ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 308 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ.
ಕರುನಾಡಿಗೆ’ ಶನಿ’ವಾರ ಕಂಟಕವಾಗಿದೆ. ಇಪ್ಪತ್ತಾಲ್ಕು ಗಂಟೆಯಲ್ಲಿ 308 ಜನರಿಗೆ ಸೋಂಕು ತಗುಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ.
ಸೋಂಕಿತರ ಜಿಲ್ಲಾವಾರು ವಿವರ:
- ಉಡುಪಿಯ 14
- ಕಲಬುರಗಿ – 67
- ಯಾದಗಿರಿ -52
- ಬೀದರ್ – 42
- ಬೆಂಗಳೂರು ನಗರ- 31
- ದಕ್ಷಿಣ ಕನ್ನಡ -30
- ಧಾರವಾಡ – 20
- ಹಾಸನ-11
- ಬಳ್ಳಾರಿ-11
- ವಿಜಯಪುರ-06
- ರಾಯಚೂರ-05
- ಉತ್ತರ ಕನ್ನಡ-05
- ಕೋಲಾರ್-04
- ದಾವಣಗೆರೆ-03
- ಮಂಡ್ಯ-02
- ಹಾವೇರಿ-02
- ಮೈಸೂರು-01
- ಬಾಗಲಕೋಟೆ-01
- ರಾಮನಗರ-01
ಸಧ್ಯ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 6824ಕ್ಕೆ ಏರಿಕೆಯಾಗಿದೆ. ಇಂದು 209 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ3,648 ಒಟ್ಟು ಮಂದಿ ಗುಣಮುಖರಾಗಿದ್ದಾರೆ.ಇಲ್ಲಿಯವರೆಗೆ 81 ಜನರು ಕೊರೊನಾಗೆ ಬಲಿಯಾಗಿದ್ದಾರೆ.