಾಜು ಸೇಠ ಮತ್ತು ನಗರ ಸೇವಕರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದವರು ವಿವರಿಸಿದರು.
ರ್ಯಾಲಿಯೂ ಬಸವೇಶ್ವರ ಸರ್ಕಲದಿಂದ ಆರಂಭವಾಗಿ ತಿಳಕವಾಡಿ, ಅನುಗೋಳ, ವಡಗಾವ್ ,ಖಾಸಬಾಗ್, ಶಹಪುರ್ , ಕಪಿಲೇಶ್ವರ ರೋಡ್, ಕರ್ನಾಟಕ ಚೌಕ್, ರವಿವಾರಪೇಟೆ, ಖಡೆ ಬಾಜಾರ್, ಮಾರುತಿ ಗಲ್ಲಿ , ರಾಮದೇವ್ ಗಲ್ಲಿ, ಕಾಲೇಜು ರಸ್ತೆ , ಚೆನ್ನಮ್ಮ ಸರ್ಕಲ್, ಸಿವಿಲ್ ಆಸ್ಪತ್ರೆ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ , ಲಿಂಗಾಯಿತ ಭವನ, ಶ್ರೀನಗರ ಗಾರ್ಡನ್, ರಾಣಿ ಚೆನ್ನಮ್ಮ ಸೊಸೈಟಿ, ಸಾಯಿ ಮಂದಿರ, ಬಾಲ ಭವನ, ಲೌಡೇಲ ಸ್ಕೂಲ್, ಮಹಾಂತೇಶ್ ನಗರ ಬಸ್ ನಿಲ್ದಾಣ, ಪಿ & ಟಿ ಕ್ವಾಟರ್ಸ್, ಸಿದ್ನಾಳ ಕ್ರಾಸ್ , ಕೆಎಂಎಫ್ ಡೈರಿ, ದತ್ತ ಮಂದಿರ, ಲಿಂಗಾಯಿತ ಸಂಘಟನೆ ಮೈದಾನದವರೆಗೆ ಬಂದು ಫ.ಗು. ಹಳಕಟ್ಟಿ ಭವನದಲ್ಲಿ ಕೊನೆಗೊಳ್ಳಲಿದೆ ಈ ಬೃಹತ್ ರ್ಯಾಲಿಯಲ್ಲಿ ಸಮಸ್ತ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.
ಪ್ರಶ್ನೆ ಒಂದಕ್ಕೆ ಉತ್ತರಿಸಿದ ಶ್ರೀಮತಿ.ರತ್ನಪ್ರಭಾ ಬೆಲ್ಲದ ಅವರು ನಾವೆಲ್ಲ ಒಂದಾಗಿದ್ದು ಬಸವಪರ ಸಂಘಟನೆಗಳೆಲ್ಲ ಸೇರಿ ಬಸವ ಜಯಂತಿ ಆಚರಿಸಲಾಗುತ್ತದೆ ಈ ವಿಷಯದಲ್ಲಿ ಯಾವುದೇ ಡನ್ನ ಅಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾ ಪರಿಷತ್ತಿನಲ್ಲಿ ಶ್ರೀಮತಿ. ರತ್ನಪ್ರಭಾ ಬೆಲ್ಲದ,ಈರಣ್ಣ ದೇಯಣ್ಣವರ್, ಕಿರಣ್ ಅಗಡಿ, ರಮೇಶ್ ತುಬಚಿ, ಶಂಕರ್ ಗುಡಸ, ಎಸ್‌.ಜಿ. ಸಿದ್ನಾಳ, ಆನಂದ್ ಗುಡಸ್ , ಪ್ರೇಮ ಚೌಗಲಾ , ಮನೋಹರ ಪುಡಕಲಕಟ್ಟಿ, ಬಾಲಚಂದ್ರ ಬಾಗಿ,ಅಶೋಕ್ ಬೆಂಡಿಗೇರಿ, ಮುರಗೆಪ್ಪ ಬಾಳಿ ಮತ್ತು ಸಿ.ಎಂ.ಬೂದಿಹಾಳ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜಗತ್ತಿನ ಹಸಿವು ತಣಿಸುವ ಅನ್ನದಾತನಿಗೆ ಸರ್ಕಾರದ ಅಸಡ್ಡೆ; ಹೋರಾಟಕ್ಕಿಳಿದ ರೈತ ಸಂಘ

Spread the loveಬಿಸಿಲು ಮಳೆ ಎನ್ನದೇ ತನ್ನ ಜಮೀನಿನಲ್ಲಿ ಶ್ರಮವಹಿಸಿ ಜಗತ್ತಿನ ಹಸಿವು ತಣಿಸುವ ಕಾಯಕ ಅನ್ನದಾತನದ್ದು.‌ ಆದ್ರೆ ಅನ್ನದಾತನಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ